Featured

ನಿಮ್ಮ ಮಗು ಕಾರ್ಟೂನ್ ನೋಡುತ್ತಾ..?? ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ನಿಮ್ಮ ಕಂದನ ಭವಿಷ್ಯ ; ಓದಿ ಈ ವರದಿ _Vishwanews24

ಆಧುನಿಕ ಜಗತ್ತಿನಲ್ಲಿ ಕಾರ್ಟೂನ್‌ಗಳು ತುಂಬಾ ಜನಪ್ರಿಯತೆಗಳನ್ನು ಗಳಿಸಿದೆ. ಈ ಕಾರ್ಟೂನ್‌ಗಳು ಮಕ್ಕಳಿಗೆ ಹಗಲು ರಾತ್ರಿ ದೂರದರ್ಶನ ವೀಕ್ಷಿಸುವ ಚಪಲವನ್ನು ಹೆಚ್ಚಿಸಿವೆ. ಕಾರ್ಟೂನ್‌ಗಳ ಇಂಪಾದ ಸಂಗೀತ ಪ್ರಭಾವವನ್ನು ಬೀರುತ್ತವೆಂಬುದು ಕೆಲವು ಸಂಶೋಧನೆಗಳಿಂದ ವ್ಯಕ್ತವಾಗಿದೆ. ಇದರಿಂದ ಕೆಟ್ಟ ಪರಿಣಾಮವೇ ಹೆಚ್ಚು ಎಂಬುದು ಬೆಳಕಿಗೆ ಬಂದಿದೆ.

ಭಾವನಾತ್ಮಕ ಮಾನಸಿಕ ಹಾಗೂ ಸಾಮಾಜಿಕ ವಲಯಗಳಲ್ಲಿ ನಡೆಸಿದ ಸಂಶೋಧನೆಯಿಂದಲೂ ಈ ದುಷ್ಪರಿಣಾಮಗಳು ಹೆಚ್ಚು ಎಂದು ಕಂಡು ಬಂದಿದೆ. ಸಂಶೋಧಕರ ಪ್ರಕಾರ ಅತಿಯಾದ ಕಾರ್ಟೂನ್ ವೀಕ್ಷಣೆಯಿಂದ ಮಕ್ಕಳಲ್ಲಿ ಹಠಮಾರಿತನ, ಒಂಟಿಯಾಗಿ ಇರಲು ಇಚ್ಛಿಸುವುದು, ಅತಿಯಾದ ತುಂಟಿತನ, ಸಿಡುಕುವುದು ಕಾಣಬಹುದು.

ಕಾರ್ಟೂನ್ ಅಥವಾ ಆಯನಿಮೇಟೆಡ್ ವಿಡಿಯೋಗಳನ್ನು ಮಕ್ಕಳಿಗೆ ತೋರಿಸುವುದು ತಪ್ಪಲ್ಲ. ಆದರೆ ಮುಂದೆ ಅದುವೇ ಅಭ್ಯಾಸವಾಗಿ ಬಿಟ್ಟರೆ ತುಂಬಾ ಕಷ್ಟ. ಇಂದಿನ ಕಾಲದ ಮಕ್ಕಳ ಜೀವನದ ದೈನಂದಿನ ಭಾಗವಾಗಿ ಪರಿವರ್ತನೆಯಾಗಿದೆ ಈ ಕಾರ್ಟೂನ್. ಅತಿಯಾದ ಕೆಲಸದ ಒತ್ತಡದಲ್ಲಿ ಮುಳುಗಿರುವ ಪೋಷಕರಿಗೆ ಮಗುವಿನೊಂದಿಗೆ ಕುಳಿತು ಹರಟೆ ಹೊಡೆಯುವಷ್ಟು ಪುರುಸೊತ್ತು ಇರುವುದಿಲ್ಲ.

ಕೆಲಸ ಬಿಟ್ಟು ಮನೆಗೆ ಬಂದರೂ ಸಮಯ ಸಿಗುವುದಿಲ್ಲ. ಮನೆಗೆ ಬಂದ ಅಪ್ಪ ಆಫೀಸ್ ಕೆಲಸದಲ್ಲಿ ಮುಳುಗಿದ್ದರೆ ಅಮ್ಮ ಮನೆಯ ಕೆಲಸದಲ್ಲಿ ಬ್ಯುಸಿ. ಅಂಥಹ ಸಮಯದಲ್ಲಿ ಮಗುವಿನ ಕಿರಿಕಿರಿ ಕಡಿಮೆ ಮಾಡಲು ಕಾರ್ಟೂನ್ ಮೊರೆ ಹೋಗುತ್ತಾರೆ. ಮಗುವಿನ ತಿಂಡಿ, ಊಟ, ಬರೆಯುವುದು ಎಲ್ಲಾ ಕಾರ್ಟೂನ್ ನೋಡಿಕೊಂಡು ಎನ್ನುವಷ್ಟು ಅವರಿಗೆ ಅದು ಅಭ್ಯಾಸವಾಗಿ ಬಿಡುತ್ತದೆ.

ಸದಾ ಕಾಲ ಕಾರ್ಟೂನ್ ಅಥವಾ ಆಯನಿಮೇಟೆಡ್ ವಿಡಿಯೋಗಳನ್ನು ನೋಡುವುದರಿಂದ ಮಕ್ಕಳ ಮೇಲೆ ಆಗುವ ಕೆಟ್ಟ ಪರಿಣಾಮಗಳನ್ನು ಮರೆಯದಿರಿ. ಕಾರ್ಟೂನ್ ನೋಡುವುದರಿಂದ ಮಕ್ಕಳ ಕಲ್ಪನಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಅವರಿಗೆ ಕಲ್ಪನೆ ಮಾಡಿಕೊಳ್ಳುವುದಕ್ಕೆಲ್ಲಾ ಅವಕಾಶಗಳೇ ಇರುವುದಿಲ್ಲ. ಒಂದೂರಿನಲ್ಲಿ ರಾಜ ಇದ್ದ ಎಂದು ನಮ್ಮ ಅಜ್ಜಿ ಕಥೆ ಹೇಳುವಾಗ ನಮಗೆ ಆ ರಾಜನ ಕಲ್ಪನೆ ಬರುತ್ತಿತ್ತು.

