Featured

ನಿಮ್ಮ ಕೈ, ಕಾಲಿನ ಪಾದಗಳು ಅತಿಯಾಗಿ ಬೆವರುತ್ತಿವೆಯೇ?: ಹಾಗಿದ್ದರೆ ಈ ಮನೆಮದ್ದುಗಳನ್ನು ಬಳಸಿ – Vishwanews24

ನಿಮ್ಮ ಕೈಕಾಲಿನ  ಪಾದಗಳು ಅತಿಯಾಗಿ ಬೆವರುತ್ತಿವೆಯೇ?, ಹಾಗಿದ್ದರೆ ಇದರಿಂದ  ಈ ಮನೆಮದ್ದುಗಳನ್ನು ಬಳಸಿ ನೋಡಿ…..

ತೆಂಗಿನೆಣ್ಣೆ: ತೆಂಗಿನೆಣ್ಣೆಯು ಕೈಗಳು ಮತ್ತು ಪಾದಗಳನ್ನು ತೇವಗೊಳಿಸುತ್ತದೆ ಮತ್ತು ಬೆವರುವಿಕೆಯನ್ನು ತಡೆಯುತ್ತದೆ. ಅದು ಬೆವರು ಮತ್ತು ವಾಸನೆಯನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಮತ್ತು ತನ್ನ ನೈಸರ್ಗಿಕ ಸುಗಂಧದಿಂದಾಗಿ ನಿಮ್ಮನ್ನು ತಾಜಾ ಆಗಿರಿಸುತ್ತದೆ. ಸ್ನಾನದ ಬಳಿಕ ಸ್ವಲ್ಪ ತೆಂಗಿನೆಣ್ಣೆಯಲ್ಲಿ ಪೀಡಿತ ಜಾಗಗಳಿಗೆ ಹಚ್ಚಿಕೊಂಡರೆ ಸಾಕು.

ಚಹಾ: ಚಹಾ ಯಾವುದೇ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ ಮತ್ತು ಚರ್ಮದಲ್ಲಿಯ ರಂಧ್ರಗಳನ್ನು ಕಿರಿದಾಗಿಸಿ ನೀವು ಕಡಿಮೆ ಬೆವರುವಂತೆ ಮಾಡುತ್ತದೆ. ಕೆಲವು ಬ್ಲಾಕ್ ಟೀ ಬ್ಯಾಗ್‌ಗಳನ್ನು ಬಿಸಿನೀರಿನಲ್ಲಿ ಮುಳುಗಿಸಿ ಬಳಿಕ ಅವನ್ನು ಹೊರತೆಗೆದು ತಣ್ಣಗಾದ ಬಳಿಕ ಪಾದಗಳ ಮೇಲಿರಿಸಿಕೊಳ್ಳಿ.

ತಣ್ಣೀರು: ಪ್ರತಿ ದಿನ 20 ನಿಮಿಷಗಳ ಕಾಲ ನಿಮ್ಮ ಕೈಗಳು ಮತ್ತು ಕಾಲುಗಳನ್ನು ತಣ್ಣೀರಿನಲ್ಲಿ ಮುಳುಗಿಸಿ. ಇದು ಬಹುಮಟ್ಟಿಗೆ ಸಮಸ್ಯೆಯನ್ನು ಬಗೆಹರಿಸುತ್ತದೆ

ಗಂಧದ ಹುಡಿ: ಜನರು ಬಹು ಹಿಂದಿನಿಂದಲೂ ಅರೆದ ಗಂಧವನ್ನು ಹಣೆಗೆ ಹಚ್ಚಿಕೊಳ್ಳುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಗಂಧವು ತಂಪನ್ನುಂಟು ಮಾಡುವ ಗುಣವನ್ನು ಹೊಂದಿದೆ. ಗಂಧದ ಹುಡಿಗೆ ನೀರು,ಲಿಂಬೆರಸ ಅಥವಾ ಪನ್ನೀರು ಬೆರೆಸಿ ಪೇಸ್ಟ್ ಅನ್ನು ತಯಾರಿಸಿಕೊಳ್ಳ್ಳಿ. ಇದನ್ನು ಬೆವರುವ ಸ್ಥಳಗಳಲ್ಲಿ ಲೇಪಿಸಿ,ಒಣಗಿದ ಬಳಿಕ ತೊಳೆದುಕೊಳ್ಳಿ.

ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾ ತನ್ನ ಕ್ಷಾರಗುಣದಿಂದಾಗಿ ಪಾದಗಳು ಮತ್ತು ಅಂಗೈಗಳ ಪಿಎಚ್ ಸಮತೋಲನಕ್ಕೆ ನೆರವಾಗುತ್ತದೆ. ಬೆವರುವಿಕೆಯನ್ನು ಮತ್ತು ಪಾದಗಳ ಕೆಟ್ಟ ವಾಸನೆಯನ್ನು ಕಡಿಮೆ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಬೇಕಿಂಗ್ ಸೋಡಾ ಕರಗಿಸಿ,15-20 ನಿಮಿಷಗಳ ಕಾಲ ಪಾದಗಳನ್ನು ಮುಳುಗಿಸಿ

ಲಿಂಬೆ: ಲಿಂಬೆ ಮತ್ತು ಕಿತ್ತಳೆ ಸಿಪ್ಪೆಗಳನ್ನು ಚೆನ್ನಾಗಿ ಒಣಗಿಸಿ ಬಳಿಕ ಹುಡಿ ಮಾಡಿ ಕೈಕಾಲುಗಳ ಮೇಲೆ ಉದುರಿಸಿಕೊಂಡರೆ ಬೆವರುವಿಕೆ ಕಡಿಮೆಯಾಗುತ್ತದೆ. ಲಿಂಬೆ ರಸವನ್ನು ಉಪ್ಪಿನೊಂದಿಗೆ ಮಿಶ್ರಗೊಳಿಸಿ ಕೈಗಳಿಗೆ ಉಜ್ಜಿಕೊಳ್ಳಿ ಮತ್ತು ಅದು ಒಣಗಿದ ಬಳಿಕ ತೊಳೆೆದುಕೊಳ್ಳಿ. ಈ ವಿಧಾನವೂ ಬೆವರುವಿಕೆಯನ್ನು ತಗ್ಗಿಸುತ್ತದೆ.

ವಿನೆಗರ್: ವಿನೆಗರ್ ಆಮ್ಲೀಯ ಸ್ವರೂಪ ಹೊಂದಿರುವುದರಿಂದ ಅದು ನಿಮ್ಮ ಅಂಗೈಗಳು ಮತ್ತು ಪಾದಗಳ ಮೇಲಿರುವ ಯಾವುದೇ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಬೆಚ್ಚಗಿನ ನೀರಿನಲ್ಲಿ ವಿನೆಗರ್ ಬೆರೆಸಿ ಅದರಲ್ಲಿ ಸುಮಾರು 15ರಿಂದ 30 ನಿಮಿಷಗಳ ಕಾಲ ಕೈಗಳು ಮತ್ತು ಪಾದಗಳನ್ನಿರಿಸಿ. ಉತ್ತಮ ಪರಿಣಾಮಕ್ಕಾಗಿ ಆಯಪಲ್ ಸಿಡೆರ್ ವಿನೆಗರ್ ಬಳಸಿ.

ಪನ್ನೀರು: ಹತ್ತಿಯಿಂದ ಸಾವಯವ ಪನ್ನೀರನ್ನು ನಿಮ್ಮ ಅಂಗೈಗಳು ಮತ್ತು ಪಾದಗಳಿಗೆ ಲೇಪಿಸಿಕೊಳ್ಳಿ. ಅದು ನಿಮ್ಮ ಚರ್ಮಕ್ಕೆ ತಂಪಿನ ಅನುಭವವನ್ನೂ ನೀಡುತ್ತದೆ

ಕಾರ್ನ್ ಸ್ಟಾರ್ಚ್: ನೀವು ಟಾಲ್ಕಂ ಪೌಡರ್ ಬಳಸುವ ರೀತಿಯಲ್ಲೇ ಕಾರ್ನ್ ಸ್ಟಾರ್ಚ್‌ನ್ನು ಅಂಗೈಗಳು ಮತ್ತು ಪಾದಗಳ ಮೇಲೆ ಉದುರಿಸಿಕೊಳ್ಳಿ. ಇದು ಬೆವರನ್ನು ಹೀರಿಕೊಳ್ಳುತ್ತದೆ ಮತ್ತು ಕೈಗಳು ಹಾಗೂ ಪಾದಗಳನ್ನು ಒಣದಾಗಿರಿಸುತ್ತದೆ.

ಟೊಮೆಟೊ ರಸ: ಟೊಮೆಟೊ ರಸವು ಶರೀರಕ್ಕೆ ತಂಪು ಅನುಭವ ನೀಡುವುದರೊಂದಿಗೆ ಬೆವರುವುದನ್ನು ಕಡಿಮೆ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸಬಹುದು ಅಥವಾ ಕೈಗಳಿಗೆ ಲೇಪಿಸಿಕೊಳ್ಳಬಹುದು. ಅದರಲ್ಲಿ ಸೋಡಿಯಂ ಸಹ ಇರುವುದರಿಂದ ಕೈಗಳು ಮತ್ತು ಪಾದಗಳು ಒಣದಾಗಿರುತ್ತವೆ.

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago