ನಿಮ್ಮದು ಮೀನ ರಾಶಿಯೇ..?? ಹಾಗಾದರೆ ತಿಳಿಯಿರಿ ಮೀನ ರಾಶಿಯ 2020 ರ ಭವಿಷ್ಯ ;ಶ್ರೀ ಗಣಪತಿ ಭಟ್ 8088827292 -Vishwanews24

ನಟನೆ, ನಾಟಕ, ಲಲಿತಕಲೆ, ಸೃಜನಶೀಲ ಕೆಲಸ, ಫೋಟೋಗ್ರಫಿ, ಸಾಮಾಜಿಕ ಸೇವೆ, ಮಾಹಿತಿ ತಂತ್ರಜ್ಞಾನ, ಸಿವಿಲ್ ಎಂಜಿನಿಯರಿಂಗ್, ವಿಧಾನ ಮತ್ತು ಕಾನೂನು, ಸಾಮಾಜಿಕ ಸೇವೆ ಮತ್ತು ಸೇವಾ ಪೂರೈಕೆದಾರ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರು ಅಥವಾ ಕಾರ್ಯವನ್ನು ಮಾಡುತ್ತಿರುವ ಜನರಿಗೆ ಈ ವರ್ಷ ಬಹಳಷ್ಟು ಉತ್ತಮವಾಗಿರುತ್ತದೆ. ಈ ವರ್ಷ ಕೇವಲ ನೀವು ನಿಮ್ಮ ಕೆಲಸದಲ್ಲಿ ಪ್ರಗತಿಯನ್ನು ಪಡೆಯುವುದಲ್ಲದೆ, ಕೆಲಸದ ಈ ಕಾರಣದಿಂದ ಮಾತ್ರ ನಿಮ್ಮ ಗೌರವವು ಕೂಡ ಹೆಚ್ಚಾಗುತ್ತದೆ. ಕೆಲವು ಜನರಿಗೆ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ ಮತ್ತು ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಜನರು, ಅವರು ಉತ್ತಮ ಫಲಿತಾಂಶಗಳನ್ನು ಪಡೆಯುವದರೊಂದಿಗೆ ಬಡ್ತಿಯನ್ನು ಪಡೆಯುವ ಬಲವಾದ ಸಾಧ್ಯತೆ ಇದೆ.
ವೃತ್ತಿ ಜೀವನ
ಮೀನಾ ರಾಶಿ ಭವಿಷ್ಯ 2020 ಪ್ರಕಾರ ವರ್ಷದ ಆರಂಭವು ನಿಮಗಾಗಿ ಬಹಳಷ್ಟು ಉತ್ತಮವಾಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಜನವರಿ 30 ರಿಂದ ಮಾರ್ಚ್ ವರೆಗೆ ಬಹಳಷ್ಟು ಮಟ್ಟಿಗೆ ಅನುಕೂಲಕರವಾಗಿರುತ್ತದೆ ಮತ್ತು ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದರಿಂದ ನೀವು ಮುಂದುವರಿಯುತ್ತೀರಿ. ಅದರ ನಂತರ ಜೂನ್ 30ರವರೆಗಿನ ಸಮಯವು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ನೀವು ಹಿರಿಯ ಅಧಿಕಾರಿಗಳೊಂದಿಗೆ ಇನ್ನಷ್ಟು ನಿಕಟವಾಗಿರುತ್ತೀರಿ. ಈ ಕಾರಣದಿಂದಾಗಿ ಕಾಲ ಕಾಲಕ್ಕೆ ನೀವು ಲಾಭ ಮತ್ತು ಸೌಲಭ್ಯಗಳನ್ನು ಪಡೆಯುತ್ತೀರಿ. ನಿಮ್ಮಲ್ಲಿ ಕೆಲವರು ಈ ವರ್ಷ ಉನ್ನತ ಹುದ್ದೆಗೆ ಬಡ್ತಿಯನ್ನು ಪಡೆಯಬಹುದು.