ವಾಸ್ತವವಾಗಿ ನಾವು ರಾಜನನ್ನೇ ನೋಡಿರುವುದಿಲ್ಲ! ಆದರೆ ಈಗ ಅದೆಲ್ಲಾ ಈಗ ಕಾರ್ಟೂನ್ ನಲ್ಲಿ ಕಾಣುವಾಗ ಕಲ್ಪನೆ ಮಾಡುವ ಸಂದರ್ಭವೇ ಬರುವುದಿಲ್ಲ. ಒಂದೇ ಕಡೆ ಕುಳಿತು ಕಾರ್ಟೂನ್ ನೋಡುವುದರಿಂದ ಮಕ್ಕಳು ಜಡ ಭರಿತರಾಗುತ್ತಾರೆ. ಬೇರೆ ಏನನ್ನೂ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ.

ಇನ್ನು ಕಾರ್ಟೂನ್ ಎರಡನೆಯದಾಗಿ ಮಕ್ಕಳ ದೈಹಿಕ ಚಟುವಟಿಕೆಯ ಮೇಲೆ ಗಾಢವಾದ ಪರಿಣಾಮ ಬೀರುವುದು ಸುಳ್ಳಲ್ಲ. ನಾಲ್ಕು ಗೋಡೆಯ ಮಧ್ಯೆ ಕುಳಿತು ಟಿವಿ ಅಥವಾ ಲ್ಯಾಪ್ ಟಾಪ್ ನೋಡುವ ಕಾರಣ ಅವರಿಗೆ ಹೊರ ಜಗತ್ತಿನ ಅರಿವೇ ಇರುವುದಿಲ್ಲ. ಯಾವುದೇ ಆಟ ಆಡಲು ಮನಸ್ಸು ಬಯಸದ ಕಾರಣ ದೈಹಿಕವಾದ ವ್ಯಾಯಾಮಗಳು ಕೂಡ ಆಗುವುದಿಲ್ಲ. ಯಾವಾಗಲೂ ನಿರುತ್ಸಾಹದಿಂದ ಇರುವಂತೆ ಕಾಣುತ್ತದೆ.

ಬೆಳೆಯುತ್ತಿರುವ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ರೂಪಿಸುವುದಕ್ಕಾಗಿ ಸಮಾಜದಲ್ಲಿ ಬೆರೆಯುವುದು ಮುಖ್ಯ. ಆದರೆ ಕಾರ್ಟೂನ್ ನೋಡುವುದು ಒಂದು ಚಟವಾಗಿ ಪರಿವರ್ತನೆಯಾಗುವುದರಿಂದ ಮಕ್ಕಳು ಅದರಿಂದ ಹೊರ ಬರಲು ಸುತರಾಂ ಒಪ್ಪುವುದಿಲ್ಲ. ಏನು ಬೇಕಾದರೂ ಬಿಟ್ಟೇನು, ಆದರೆ ಕಾರ್ಟೂನ್ ಬಿಡಲಾರೆ ಎಂಬ ನಿರ್ಧಾರ ಮಾಡಿದರೂ ಸಂಶಯವಿಲ್ಲ.

ಜೊತೆಗೆ ಯಾರೊಂದಿಗೂ ಬೆರೆಯುವುದಕ್ಕೆ ಇಷ್ಟ ಪಡುವುದಿಲ್ಲ. ಬದಲಿಗೆ ಏಕಾಂಗಿಯಾಗಿ ಇರಲು ಬಯಸುವುದೇ ಹೆಚ್ಚು. ಮಕ್ಕಳಿಗೆ ಯಾರೊಂದಿಗೆ ಹೇಗೆ ಮಾತನಾಡಬೇಕು ಎಂಬ ವಿಷಯದೇ ಅರಿವೇ ಇರುವುದಿಲ್ಲ. ಒಂದು ವೇಳೆ ಯಾರಾದರೂ ಮನೆಗೆ ಬಂದರೆ ಅಥವಾ ಕಾಣ ಸಿಕ್ಕರೆ ಜಸ್ಟ್ ಹಾಯ್ ಅಥವಾ ಹಲೋ ಎಂದು ಅವರ ಉತ್ತರಕ್ಕೆ ಕಾಯದೇ ಮರೆಯಾಗುವ ಕಾಲ ಇದು..!

ನಿಮ್ಮ ಮಕ್ಕಳು ಇದೇ ರೀತಿ ಕಾರ್ಟೂನ್ ನೋಡುತ್ತಿದ್ದರೆ ಎಚ್ಚರ ವಹಿಸಬೇಕಾದುದು ಅಗತ್ಯ. ಅದು ಅಭ್ಯಾಸವಾಗದಂತೆ ಜಾಗ್ರತೆ ವಹಿಸಿ. ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ನಿಮ್ಮ ಕಂದನ ಭವಿಷ್ಯ ಅಡಗಿದೆ. ಪ್ರತಿ ಹಂತದಲ್ಲೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಇದರಲ್ಲೂ ಯೋಚಿಸಬೇಕಾದುದು ಅಗತ್ಯ.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

1 day ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago