Featured

ನೈಜ ಕಲಾಕಾರರಿಗೆ ಬೆಂಬಲಿಸುವ ಉದ್ದೇಶ- ಮಣಿಪಾಲದಲ್ಲಿ ಘರ್ ಬೈ ಮಾಲ್ಶಿ ಸಂಸ್ಥೆಯಿಂದ ನವೆಂಬರ್‌ 1 ಕ್ಕೆ ಹಸ್ತಕಲಾ ಕಾರ್ಯಕ್ರಮ:- vishwanews24

ನೈಜ ಕಲಾಕಾರರಿಗೆ ಬೆಂಬಲಿಸುವ ಉದ್ದೇಶ- ಮಣಿಪಾಲದಲ್ಲಿ ಘರ್ ಬೈ ಮಾಲ್ಶಿ ಸಂಸ್ಥೆಯಿಂದ ನವೆಂಬರ್‌ 1 ಕ್ಕೆ ಹಸ್ತಕಲಾ ಕಾರ್ಯಕ್ರಮ:- vishwanews24

ಉಡುಪಿ: ಆಧುನಿಕತೆಯಲ್ಲಿ ಕಳೆದು ಹೋಗುತ್ತಿರುವ ನಮ್ಮ ನೆಲದ ಕಲೆಯನ್ನು ಉಳಿಸುವ ಉದ್ದೇಶದಿಂದ ಒಂದು ಪ್ರಯತ್ನ “ಹಸ್ತಕಲೆ” ,ಭಾರತದ ಪುರಾತನವಾದ ಮತ್ತು ಹೆಚ್ಚು ಕರಕುಶಲಕಾರರನ್ನು ಉಳಿಸಿ ಬೆಳೆಸಬೇಕು,ಮುಂದಿನ ಪೀಳಿಗೆಗೆ ಸಮೃದ್ಧ ಕಲೆ ಹಸ್ತಾಂತರವಾಗಬೇಕು ಎಂಬ ಉದ್ದೇಶದಿಂದ ಒಂದು ಪ್ರಯತ್ನ ನಿರಂತರ ನಡೆಯುತ್ತಿದ್ದು ನಮ್ಮ ನೆಲದ ನೈಜ ಕಲಾಕಾರರಿಗೆ ಬೆಂಬಲ ಕೊಡುವ ಉದ್ದೇಶದ “ಹಸ್ತಕಲಾ”: ಕಾರ್ಯಕ್ರಮವನ್ನು ನವೆಂಬರ್ 1 -2021 ರಂದು ಮಣಿಪಾಲದ ರೋಟರಿ ಸಭಾಭವನದಲ್ಲಿ ಒಂದು ದಿನದ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘರ್ ಬೈ ಮಾಲ್ಶಿ ಸಂಸ್ಥೆಯ ಸ್ಥಾಪಕಿ ಮಹಾಲಸ ಕಿಣಿ ತಿಳಿಸಿದರು.

ಮಗ್ಗದ ಸೀರೆ ನೇಯುವ, ಮಣ್ಣಿನ ವಿವಿಧ ಕಲಾಕೃತಿ ಆಟಿಕೆ ಉಪಯೋಗಿ ವಸ್ತುಗಳನ್ನು ತಯಾರಿಸುವ ಕುಂಬಾರರನ್ನು ಕರೆಸಿ ಆಸಕ್ತರಿಗೆ ತರಬೇತಿಯ ಆರಂಭದ ಕ್ಲಾಸುಗಳನ್ನು ಮಾಡಿಸಲಾಗುವುದು, ನೇಕಾರರು, ಅಚ್ಚುಕಲಾವಿದರ ಅನುಭವಗಳನ್ನು ವಿನಿಮಯ ಮಾಡುವ ಅವಕಾಶವಿದೆ. ಉಡುಪಿಯ ನೆಲದ ಸಂಸ್ಕೃತಿಯಾಗಿರುವ ನೇಕಾರಿಕೆ ಅಳಿವಿನಂಚಿಗೆ ಹೋಗುತ್ತಿದ್ದು ಅದನ್ನು ಉಳಿಸಬೇಕು ಬೆಳೆಸಬೇಕು ಎಂಬ ಉದ್ದೇಶದಿಂದ ಅವರು ತಯಾರಿಸಿದ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಸಲಾಗುವುದು, ಈ ಮೂಲಕ ಯುವ ಪೀಳಿಗೆಗೆ ಆಕರ್ಷಿತ ಆಗುವಂತಹ ಆಧುನಿಕ ಡಿಸೈನ್ ಗಳನ್ನು ಸೀರೆಗಳಲ್ಲಿ ತರುವ ಪ್ರಯತ್ನ ಮಾಡಲಾಗಿದೆ. ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಕನಿಷ್ಠ ಕಲಿಕಾ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದರು.