ಆರ್ಥಿಕ ಜೀವನ
ಮೀನಾ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ಆರ್ಥಿಕತೆಯತ್ತ ದೃಷ್ಟಿಯನ್ನಿಡುವುದಾದರೆ ನಿಮಗೆ ಈ ವರ್ಷ ಬಹಳಷ್ಟು ಮಟ್ಟಿಗೆ ಉತ್ತಮವಾಗಿರುತ್ತದೆ. ಆದ್ದರಿಂದ, ಸಿದ್ಧತೆಗಳಿಗೆ ಸಿದ್ಧರಾಗಿ ಮತ್ತು ಈ ಅವಧಿಯ ಸಂಪೂರ್ಣ ಲಾಭ ಪಡೆಯಲು ಯಾವುದೇ ಅವಕಾಶವನ್ನು ಕೈ ಬಿಡಬೇಡಿ. ವರ್ಷದ ಆರಂಭದಲ್ಲಿಯೇ ಜನವರಿ 24ರಂದು ಶನಿ ದೇವ ನಿಮ್ಮ ಹನ್ನೊಂದನೇ ಮನೆಯಲ್ಲಿ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ದೀರ್ಘಾವಧಿಯ ಲಾಭವು ಪ್ರಾರಂಭವಾಗುತ್ತದೆ ಮತ್ತು ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದರಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಇದಲ್ಲದೆ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರಿಗೆ ಮತ್ತು ವಿದೇಶ ವ್ಯಾಪಾರ ಮಾಡುವ ಜನರು ಅತ್ಯಂತ ಹೆಚ್ಚು ಲಾಭವನ್ನು ಪಡೆಯಬಹುದು.

ಶಿಕ್ಷಣ
ಮೀನ ರಾಶಿ ಭವಿಷ್ಯ 2020ರ ಪ್ರಕಾರ, ಈ ವರ್ಷವು ಮೀನ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಬಹಳಷ್ಟು ಉತ್ತಮವಾಗಿರುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿದ್ದರೆ ವರ್ಷದ ಆರಂಭದಿಂದ ಮಾರ್ಚ್ 30 ಮತ್ತು ಅದರ ನಂತರ ಜೂನ್ 30ರಿಂದ ನವೆಂಬರ್ 20ರವರೆಗಿನ ಸಮಯ ನಿಮಗಾಗಿ ಸಾಕಷ್ಟು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಇಚ್ಛೆಯಂತೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಕೌಟುಂಬಿಕ ಜೀವನ
ಮೀನ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ಕುಟುಂಬ ಜೀವನವು ಏರಿಳಿತಗಳಿಂದ ಕೂಡಿರುತ್ತದೆ, ಏಕೆಂದರೆ ನಿಮ್ಮ ನಾಲ್ಕನೇ ಮನೆಯಲ್ಲಿ ಸೆಪ್ಟೆಂಬರ್ ಮಧ್ಯದವರೆಗೆ ರಾಹುವಿನ ಉಪಸ್ಥಿತಿ ಇರುತ್ತದೆ. ಇದು ನಿಮ್ಮನ್ನು ಸಂಪೂರ್ಣವಾಗಿ ಮನೆಯ ಸುಖವನ್ನು ತೆಗೆದುಕೊಳ್ಳಲು ತಡೆಯಲು ಪ್ರಯತ್ನಿಸುತ್ತದೆ. ನೀವು ಕೆಲಸದಲ್ಲಿ ಹೆಚ್ಚು ಕಾರ್ಯನಿರತರಾಗಿರುತ್ತೀರಿ, ಇದರಿಂದಾಗಿ ಕುಟುಂಬಕ್ಕೆ ಕಡಿಮೆ ಸಮಯ ನೀಡುವಿರಿ.

ವೈವಾಹಿಕ ಜೀವನ 
ಮೀನ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನದಲ್ಲಿ ಈ ವರ್ಷ ನೀವು ಅನೇಕ ರೀತಿಯ ಅನುಭವಗಳನ್ನು ಹೊಂದುವಿರಿ. ಮಾರ್ಚ್ 30ರಿಂದ ಜೂನ್ 30ರವರೆಗಿನ ಸಮಯವೂ ಪ್ರೀತಿಯ ಜೀವನದಲ್ಲಿ ಬಹಳಷ್ಟು ನೆಮ್ಮದಿಯನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಸಂಬಂಧದಲ್ಲಿ ಸ್ವಾಭಾವಿಕತೆಯು ನೆಲೆಗೊಳ್ಳುತ್ತದೆ. ನಿಮ್ಮಲ್ಲಿ ಪರಸ್ಪರ ಹೊಂದಾಣಿಕೆಯು ಇನ್ನಷ್ಟು ಉತ್ತಮವಾಗಲಿದೆ. ಮತ್ತು ನೀವಿಬ್ಬರು ಒಟ್ಟಾಗಿ ಸೇರಿ ಉತ್ತಮ ದಾಂಪತ್ಯ ಜೀವನವನ್ನು ಮುಂದುವರಿಸುತ್ತೀರಿ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯವು ಕೂಡಿಬರಲಿದೆ . ಜೂನ್ 30 ರಿಂದ ನವೆಂಬರ್ 20ರ ಮಧ್ಯದ ಪರಿಸ್ಥಿತಿಗಳು ಸ್ವಲ್ಪ ಒತ್ತಡವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ.ನಿಮ್ಮ ಅತ್ತೆಮನೆ ಮನೆಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿ ಮತ್ತು ಅವರೊಂದಿಗೆ ಚೆನ್ನಾಗಿ ವರ್ತಿಸಿ.

