ಮೇಷ ರಾಶಿ :- ಈ ದಿನ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುವ ಸಾಧ್ಯತೆ ಇರುತ್ತದೆ. ಬೆಳಗಿನಿಂದ ಸಂಜೆಯವರೆಗೆ ಸಿಹಿ ಸುದ್ದಿಯನ್ನು ಕೇಳುವಿರಿ. ಗುರು-ಹಿರಿಯರನ್ನು ನೆನೆದು ಇವತ್ತಿನ ಕೆಲಸ ಆರಂಭಿಸಿ ಒಳಿತಾಗುವುದು. ಸಮಸ್ಯೆಗಳನ್ನು ಎದುರಿಸಲು ತಾಳ್ಮೆ ಹಾಗೂ ಚೈತನ್ಯ ಅಗತ್ಯ. ನೀವು ಹಾಗೂ ನಿಮ್ಮ ಸಂಗಾತಿ ಒಬ್ಬರಿಗೊಬ್ಬರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದರಿಂದ ಪ್ರೀತಿಯಲ್ಲಿ ಪರಿಪೂರ್ಣತೆಯನ್ನು ಕಾಣುವಿರಿ.
ವೃಷಭ ರಾಶಿ :– ಪರರ ಕಷ್ಟಗಳಿಗೆ ಸ್ಪಂದಿಸಬೇಕೆಂಬ ನಿಮ್ಮ ತುಡಿತಗಳಿಗೆ ಜಯವಿರುತ್ತದೆ. ಸಾಮಾಜಕವಾಗಿ ಮತ್ತು ರಾಜಕೀಯವಾಗಿ ಗುರುತಿಸಿಕೊಳ್ಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಗುರುಹಿರಿಯರ ಆಶೀರ್ವಾದ ಪಡೆಯುವಿರಿ. ಇಂದು ಆಸಕ್ತಿದಾಯಕ ಅವಕಾಶಗಳು ನಿಮಗೆ ಒದಗಿ ಬರಹುದು. ಆದರೆ ಅದನ್ನು ಸ್ವೀಕರಿಸಲು ನಿಮ್ಮ ನಡೆಯಲ್ಲಿ ವಿಳಂಬ ಮಾಡದಿರಿ. ಸಕಾರಾತ್ಮಕ ಫಲಿತಾಂಶ ಪಡೆಯಬೇಕೆಂದರೆ ಬುದ್ಧಿವಂತಿಕೆಯನ್ನು ಉಪಯೋಗಿಸಿ. ಸಂಗಾತಿಯ ಬಗ್ಗೆ ಕಾಳಜಿ ವಹಿಸಿ.
ಮಿಥುನ ರಾಶಿ :- ವಾದಪ್ರಿಯರಾದ ನಿಮಗೆ ಇಂದು ಬುದ್ಧಿಜೀವಿಗಳ ಎದುರು ವಾದ ಮಂಡಿಸಿ ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ನಿಮ್ಮ ವಿಚಾರಧಾರೆಯನ್ನು ಈದಿನ ನಿಮ್ಮ ವಿರೋಧಿಗಳು ಬೆಂಬಲಿಸುವುದು ಆಶ್ಚರ್ಯವನ್ನುಂಟು ಮಾಡುವುದು. ಕೆಲವೊಂದು ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು, ಯಾವುದನ್ನು ಎದುರಿಸುವುದು ಎನ್ನುವ ಗೊಂದಲ ಕಾಡಬಹುದು. ವೃತ್ತಿಕ್ಷೇತ್ರದಲ್ಲಿ ನಿಮಗೆ ನೀಡಿರುವಂತಹ ಕೆಲಸಗಳನ್ನು ಜವಾಬ್ದಾರಿಯುತವಾಗಿ ಯಶಸ್ವಿಯಾಗಿ ನಿಭಾಯಿಸುವಿರಿ.