ಕಾರ್ಯಾಗಾರದ ಉದ್ಘಾಟನೆ ಮತ್ತು ಹಿರಿಯ ನೇಕಾರರಿಗೆ ಸನ್ಮಾನವನ್ನು ಮಣಿಪಾಲದ ಟಿ. ಅಶೋಕ್ ಪೈ ಬೆಳಗ್ಗೆ 10 ಕ್ಕೆ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ 7 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್ ,ಮಾಲ್ಕಿ ಸಂಸ್ಥೆಯ ಸದಸ್ಯರಾದ ಅನಿರುದ್ಧ, ವೈಷ್ಣವಿ, ಪವನ್ ಶೆಟ್ಟಿ, ಶ್ರೀದೇವಿ ಕುಲಾಲ್ ಉಪಸ್ಥಿತಿತರಿದ್ದರು.

ಕಾರ್ಯಕ್ರಮದ ವಿವರ

Block printing workshop
ಅಚ್ಚು ಕಲೆ ಕಾರ್ಯಾಗಾರ- ಬೆಳಗ್ಗೆ 11 ರಿಂದ 12

Pottery Workshop ಆವೆ ಮಣ್ಣಿನ ರಚನೆಗಳ ತರಬೇತಿ ಬೆಳಗ್ಗೆ 11 ರಿಂದ 4 ಗಂಟೆಯವರೆಗೆ, Tie and dye.

ಹೆಣೆಯುವ ಮತ್ತು ಅದಕ್ಕೆ ರಂಗು ತುಂಬುವ ಕಾರ್ಯಾಗಾರ 12 pm to 1 pm ನಡೆಯಲಿದೆ

ಮಗ್ಗದ ಮನೆಯ ಬಗ್ಗೆ ಮಾಹಿತಿ ಪ್ರಾಥಮಿಕ ತರಗತಿ.
Introductory workshop on handloom weaving to 5 pm to 6pm odd.

 

 

Vishwa News 24

Recent Posts

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ – vishwanews24

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ ಕಾರವಾರ: ಕಪ್ಪೆಚಿಪ್ಪು ತೆಗೆಯಲು ಹೋಗಿ ಸಾವನ್ನಪ್ಪಿದ್ದ 11 ಮಂದಿಯ…

8 minutes ago

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು – vishwanews24

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು ಜೈಪುರ: ಸ್ಕಾರ್ಪಿಯೋ ಎಸ್‌ಯುವಿ  ಕಾರೊಂದು ಸುಮಾರು 700 ಅಡಿ ಕಂದಕಕ್ಕೆ…

15 minutes ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ; ಆರೋಪಿ ಪತ್ತೆಗೆ ತೀವ್ರಗೊಂಡ ತನಿಖೆ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ; ಆರೋಪಿ ಪತ್ತೆಗೆ ತೀವ್ರಗೊಂಡ ತನಿಖೆ ಕೊಲ್ಲೂರು: ಮೇ 17ರ…

30 minutes ago

ಮಂಗಳೂರು : ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ – vishwanews24

ಮಂಗಳೂರು : ಹೆಚ್ಚುತ್ತಿರುವ ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಂಗಳೂರು : ಆಫ್ರಿಕಾ…

1 hour ago

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ : ದಿನೇಶ್ ಗುಂಡೂರಾವ್ -vishwanews24

ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ  ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…

3 days ago

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ -vishwanews24

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…

3 days ago