ಮುಂಬೈ: ಬಾಲಿವುಡ್ ಪ್ರಖ್ಯಾತ ಕಿರುತೆರೆ ನಟ ಕುಶಾಲ್ ಪಂಜಾಬಿ(37) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮುಂಬೈ ನಿವಾಸದಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಸುದ್ದಿಯನ್ನು ಕಿರುತೆರೆ ನಟ ಕರಣ್ವೀರ್ ಬೊಹ್ರಾ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡು, ನಿನ್ನ ನಿಧನ ನನ್ನನ್ನು ಶಾಕ್ಗೆ ದೂಡಿದೆ. ಈ ಕ್ಷಣದವರೆಗೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದರೊಂದಿಗೆ ಅನೇಕ ಬಾಲಿವುಡ್ ಕಲಾವಿದರು ಸಹ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಇನ್ನು ಪೊಲೀಸರಿಗೆ ಘಟನಾ ಸ್ಥಳದಲ್ಲಿ ಡೆತ್ನೋಟ್ ಲಭ್ಯವಾಗಿದ್ದು, ಸಾವಿಗೆ ಯಾರೂ ಹೊಣೆಯಲ್ಲ ಎಂದು ಬರೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ. ಅಲ್ಲದೆ, ಖಿನ್ನತೆಯಿಂದ ಬಳಲುತ್ತಿದ್ದರು. ಆದರೆ, ಇಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಊಹೆ ಮಾಡಿರಲಿಲ್ಲ ಎಂದು ಸಹ ಕಲಾವಿದ ಚೇತನ್ ಹನ್ಸರಾಜ್ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇಶ್ಕ್ ಮೆಂ ಮರ್ಜಾವಾಂ, ಮೌಥ್ ಫುಲ್ ಆಫ್ ಸ್ಕೈ, ಲವ್ ಮ್ಯಾರೇಜ್, ದೇಖೋ ಮಗರ್ ಪ್ಯಾರ್ ಸೆ, ಕಭೀ ಹಾಂ ಕಭೀ ನಾಂ,.ಯೆ ದಿಲ್ ಚಾಹೇ ಮೋರ್, ಫಿಯರ್ ಫ್ಯಾಕ್ಟರ್, ಕಸಂ ಸೆ, ಅಂತರಿಕ್ಷ್, ಹಮ್ ತುಮ್, ಜೋರ್ ಕಾ ಜಟ್ಕಾ, ಆಸ್ ಮಾನ್ ಸೆ ಆಗೆ, ತೇರಿ ಮೇರಿ ಲವ್ ಸ್ಟೋರಿ ಹಾಗೂ ರಾಜಾ ಕೀ ಆಯೇಗಿ ಬಾರಾತ್ ಮೊದಲಾದ ಧಾರವಾಹಿ ಹಾಗೂ ಕಿರುತೆರೆ… ಕಾರ್ಯಕ್ರಮಗಳಲ್ಲಿ ನಟಿಸಿದ್ದರು. ಇನ್ನು ಸಲಾಂ ಎ ಇಶ್ಕ್, ಧನ್ ಧನಾ ಧನ್ ಗೋಲ್, ಕ್ರೀಜಿ ಕುಕ್ಕಡ್ ಫ್ಯಾಮಿಲಿ, ಹಮ್ ಕೋ ಇಶ್ಕ್ ನೆ ಮಾರಾ ಮೊದಲಾದ ಸಿನಿಮಾಗಲ್ಲೂ ನಟಿಸಿದ್ದರು….
‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…
ವೋಟರ್ ಲಿಸ್ಟ್ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…
ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ…
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…
ಉಡುಪಿ: ಆ.14 ರಂದು ನೇರ ಸಂದರ್ಶನ ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೆöÊವೇಟ್ ಲಿ.ನಲ್ಲಿ…
ಮೀನುಗಾರರಿಗೆ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ ಕುಂದಾಪುರ: ರಾಜ್ಯದ ಸಾಂಪ್ರದಾಯಿಕ ನಾಡ ದೋಣಿ…