ಪ್ರೀತಿ ಜೀವನ

ಮೀನ ರಾಶಿ ಭವಿಷ್ಯ 2020 ರ ಪ್ರಕಾರ, ವರ್ಷದ ಆರಂಭವು ಪ್ರೀತಿ ಸಂಬಂಧಗಳಿಗೆ ಅನುಕೂಲಕರವಾಗಿವೆ ಮತ್ತು ಈ ಕಾರಣದಿಂದ ನಿಮ್ಮ ಪ್ರೀತಿ ಜೀವನ ಸರಾಗವಾಗಿ ಸಾಗುತ್ತದೆ. ವರ್ಷದ ಆರಂಭದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚು ಕಾರ್ಯನಿರತರಾಗಿರುತ್ತೀರಿ, ಇದರ ಕಾರಣದಿಂದಾಗಿ ನಿಮ್ಮಿಂದ ನಿಮ್ಮ ಪ್ರೀತಿಪಾತ್ರರಿಗೆ ಕಡಿಮೆ ಸಮಯವನ್ನು ನೀಡುತ್ತೀರಿ. ಇದರಿಂದಾಗಿ ನಿಮ್ಮ ಮಧ್ಯೆ ಅಂತರ ಹೆಚ್ಚಾಗಿ ನಿಮ್ಮ ನಡುವಿನ ಸಾಮರಸ್ಯವು ಹದಗೆಡದಂತೆ ನೋಡಿಕೊಳ್ಳಿ.

ಆರೋಗ್ಯ
ಈ ವರ್ಷ ನೀವು ಆರೋಗ್ಯಕ್ಕೆ ಸಂಬಂಧಿಸಿದಂತೆ ಮಿಶ್ರಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ನಿಮ್ಮ ಆರೋಗ್ಯದಲ್ಲಿ ಏರಿಳಿತವುಂಟಾಗಬಹುದು. ಆದರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸದು.ಆದರೂ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಮಾನಸಿಕವಾಗಿ ನೀವು ಬಹಳಷ್ಟು ಮಟ್ಟಿಗೆ ಸದೃಢರಾಗಿರುತ್ತೀರಿ. ಈ ಮೊದಲು ಯಾವುದಾದರೂ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರೆ ಅದೂ ನಿವಾರಣೆಯಾಗುವುದು.

ವಿಶೇಷ ಜ್ಯೋತಿಷ್ಯ ಪರಿಹಾರಗಳು

  • ಈ ವರ್ಷ ನೀವು ಬಾಳೆ ಅಥವಾ ಅಶ್ವತ್ಥ ಮರಕ್ಕರ ಗುರುವಾರದ ದಿನ ನೀರನ್ನು ಹಾಕಬೇಕು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅಶ್ವತ್ಥ ಮರವನ್ನು ಮುಟ್ಟದೆ ನೀರನ್ನು ಅರ್ಪಿಸಿ.
  • ಸಾಧ್ಯವಾದರೆ ಪ್ರತಿಯೊಂದು ಗುರುವಾರ ಉಪವಾಸವನ್ನು ಆಚರಿಸಿ ಮತ್ತು ಪ್ರತಿದಿನ ಹಣೆಯ ಮೇಲೆ ಕೇಸರಿ ತಿಲಕವನ್ನು ಇಟ್ಟುಕೊಳ್ಳಿ. ನೀವು ಉಪವಾಸವಿದ್ದು ಬಾಳೆಹಣ್ಣನ್ನು ತಿನ್ನದಿರುವುದು ಒಳ್ಳೆಯದು.
  • ಸಾಧ್ಯವಾದಲ್ಲಿ ಬ್ರಾಹ್ಮಣರಿಗೆ ಆಹಾರ ಮತ್ತು ದಕ್ಷಿಣೆಯನ್ನು ನೀಡಿ, ಯಾರಿಗೂ ಸುಳ್ಳು ಭರವಸೆ ನೀಡಬೇಡಿ.
  • ಗುರು ಯಂತ್ರ ಸ್ಥಾಪನೆಯನ್ನು ಮಾಡಬಹುದು, ಇದು ಗುರುವಿನ ಕೆಟ್ಟ ಪ್ರಭಾವದಿಂದಾಗುವ ನಷ್ಟ, ಜ್ಞಾನ ಮತ್ತು ಅದೃಷ್ಟದ ಬೆಳವಣಿಗೆ ಮತ್ತು ಜೀವನದಲ್ಲಿ ಹಣಕಾಸು ಮತ್ತು ಸಮೃದ್ಧಿಯನ್ನು ಪಡೆಯುವಲ್ಲಿ ಪ್ರಯೋಜನಕಾರಿ.
Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago