Featured

ನಿಮ್ಮ ಸಮಸ್ಯೆಯಿಂದ ಬಹುಬೇಗ ಪಾರಾಗಲು ಈ ಮಹಾಮೃತ್ಯುಂಜಯ ಮಂತ್ರ ಜಪಿಸಿ -Vishwanews24

ವೇದಗಳಲ್ಲಿ ಅತ್ಯಂತ ಪ್ರಮುಖ ಅಥವಾ ಜನಜನಿತ ಮಂತ್ರಗಳಲ್ಲಿ ಮೃತ್ಯುಂಜಯ ಮಂತ್ರವು ಒಂದು. ಯಮನನ್ನೇ ಜಯಿಸಿದವ ಎನ್ನುವ ಅರ್ಥವನ್ನು ಈ ಮಂತ್ರ ನೀಡುತ್ತದೆ. ದೈಹಿಕವಾಗಿ ಕಾಯಿಲೆಯುಳ್ಳವರು. ಮಾನಸಿಕ ನೆಮ್ಮದಿ ಕಳೆದುಕೊಂಡವರು, ಆತಂಕಕ್ಕೆ ಒಳಗಾದವರು, ವಿಪತ್ತು ಬರಬಹುದೆಂಬ ಭಯವುಳ್ಳವರು ಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ಬಹುಬೇಗ ಸಮಸ್ಯೆಯಿಂದ ಪಾರಾಗಬಹುದು.

ಮೃತ್ಯುಂಜಯ ಮಂತ್ರದಿಂದ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅನೇಕ ಉಪಯೋಗವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಮೃತ್ಯುಂಜಯ ಮಂತ್ರವನ್ನು “ಸಾವು ವಿಜಯದ” ಮಂತ್ರ ಅಥವಾ “ತ್ರಯಂಬಕಮ್ ಮಂತ್ರ” ಎಂದು ಕರೆಯುತ್ತಾರೆ. ಮಹಾ ಮೃತ್ಯಂಜಯ ಮಂತ್ರವು ಶಿವನಿಗೆ ಸಮರ್ಪಿತವಾಗಿದೆ. ಇದನ್ನು ಮಾರ್ಕಂಡೇಯ ಋಷಿ ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಇದು ಮಾರ್ಕಂಡಯ್ಯವರಿಗೆ ಮಾತ್ರ ತಿಳಿದಿರುವ ರಹಸ್ಯದ ಮಂತ್ರವಾಗಿತ್ತು ಎನ್ನಲಾಗುತ್ತದೆ. ರಾಜ ದಕ್ಷನಿಂದ ಚಂದ್ರನು ಶಾಪಕ್ಕೆ ಒಳಗಾಗಿ ತನ್ನ ಪ್ರಕಾಶವನ್ನು ಕಳೆದುಕೊಂಡಿದ್ದನು. ಆ ಸಂದರ್ಭದಲ್ಲಿ ಋಷಿ ಚಂದ್ರನನ್ನು ರಕ್ಷಿಸಲು ಸತಿಗೆ ಈ ಮಂತ್ರವನ್ನು ಹೇಳಿಕೊಟ್ಟನು ಎನ್ನಲಾಗುತ್ತದೆ.

ಮೃತ್ಯುಂ ಜಯತೀತಿ ಮೃತ್ಯುಂಜಯ’ ಎಂದರೆ ಅಪಮೃತ್ಯುವನ್ನು ಗೆಲ್ಲಿಸಬಲ್ಲ ಶಿವನೆಂದರ್ಥ ವೇದಮಂತ್ರದಲ್ಲಿ ಹೀಗೆ ಹೇಳಿದೆ.

ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ|
ಉರ್ವಾರುಕುಮಿವ ಬಂಧನಾತ್
ಮೃತ್ಯೋರ್ಮುಕ್ಷೀಯ ಮೂಮೃತಾತ್||

ಮಂತ್ರದ ಸಂಪೂರ್ಣ ಅರ್ಥ

ನಮ್ಮ ಎರಡೂ ಕಣ್ಣುಗಳ ಹಿಂದಿರುವ ನಮ್ಮ ಮೂರನೇ ಕಣ್ಣಿನ ಮೇಲೆ ನಾವು ಕೇಂದ್ರೀಕರಿಸಬೇಕು ಹಾಗೂ ಇದು ನಿಮಗೆ ಭಾವಿಸುವ ಶಕ್ತಿಯನ್ನು ನೀಡುತ್ತದೆ ಹಾಗೂ ಇದರ ಮೂಲಕ ನಾವು ಸಂತೋಷಕರವಾಗಿ, ತೃಪ್ತಿಉಳ್ಳವರಾಗಿ ಹಾಗೂ ಜೀವನದಲ್ಲಿ ಶಾಂತಿಯನ್ನು ಪಡೆಯುತ್ತೇವೆ.

ಅಮರತ್ವ ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ ಆದರೆ ನಮ್ಮ ಮರಣಕ್ಕೆ ಕೆಲವು ವಿಸ್ತಾರವನ್ನು ನಿಮ್ಮ ಶಕ್ತಿಯ ಮೂಲಕ ನೀಡಬಹುದು ಶಿವ ದೇವರೇ ಎಂದಾಗಿದೆ.

