Featured

ನೈಜ ಕಲಾಕಾರರಿಗೆ ಬೆಂಬಲಿಸುವ ಉದ್ದೇಶ- ಮಣಿಪಾಲದಲ್ಲಿ ಘರ್ ಬೈ ಮಾಲ್ಶಿ ಸಂಸ್ಥೆಯಿಂದ ನವೆಂಬರ್‌ 1 ಕ್ಕೆ ಹಸ್ತಕಲಾ ಕಾರ್ಯಕ್ರಮ:- vishwanews24

ನೈಜ ಕಲಾಕಾರರಿಗೆ ಬೆಂಬಲಿಸುವ ಉದ್ದೇಶ- ಮಣಿಪಾಲದಲ್ಲಿ ಘರ್ ಬೈ ಮಾಲ್ಶಿ ಸಂಸ್ಥೆಯಿಂದ ನವೆಂಬರ್‌ 1 ಕ್ಕೆ ಹಸ್ತಕಲಾ ಕಾರ್ಯಕ್ರಮ:- vishwanews24

ಉಡುಪಿ: ಆಧುನಿಕತೆಯಲ್ಲಿ ಕಳೆದು ಹೋಗುತ್ತಿರುವ ನಮ್ಮ ನೆಲದ ಕಲೆಯನ್ನು ಉಳಿಸುವ ಉದ್ದೇಶದಿಂದ ಒಂದು ಪ್ರಯತ್ನ “ಹಸ್ತಕಲೆ” ,ಭಾರತದ ಪುರಾತನವಾದ ಮತ್ತು ಹೆಚ್ಚು ಕರಕುಶಲಕಾರರನ್ನು ಉಳಿಸಿ ಬೆಳೆಸಬೇಕು,ಮುಂದಿನ ಪೀಳಿಗೆಗೆ ಸಮೃದ್ಧ ಕಲೆ ಹಸ್ತಾಂತರವಾಗಬೇಕು ಎಂಬ ಉದ್ದೇಶದಿಂದ ಒಂದು ಪ್ರಯತ್ನ ನಿರಂತರ ನಡೆಯುತ್ತಿದ್ದು ನಮ್ಮ ನೆಲದ ನೈಜ ಕಲಾಕಾರರಿಗೆ ಬೆಂಬಲ ಕೊಡುವ ಉದ್ದೇಶದ “ಹಸ್ತಕಲಾ”: ಕಾರ್ಯಕ್ರಮವನ್ನು ನವೆಂಬರ್ 1 -2021 ರಂದು ಮಣಿಪಾಲದ ರೋಟರಿ ಸಭಾಭವನದಲ್ಲಿ ಒಂದು ದಿನದ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘರ್ ಬೈ ಮಾಲ್ಶಿ ಸಂಸ್ಥೆಯ ಸ್ಥಾಪಕಿ ಮಹಾಲಸ ಕಿಣಿ ತಿಳಿಸಿದರು.

ಮಗ್ಗದ ಸೀರೆ ನೇಯುವ, ಮಣ್ಣಿನ ವಿವಿಧ ಕಲಾಕೃತಿ ಆಟಿಕೆ ಉಪಯೋಗಿ ವಸ್ತುಗಳನ್ನು ತಯಾರಿಸುವ ಕುಂಬಾರರನ್ನು ಕರೆಸಿ ಆಸಕ್ತರಿಗೆ ತರಬೇತಿಯ ಆರಂಭದ ಕ್ಲಾಸುಗಳನ್ನು ಮಾಡಿಸಲಾಗುವುದು, ನೇಕಾರರು, ಅಚ್ಚುಕಲಾವಿದರ ಅನುಭವಗಳನ್ನು ವಿನಿಮಯ ಮಾಡುವ ಅವಕಾಶವಿದೆ. ಉಡುಪಿಯ ನೆಲದ ಸಂಸ್ಕೃತಿಯಾಗಿರುವ ನೇಕಾರಿಕೆ ಅಳಿವಿನಂಚಿಗೆ ಹೋಗುತ್ತಿದ್ದು ಅದನ್ನು ಉಳಿಸಬೇಕು ಬೆಳೆಸಬೇಕು ಎಂಬ ಉದ್ದೇಶದಿಂದ ಅವರು ತಯಾರಿಸಿದ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಸಲಾಗುವುದು, ಈ ಮೂಲಕ ಯುವ ಪೀಳಿಗೆಗೆ ಆಕರ್ಷಿತ ಆಗುವಂತಹ ಆಧುನಿಕ ಡಿಸೈನ್ ಗಳನ್ನು ಸೀರೆಗಳಲ್ಲಿ ತರುವ ಪ್ರಯತ್ನ ಮಾಡಲಾಗಿದೆ. ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಕನಿಷ್ಠ ಕಲಿಕಾ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದರು.

ಕಾರ್ಯಾಗಾರದ ಉದ್ಘಾಟನೆ ಮತ್ತು ಹಿರಿಯ ನೇಕಾರರಿಗೆ ಸನ್ಮಾನವನ್ನು ಮಣಿಪಾಲದ ಟಿ. ಅಶೋಕ್ ಪೈ ಬೆಳಗ್ಗೆ 10 ಕ್ಕೆ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ 7 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್ ,ಮಾಲ್ಕಿ ಸಂಸ್ಥೆಯ ಸದಸ್ಯರಾದ ಅನಿರುದ್ಧ, ವೈಷ್ಣವಿ, ಪವನ್ ಶೆಟ್ಟಿ, ಶ್ರೀದೇವಿ ಕುಲಾಲ್ ಉಪಸ್ಥಿತಿತರಿದ್ದರು.

ಕಾರ್ಯಕ್ರಮದ ವಿವರ

Block printing workshop
ಅಚ್ಚು ಕಲೆ ಕಾರ್ಯಾಗಾರ- ಬೆಳಗ್ಗೆ 11 ರಿಂದ 12

Pottery Workshop ಆವೆ ಮಣ್ಣಿನ ರಚನೆಗಳ ತರಬೇತಿ ಬೆಳಗ್ಗೆ 11 ರಿಂದ 4 ಗಂಟೆಯವರೆಗೆ, Tie and dye.

ಹೆಣೆಯುವ ಮತ್ತು ಅದಕ್ಕೆ ರಂಗು ತುಂಬುವ ಕಾರ್ಯಾಗಾರ 12 pm to 1 pm ನಡೆಯಲಿದೆ

ಮಗ್ಗದ ಮನೆಯ ಬಗ್ಗೆ ಮಾಹಿತಿ ಪ್ರಾಥಮಿಕ ತರಗತಿ.
Introductory workshop on handloom weaving to 5 pm to 6pm odd.

 

 

Vishwa News 24

Recent Posts

ಕಾಪು : ಟೈಮಿಂಗ್ಸ್ ವಿಚಾರದಲ್ಲಿ  ಉದ್ದೇಶಪೂರ್ವಕ ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ ; ನಾಲ್ವರ ಬಂಧನ -vishwanews24

ಕಾಪು : ಟೈಮಿಂಗ್ಸ್ ವಿಚಾರದಲ್ಲಿ  ಉದ್ದೇಶಪೂರ್ವಕ ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ - ನಾಲ್ವರ ಬಂಧನ ಕಾಪು : ಕಾಪು…

59 minutes ago

ಯುವಜನರಲ್ಲಿ ಹೆಚ್ಚುತ್ತಿರುವ HIV ಸೋಂಕು: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯ ..! vishwanews24

ಯುವಜನರಲ್ಲಿ ಹೆಚ್ಚುತ್ತಿರುವ HIV ಸೋಂಕು: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯ ..! ಬೆಂಗಳೂರು: ಯುವ ಜನರಲ್ಲಿ ಹೆಚ್‌ಐವಿ ಸೋಂಕಿನ…

3 hours ago

ಸಚಿವ ಯು.ಟಿ. ಖಾದರ್ ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ – vishwanews24

ಸಚಿವ ಯು.ಟಿ. ಖಾದರ್ ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

4 hours ago

ಸಿ. ಟಿ. ರವಿ ಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಸರಕಾರ : ಯಶ್ಪಾಲ್ ಸುವರ್ಣ – vishwanews24

ಸಿ. ಟಿ. ರವಿ ಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಸರಕಾರ :…

4 hours ago

ಮಂಗಳೂರು: ಡಿವೈಡರ್‌ಗೆ ಬಸ್  ಡಿಕ್ಕಿ; 35 ಪ್ರಯಾಣಿಕರು ಅಪಾಯದಿಂದ ಪಾರು – vishwanews24

ಮಂಗಳೂರು: ಡಿವೈಡರ್‌ಗೆ ಬಸ್  ಡಿಕ್ಕಿ; 35 ಪ್ರಯಾಣಿಕರು ಅಪಾಯದಿಂದ ಪಾರು ಮಂಗಳೂರು : ಖಾಸಗಿ ಎಕ್ಸ್‌ಪ್ರೆಸ್ ಬಸ್ಸೊಂದು ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ…

4 hours ago

ಕಾಪು  : ಟೈಮಿಂಗ್ಸ್ ವಿಚಾರದಲ್ಲಿ ಜಗಳ: ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ – vishwanews24

 ಕಾಪು  : ಟೈಮಿಂಗ್ಸ್ ವಿಚಾರದಲ್ಲಿ ಜಗಳ: ಎಕ್ಸ್‌ಪ್ರೆಸ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ ಕಾಪು: ಎರಡು ಎಕ್ಸ್‌ಪ್ರೆಸ್ ಬಸ್ಸುಗಳು ಪ್ರಯಾಣಿಕರು…

4 hours ago