ಬೆಂಗಳೂರು: ಎಲ್ಲಾ ಬಿಜೆಪಿ ನಾಯಕರಲ್ಲೂ ಧರ್ಮದ ಡ್ರಗ್ಸ್ ನಶೆ ಮಿತಿಮೀರಿ ಹೋಗಿದ್ದು ನೂಪುರ್ ಶರ್ಮಾ ರ ಅಪಮಾನಕಾರಿ ಹೇಳಿಕೆ ಒಂದು ಸಣ್ಣ ನಿದರ್ಶನವಷ್ಟೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಆಕ್ರೋಶವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ” ಬಿಜೆಪಿ ನಾಯಕರ ಧರ್ಮ ದ್ವೇಷದ ಹೇಳಿಕೆಗಳು ವಿಶ್ವ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ. ನೂಪರ್ ಶರ್ಮಾರ ಅಪಮಾನಕಾರಿ ಹೇಳಿಕೆ ಒಂದು ಸಣ್ಣ ನಿದರ್ಶನವಷ್ಟೆ. ಈಗ ಎಲ್ಲಾ ಬಿಜೆಪಿ ನಾಯಕರಲ್ಲೂ ಧರ್ಮದ ಡ್ರಗ್ಸ್ ನಶೆ ಮಿತಿಮೀರಿ ಹೋಗಿದೆ. ಬಿಜೆಪಿ ನಾಯಕರ ಮಾತುಗಳು ದೇಶದ ಗೌರವ ಹಾಳು ಮಾಡುತ್ತಿರುವುದಲ್ಲದೆ,ದೇಶವನ್ನು ಸರ್ವನಾಶಕ್ಕೆ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದ್ದಾರೆ.
ಧರ್ಮ ಶ್ರೇಷ್ಟತೆಯ ವ್ಯಸನ ಅತ್ಯಂತ ಅಪಾಯಕಾರಿ. ಬಿಜೆಪಿ ನಾಯಕರು ಈ ವ್ಯಸನಕ್ಕೆ ತುತ್ತಾಗಿರುವುದಲ್ಲದೆ, ಈ ವ್ಯಸನವನ್ನು ಇಡೀ ದೇಶಾದ್ಯಾಂತ ಸಾಂಕ್ರಾಮಿಕದಂತೆ ಹರಡುತ್ತಿದ್ದಾರೆ.ದೇಶದಲ್ಲಿ ಈಗ ದ್ವೇಷದ ವಾತಾವರಣವಿದೆ. ಇದರಿಂದ ದೇಶದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ. ಬಿಜೆಪಿಯವರು ಭಾರತವನ್ನು ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ಉಚ್ಛ ಸ್ಥಾನದಲ್ಲಿರು ಬಿಜೆಪಿಯ ಎಲ್ಲಾ ನಾಯಕರ ತಲೆಯಲ್ಲೂ ಧರ್ಮಾಂಧತೆಯ ಅಮಲು ತುಂಬಿದೆ. ನೂಪುರ್ ತಮ್ಮ ನಾಯಕರ ಅಂತರ್ಗತ ಭಾವನೆಯನ್ನೇ ಮಾತುಗಳ ಮೂಲಕ ಹೊರಹಾಕಿ ಹಿರಿಯಕ್ಕನ ಚಾಳಿ ಅನುಸರಿಸಿದ್ದಾರಷ್ಟೆ. ಏನೇ ಆದರೂ ಬಿಜೆಪಿಯವರ ಈ ಧೋರಣೆ ದೇಶದ ಸ್ವಾಸ್ಥ್ಯಕ್ಕೆ ಪೂರಕವಲ್ಲ. ಇನ್ನಾದರೂ ಬದಲಾಗಿ ಬಿಜೆಪಿಯವರೇ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್…
15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ : ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ…
ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…
ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…
ಉಡುಪಿ:ಮಾದಕ ದ್ರವ್ಯ ಪ್ರಕರಣ : ಪಿಐಟಿ ಎನ್ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…
ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…