ಈ ಮಂತ್ರವು ಒಂದು ಉಪಯುಕ್ತ ಮಂತ್ರವಾಗಿದೆ ಹಾಗೂ ಭಯಂಕರ ಕಾಯಿಲೆಯನ್ನು ಹೊಂದಿರುವವರು ಮತ್ತು ಶೀಘ್ರ ಮರಣದ ಹೆದರಿಕೆ ಉಳ್ಳವರಿಗೆ ಯಶಸ್ವಿ ಮಂತ್ರವಾಗಿದೆ. ಈ ಮಂತ್ರವು ಹೆಚ್ಚಿನ ಶಕ್ತಿಯ ರೂಪವನ್ನು ಹೊಂದಿದ್ದು ಹಾಗೂ ಗಾಯತ್ರಿ ಮಂತ್ರವನ್ನು ಸಹ ಇದು ಸೂಚಿಸುತ್ತದೆ ಮತ್ತು ಈ ಮಂತ್ರವನ್ನು ಪಠಿಸಿದಾಗ ವ್ಯಕ್ತಿಯು ತನ್ನ ದೇಹದ ಮೂಲಕ ಮಾಡುವ ಕೆಲಸಕ್ಕೆ ಹೆಚ್ಚಿನ ಶಕ್ತಿ ಉಂಟಾದ ಅನುಭವ ಆತನಿಗೆ ಉಂಟಾಗುತ್ತದೆ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ

ಜ್ಯೋತಿಷ್ಯರು ಗಣಪತಿ ಭಟ್
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
8088827292

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು ಯಾವುದೇ ಮಂತ್ರದಂತೆ ಈ ಮಂತ್ರವನ್ನೂ ಅತಿ ಪ್ರಾಮಾಣಿಕತೆಯಿಂದ, ಭಕ್ತಿಯಿಂದ ಮತ್ತು ಪೂರ್ಣ ಶ್ರದ್ಧೆಯಿಂದ ದೇವರನ್ನೇ ಧ್ಯಾನಿಸಿ ಪಠಿಸಿದಾಗ ಮಾತ್ರ ಇದು ಶಿವನಿಗೆ ಕೇಳುತ್ತದೆ. ಇದನ್ನು ಪಠಿಸಲು ಅತ್ಯುತ್ತಮವಾದ ಸಮಯವೆಂದರೆ ಮುಂಜಾನೆಯ ಬ್ರಹ್ಮಮುಹೂರ್ತ ಅಂದರೆ ಸರಿಯಾಗಿ ನಾಲ್ಕು ಗಂಟೆಗೆ. ದಿನದ ಇತರ ಸಮಯಗಳಲ್ಲಿಯೂ ಇದನ್ನು ಪಠಿಸುವುದು ಉತ್ತಮ. ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು ಪ್ರತಿದಿನ ನಿಮ್ಮ ಉದ್ಯೋಗಗಳಿಗೆ ಅಥವಾ ವೃತ್ತಿನಿಮಿತ್ತ ಮನೆಯಿಂದ ಹೊರಡುವ ಮುನ್ನ, ಯಾವುದಾದರೂ ಶುಭಕಾರ್ಯಕ್ಕೆ ಅಥವಾ ಅಗತ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ, ರಾತ್ರಿ ಮಲಗುವ ಮುನ್ನ, ಯಾವುದೇ ಔಷಧಿ ಸೇವಿಸುವ ಮುನ್ನ ಈ ಮಂತ್ರವನ್ನು ಕನಿಷ್ಟ ಒಂಭತ್ತು ಬಾರಿ ಪಠಿಸಬೇಕು. ನಿಮ್ಮ ವಾಹನವನ್ನು ಚಲಾಯಿಸಲು ತೊಡಗುವ ಮುನ್ನ ಅಥವಾ ಪ್ರಯಾಣದ ವಾಹನ ಚಾಲನೆಗೂ ಮುನ್ನ ಈ ಮಂತ್ರವನ್ನು ಮೂರು ಬಾರಿ ಪಠಿಸಬೇಕು.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು ದಿನದ ಇತರ ಯಾವುದೇ ಬಿಡುವಿನ ವೇಳೆಯಲ್ಲಿ ನೂರಾಎಂಟು ಬಾರಿ ಪ್ರತಿದಿನ ಪಠಿಸುವ ಮೂಲಕ ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಸ್ನಾನದ ಬಳಿಕ ದೇಹಕ್ಕೆ ಹಚ್ಚಿಕೊಳ್ಳುವ ವಿಭೂತಿ, ಭಸ್ಮ, ಪವಿತ್ರ ಬೂದಿ, ಚಂದನ ಅಥವಾ ಕುಂಕುಮವನ್ನು ಹಚ್ಚಿಕೊಳ್ಳುವಾಗಲೂ ಈ ಮಂತ್ರವನ್ನು ಪಠಿಸಬೇಕು.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago