ಕಾಪು: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಭಂಡಿ ರಥ,ರಜತ ಗರುಡ ವಾಹನ,ಶೇಷ ವಾಹನದ ಪುರಪ್ರವೇಶ ಶೋಭಾಯಾತ್ರೆ ದಿನಾಂಕ ನವೆಂಬರ್ 19 ರ ಗುರುವಾರ ಸಂಜೆ ನಡೆಯಲಿದೆ.
ಪುರ ಪ್ರವೇಶ ಶೋಭಾಯಾತ್ರೆಯೂ ಕೋಟೇಶ್ವರ ರಥ ಶಿಲ್ಪ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೂಲಕ ಕಾಪುವಿಗೆ ಆಗಮಿಸಲಿದ್ದು , ಈ ಸಂದರ್ಭ ರಥ ಪ್ರಯಾಣ ಪಥದ ಆಸುಪಾಸಿನ ಗೌಡ ಸಾರಸ್ವತ ಸಮಾಜದ ದೇವಳ, ಮಂದಿರಗಳ ದೇವರ ಅನುಗ್ರಹ ಪೂರ್ವಕ ಪ್ರಸಾದ ಸಹಿತ ರಥಕ್ಕೆ ಆರತಿ ನೀಡಲು ಅವಕಾಶವಿದ್ದು, ಈ ಪುಕಾರ್ಯಕ್ರಮದಲ್ಲಿ, ಆಯಾ ಊರಿನ ದೇವಳದ ಪ್ರತಿನಿಧಿಗಳು, ಸ್ವ-ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾಪು ವೆಂಕಟರಮಣ ದೇವರ ನೂತನ ಭಂಡಿ ರಥವನ್ನು ಸ್ವಾಗತಿಸಿಸಲು ಕೋರಲಾಗಿದೆ.
ಸಂಜೆ 5 ಗಂಟೆಗೆ ಕಾಪು ಶ್ರೀ ವೀರಭದ್ರ ದೇವಳದ ಬಳಿಯಿಂದ ನಾನಾ ಬಿರುದಾವಳಿ, ಕಲಾ ತಂಡ, ವಾದ್ಯ ತಂಡ, ಟ್ಯಾಬ್ಲೊ ಸಹಿತ ವೈಭವೋಪೇತ ‘ಪುರ ಪ್ರವೇಶ ಶೋಭಾಯಾತ್ರೆ ಮೂಲಕ ಕಾಪು ಪೇಟೆ ಮಾರ್ಗವಾಗಿ ಶ್ರೀ ದೇವಳಕ್ಕೆ ಬರಮಾಡಿ ಕೊಳ್ಳ ಲಾಗುವುದು ಎಂದು ದೇವಳದ ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…