ನಿಯಂತ್ರಣ ತಪ್ಪಿದ ಸ್ಯಾಂಟ್ರೋಕಾರ್ ಬೈಕ್ ಗೆ ಡಿಕ್ಕಿ ,ಯಕ್ಷಗಾನ ಕಲಾವಿದ ಸಾವು.
ಉಡುಪಿ: ನಿಯಂತ್ರಣ ತಪ್ಪಿದ ಸ್ಯಾಂಟ್ರೋ ಕಾರೊಂದು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸಾವಾರ ಮೃತಪಟ್ಟ ಘಟನೆ ನಡೆದಿದೆ.
ಉಡುಪಿಯ ಆಶೀರ್ವಾದ್ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಮೃತ ಬೈಕ್ ಸಾವಾರ ಬನ್ನಾಡಿ ಉದಯ್ ಅಚಾರ್(೪೦) ಎನ್ನುವವರಾಗಿದ್ದಾರೆ.
ಸಂತಕಟ್ಟೆ ಭಾಗದಿಂದ ಉಡುಪಿ ಕಡೆ ಅತೀವೇಗದಿಂದ ಬಂದ ಸ್ಯಾಂಟ್ರೋ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಏರಿ ಬೈಕಿಗೆ ಡಿಕ್ಕಿ ಹೊಡೆದಿದೆ.ಅ ಬಳಿಕ ಮುಂದೆ ಚಲಿಸಿ ಬೊಲೆರೋ ಜೀಪೊಂದಕ್ಕೆ ಡಿಕ್ಕಿ ಹೊಡೆದು ನಿಂತಿತು.ಅಫಘಾತ ರಭಸಕ್ಕೆ ಬೈಕ್ ಸಾವಾರ ಉದಯ್ ಅಚಾರ್ ರಸ್ತೆಗೆ ಎಸೆಯಲ್ಪಟ್ಟಿದ್ದು ,ತೀವ್ರವಾಗಿ ರಕ್ತಸ್ರಾವ ಉಂಟಾಗಿದೆ.ಕೂಡಲೇ ಅವರನ್ನ ಅದರ್ಶ ಅಸ್ಪತ್ರೆಗೆ ದಾಖಲಿಸಿಲಾಗಿದೆ.ಅದ್ರೆ ಅಷ್ಟರಲ್ಲಿ ಪ್ರಾಣ ಪಕ್ಷಿಹಾರಿ ಹೋಗಿತ್ತು.
ಬನ್ನಾಡಿಯ ಉದಯ್ ಅಚಾರ್ ವೃತ್ತಿಯಲ್ಲಿ ಮೆಡಿಕಲ್ ರೆಪ್ ಅಗಿದ್ದು .ಯಕ್ಷಗಾನ ಕಲಾವಿದರೂ ಕೂಡ ಅಗಿದ್ದರು.
ವಡ್ಡರ್ಸೆಯ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿಯ ಕಲಾವಿದರಾಗಿದ್ದರು.
ನಾಳೆ ಕಾಂಜರಹಳ್ಳಿ ವನದುರ್ಗಾ ದೇವಸ್ಥಾನದಲ್ಲಿ ಜೋಡಿ ಸ್ಪರ್ಧೆಗೆ ಬಣ್ಣ ಹಾಕುವವರಿದ್ದರು.
ಯಕ್ಷಗಾನ ರಂಗದಲ್ಲಿ ತನ್ನದೇ ಅದ ಅಭಿಮಾನಬಳಗವನ್ನು ಹೊಂದಿರುವ ಉದಯ್ ಅಚಾರ್ ಅಭಿಮಾನ್ಯು ವೇಷದ ಮೂಲಕ ಹೆಸರು ವಾಸಿಯಾಗಿದ್ದರು.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…