ಕಾಪು: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಭಂಡಿ ರಥ,ರಜತ ಗರುಡ ವಾಹನ,ಶೇಷ ವಾಹನದ ಪುರಪ್ರವೇಶ ಶೋಭಾಯಾತ್ರೆ ದಿನಾಂಕ ನವೆಂಬರ್ 19 ರ ಗುರುವಾರ ಸಂಜೆ ನಡೆಯಲಿದೆ.
ಪುರ ಪ್ರವೇಶ ಶೋಭಾಯಾತ್ರೆಯೂ ಕೋಟೇಶ್ವರ ರಥ ಶಿಲ್ಪ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೂಲಕ ಕಾಪುವಿಗೆ ಆಗಮಿಸಲಿದ್ದು , ಈ ಸಂದರ್ಭ ರಥ ಪ್ರಯಾಣ ಪಥದ ಆಸುಪಾಸಿನ ಗೌಡ ಸಾರಸ್ವತ ಸಮಾಜದ ದೇವಳ, ಮಂದಿರಗಳ ದೇವರ ಅನುಗ್ರಹ ಪೂರ್ವಕ ಪ್ರಸಾದ ಸಹಿತ ರಥಕ್ಕೆ ಆರತಿ ನೀಡಲು ಅವಕಾಶವಿದ್ದು, ಈ ಪುಕಾರ್ಯಕ್ರಮದಲ್ಲಿ, ಆಯಾ ಊರಿನ ದೇವಳದ ಪ್ರತಿನಿಧಿಗಳು, ಸ್ವ-ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾಪು ವೆಂಕಟರಮಣ ದೇವರ ನೂತನ ಭಂಡಿ ರಥವನ್ನು ಸ್ವಾಗತಿಸಿಸಲು ಕೋರಲಾಗಿದೆ.
ಸಂಜೆ 5 ಗಂಟೆಗೆ ಕಾಪು ಶ್ರೀ ವೀರಭದ್ರ ದೇವಳದ ಬಳಿಯಿಂದ ನಾನಾ ಬಿರುದಾವಳಿ, ಕಲಾ ತಂಡ, ವಾದ್ಯ ತಂಡ, ಟ್ಯಾಬ್ಲೊ ಸಹಿತ ವೈಭವೋಪೇತ ‘ಪುರ ಪ್ರವೇಶ ಶೋಭಾಯಾತ್ರೆ ಮೂಲಕ ಕಾಪು ಪೇಟೆ ಮಾರ್ಗವಾಗಿ ಶ್ರೀ ದೇವಳಕ್ಕೆ ಬರಮಾಡಿ ಕೊಳ್ಳ ಲಾಗುವುದು ಎಂದು ದೇವಳದ ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ
ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ ಬೆಳ್ತಂಗಡಿ: ನೀರಚಿಲುಮೆಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ…
ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ ಮೂಡುಬಿದಿರೆ : ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ…
ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು ಉಡುಪಿ: ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್…
ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ.. ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ; ಡೆತ್ ನೋಟ್ ನಲ್ಲಿ…
ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…
ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…