ಕಟಕ ರಾಶಿ :– ಅನಾವಶ್ಯಕ ಖರ್ಚುವೆಚ್ಚಗಳಿಂದ ಬಳಲುತ್ತಿದ್ದೀರಿ. ಹಾಗಂತ ಈ ದಿನ ಬೇರೆಯವರಿಂದ ಕಡ ಅಥವಾ ಸಾಲ ಸ್ವೀಕರಿಸದಿರಿ. ಬುಧವಾರ ದಿನ ಸಾಲ ಪಡೆದಲ್ಲಿ ಅದನ್ನು ತೀರಿಸುವುದು ಕಷ್ಟವಾಗುವುದು. ಇರುವ ಹಣದಲ್ಲಿಯೇ ಈ ದಿನದ ಖರ್ಚು ನಿಭಾಯಿಸಿರಿ.ನಿಮ್ಮ ದೈನಂದಿನ ಜೀವನದ ಒತ್ತಡವು ನಿಮ್ಮ ಸಂಗಾತಿಗೆ ನಿರಂತರವಾಗಿ ಹೊರೆಯಾಗದಿರುವುದು ಒಳ್ಳೆಯದು. ಯಾಕೆಂದರೆ ಇದು ಸಂಬಂಧದಲ್ಲಿಕಿರಿಕಿರಿ ಹಾಗೂ ದುಃಖವನ್ನು ನೀಡುವುದು. ಹಾಗಾಗಿ ಪ್ರೀತಿಯ ಜೀವನದಲ್ಲಿ ಕಾಳಜಿ ಹಾಗೂ ಸಂತೋಷಗಳತ್ತ ಗಮನ ಹರಿಸಿ.
ಸಿಂಹ ರಾಶಿ :- ತೇಜೋಮಯವಾದ ಅಲೌಕಿಕ ಶಕ್ತಿಯು ನಿಮ್ಮಲ್ಲಿದ್ದು ಅದನ್ನು ಕೇವಲ ಕೆಲವರಷ್ಟೆ ಬಲ್ಲವರಾಗಿರುತ್ತಾರೆ. ಹಾಗಾಗಿ ನೀವು ಮಾಡುವ ಪ್ರತಿಯೊಂದು ಕಾರ್ಯಗಳ ವಿವರವನ್ನು ಎಲ್ಲರ ಮುಂದೆ ಹೇಳುವುದು ತರವಲ್ಲ. ಅಂತರಂಗಕ್ಕೆ ಅಂಜಿ ನಡೆಯಿರಿ.ಇಂದು, ನೀವು ತೀವ್ರವಾದ ಒತ್ತಡದಿಂದಾಗಿ ತಪ್ಪುಗಳಾಗುವ ಮೊದಲೇ ಎಚ್ಚರಿಕೆಯಿಂದ ಯೋಚಿಸುವುದು ಬಹಳ ಮುಖ್ಯ. ಹಣಕಾಸಿಗೆ ಸಂಬಂಧಿಸಿದಂತೆ ಹಿಂದೆ ಆದ ತಪ್ಪುಗಳನ್ನು ಸರಿಪಡಿಸಲು ಅವಕಾಶವನ್ನು ಪಡೆದುಕೊಳ್ಳಿ.
ಕನ್ಯಾ ರಾಶಿ:- ನಿಮ್ಮ ಮಕ್ಕಳಿಂದ ಶುಭವಾರ್ತೆಯನ್ನು ಕೇಳುವಿರಿ. ನಿಮಗೆ ಬರಬೇಕಾದ ಹಣವು ಸಕಾಲದಲ್ಲಿ ದೊರೆಯುವುದು. ಸಂಘ ಸಂಸ್ಥೆಗಳಿಂದ ನಿಮಗೆ ಸನ್ಮಾನ ಕಾರ್ಯಕ್ರಮ ನಡೆಸುವ ಸಾಧ್ಯತೆ ಇರುತ್ತದೆ. ನಿಮ್ಮ ಬೇಜವಾಬ್ದಾರಿತನವನ್ನು ತಪ್ಪಿಸಿ ಯಾಕೆಂದರೆ ಮುಂದೆ ಇದಕ್ಕಾಗಿ ವಿಷಾದಪಡಬೇಕಾದೀತು. ನೀವು ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರೆ ಗೆಲುವಿನ ಮಾರ್ಗವನ್ನು ಕಂಡುಹಿಡಿಯುವಿರಿ. ಸಂಗಾತಿಯೊಂದಿಗೆ ನಿಮ್ಮ ಅತ್ಯಮೂಲ್ಯ ಸಮಯವನ್ನು ಕಳೆಯಿರಿ ಹಾಗೂ ಅವರ ಬಗ್ಗೆ ಕಾಳಜಿ ವಹಿಸಿ.
ತುಲಾ ರಾಶಿ:– ಅನಾವಶ್ಯಕ ಮಾತುಗಳು ಸಂಬಂಧವನ್ನು ಕೆಡಿಸುವುದು. ಹಾಗಾಗಿ ಮಾತನಾಡುವಾಗ ಎಚ್ಚರಿಕೆ ಇರಲಿ. ಹೊಸ ಕೆಲಸ ಕಾರ್ಯಗಳ ಆರಂಭಕ್ಕೂ ಮುನ್ನ ಮನೆದೇವರ ಮತ್ತು ಗುರುಹಿರಿಯರ ಆಶೀರ್ವಾದ ಪಡೆಯಿರಿ. ಅದೃಷ್ಟ ಇಂದು ನಿಮ್ಮ ಕಡೆಗಿದೆ. ಅಹಿತಕರ ಸಂದರ್ಭಗಳನ್ನು ನಿವಾರಿಸುವಂತಹ ಶಕ್ತಿ ನಿಮಗಿದೆ. ನಿಮ್ಮ ಸಂಗಾತಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ವೃತ್ತಿಜೀವನದಲ್ಲಿ ನೋಡುವುದಾದರೆ ಈ ದಿನ ಕೆಲಸದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಆದರೆ ಕೆಲಸವನ್ನು ಹಂತ ಹಂತವಾಗಿ ನಿಭಾಯಿಸಿ, ಇದರಿಂದ ವಿಶ್ರಾಂತಿಯನ್ನೂ ಪಡೆಯಬಹುದು.
ವೃಶ್ಚಿಕ ರಾಶಿ:– ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಈ ದಿನ ಕೆಲಸ ಕಾರ್ಯಗಳಲ್ಲಿನ ನ್ಯೂನತೆಗಳನ್ನು ದಿಢೀರನೆ ಒಪ್ಪಿಕೊಳ್ಳದಿರಿ. ಸಾರ್ವಜನಿಕವಾಗಿ ಕುಳಿತು ಚಿಂತಿಸಿ ಎಲ್ಲಿ ಲೆಕ್ಕ ತಪ್ಪಾಗಿದೆ ಎಂದು ತಿಳಿದು ಬರುವುದು. ಇಂದು ಕೆಲವೊಂದು ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಇದನ್ನು ಎದುರಿಸಲು ಸಿದ್ಧರಾಗಿ. ಸರಿಯಾದ ಕಾರಣವನ್ನು ತಿಳಿದುಕೊಳ್ಳದೇ ರಂಗೋಲಿಯ ಕೆಳಗೆ ನುಸುಳುವ ಪ್ರಯತ್ನ ಮಾಡದಿರಿ. ಇದರಿಂದ ಪರಿಸ್ಥಿತಿಯ ಸಂಪೂರ್ಣ ನಿಯಂತ್ರಣವನ್ನು ನೀವು ಕಳೆದುಕೊಳ್ಳಬಹುದು.
ಧನಸ್ಸು ರಾಶಿ :– ಯಾವಾಗಲೂ ಸತ್ಯಕ್ಕೆ ಜಯ ಎಂಬುದು ಸರ್ವಕಾಲಿಕ ಸತ್ಯವಾಗಿರುವುದು. ಹಾಗಾಗಿ ನೀವು ಪ್ರಾಮಾಣ ಕವಾಗಿ ಮಾಡಿದ ಕೆಲಸಕ್ಕೆ ಸೂಕ್ತ ಸಂಭಾವನೆ ದೊರೆಯುವುದು. ಇಂದು ಆಶಾವಾದ ಹಾಗೂ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಿ. ಸುತ್ತಮುತ್ತಲಿನವರೊಂದಿಗೆ ನೀವು ಮಾಡುವ ಸಂವಹನವು ನಿಮ್ಮನ್ನು ಇತರರು ಇಷ್ಟಪಡುವಂತೆ ಮಾಡುತ್ತದೆ. ನಿಮ್ಮ ಸಂಗಾತಿಯನ್ನು ಹೊರಗಡೆ ಕರೆದುಕೊಂಡು ಹೋಗಿ ಅವರೊಂದಿಗೆ ಸಮಯವನ್ನು ಕಳೆಯಿರಿ.
ಮಕರ ರಾಶಿ :- ನಿಮ್ಮ ಸೋಲಿಗೆ ಇನ್ನೊಬ್ಬರು ಕಾರಣ ಎಂದು ದೂರದಿರಿ. ಸದ್ಯದ ಪರಿಸ್ಥಿತಿಯಲ್ಲಿ ದೈವಬಲ ಇಲ್ಲದೆ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ಸೋಲು ಉಂಟಾಗಿರುತ್ತದೆ. ಅದಕ್ಕಾಗಿ ಧೈರ್ಯಗೆಡದಿರಿ. ನಿಮ್ಮ ಗುರಿ ಹಾಗೂ ಮಹತ್ವಾಕಾಂಕ್ಷೆಗಳ ಮೇಲೆ ಹೆಚ್ಚು ಗಮನಹರಿಸುವುದು ಒಳ್ಳೆಯದು. ನಿಮ್ಮ ಪ್ರಯತ್ನಗಳಿಗೆ ಅನುಕೂಲಕರವಲ್ಲದ್ದನ್ನು ಬದಿಗಿರಿಸಲು ಪ್ರಯತ್ನಿಸಿ. ನಿಮ್ಮ ಪ್ರತಿಯೊಂದು ನಡೆಯ ಮೇಲೂ ಎಚ್ಚರಿಕೆ ವಹಿಸಿ. ತೊಂದರೆಗಳು ಎದುರಾದಾಗ ನಿಮ್ಮ ಆತ್ಮೀಯರ ಸಲಹೆಯನ್ನು ಪಡೆಯಿರಿ
ಕುಂಭ ರಾಶಿ:- ನೀವು ಈ ಹಿಂದೆ ಅಸಡ್ಡೆ ಮಾಡಿದ ವ್ಯಕ್ತಿಯಿಂದಲೆ ಇಂದು ನಿಮಗೆ ಗೌರವ ಆದರಗಳು ದೊರೆಯುವುದು. ಹಾಗಾಗಿ ಸ್ನೇಹವೃದ್ಧಿಸುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು. ನಿಮ್ಮ ಗುರಿ ಸಾಧನೆಗಾಗಿ ನೀವು ಉತ್ತಮ ಹಾಗೂ ಸ್ಥಿರವಾದ ಹಾದಿಯಲ್ಲಿದೆ. ನಿಧಾನವಾಗಿ ನೀವು ಅಂತಿಮ ಗುರಿಯನ್ನು ತಲುಪುವಿರಿ. ಆದರೆ ಇತರರಿಂದಾಗಿ ನಿಮ್ಮ ಸಾಧನೆಯ ಹಾದಿಯನ್ನು ಗುರಿತಪ್ಪಲು ಬಿಡದಿರಿ. ನಿಮ್ಮ ಪ್ರೀತಿಯ ಸಂಬಂಧದಲ್ಲಿ ಅಸಮಾಧಾನವನ್ನು ಎದುರಿಸಬಹುದು. ನಿಮ್ಮ ಪ್ರೀತಿಯ ಜೀವನದಲ್ಲಿ ಖುಷಿಯನ್ನು ಮರಳಿ ಪಡೆಯಲು ಬದಲಾವಣೆಯನ್ನು ತನ್ನಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಭಾವನೆಗಳನ್ನು ವ್ಯಕ್ತಪಡಿಸಿ.
ಮೀನ ರಾಶಿ :- ಸದಾ ಕಾಲವು ಸುಖವೇ ಬೇಕು. ಕಷ್ಟವೇ ಬೇಡ ಎಂಬುದು ಮನುಜರ ಆಸೆ. ಆದರೆ ಮೆಣಸಿನಕಾಯಿಯ ಖಾರ ತಿಂದಾಗಲೇ ಬೆಲ್ಲದ ಸವಿ ರುಚಿ ಗೊತ್ತಾಗುವುದು. ಹಾಗಾಗಿ ಈ ದಿನ ಒಳಿತು-ಕೆಡಕುಗಳ ಮಿಶ್ರಫಲವನ್ನು ಕಾಣುವಿರಿ. ಈ ದಿನ ಅನಿರೀಕ್ಷಿತ ಬೆಳವಣಿಗೆಗಳು ಹಾಗೂ ಬದಲಾವಣೆಗಳನ್ನು ಕಾಣುವಿರಿ.ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಹಲವು ಅವಕಾಶಗಳನ್ನು ಪಡೆಯುವಿರಿ. ನಿಮ್ಮ ಪ್ರೀತಿಯ ಜೀವನವು ಉತ್ತಮವಾಗಿ ಹಾಗೂ ಶಾಂತಿಯುತವಾಗಿ ಸಾಗುವುದು.
ಗಾನಕೋಗಿಲೆ ಎಸ್.ಜಾನಕಿ ವಿಧಿವಶ ಮೈಸೂರು : ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಹಿನ್ನಲೆ ಗಾಯಕಿ ಎಸ್.ಜಾನಕಿ…
ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿವಕುಮಾರ್…
ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ ಮೈಸೂರು: "ನಾನು ಕಂಬಳವನ್ನು…
ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್ಎಎಫ್ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ ಉಡುಪಿ:…
ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್’ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ : ಸಚಿವ ಈಶ್ವರ್ ಖಂಡ್ರೆ ಬೆಂಗಳೂರು :ರಾಜ್ಯದಲ್ಲಿ ಬಹುನಿರೀಕ್ಷಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು…
ಕೇಂದ್ರದಿಂದ ಗುಡ್ ನ್ಯೂಸ್ : ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ ನವದೆಹಲಿ: ಪ್ರತಿ ತಿಂಗಳು ಔಷಧಿಗಳಿಗೆ…