Featured

ನ.29ರಿಂದ ಬೆಂಗಳೂರು- ಶಬರಿಮಲೆ KSRTC ವಿಶೇಷ ಬಸ್‌ ಆರಂಭ; ವೇಳಾಪಟ್ಟಿ ಇಲ್ಲಿದೆ – vishwanews24

ನ.29ರಿಂದ ಬೆಂಗಳೂರು- ಶಬರಿಮಲೆ KSRTC ವಿಶೇಷ ಬಸ್‌ ಆರಂಭ; ವೇಳಾಪಟ್ಟಿ ಇಲ್ಲಿದೆ

ಬೆಂಗಳೂರು: ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ವೋಲ್ವೊ ಬಸ್‌ನ ವ್ಯವಸ್ಥೆ ಮಾಡಿದೆ. ಬೆಂಗಳೂರು -ನೀಲಕ್ಕಲ್ (ಪಂಪಾ, ಶಬರಿಮಲೈ) ಮಾರ್ಗದ ಬಸ್‌ಗೆ ನವೆಂಬರ್‌ 29 ರಂದು ಚಾಲನೆ ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರು/ಭಕ್ತಾಧಿಗಳ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಈ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಬಸ್‌ನ ವೇಳಾಪಟ್ಟಿ ಏನು?
ಬೆಂಗಳೂರು – ಪಂಪಾ ಬಸ್‌ ವೋಲ್ವೋ ಬಸ್‌ ನಿತ್ಯ ಮಧ್ಯಾಹ್ನ 1.50 ಕ್ಕೆ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿದೆ. ಮರುದಿನ ಬೆಳಿಗ್ಗೆ 6.45 ಕ್ಕೆ ಪಂಪಾ ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ ಸಂಜೆ 6 ಕ್ಕೆ ಪಂಪಾದಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.

ಟಿಕೆಟ್‌ ದರ ಎಷ್ಟಿದೆ?
ಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ ಇದಾಗಿದ್ದು ಬೆಂಗಳೂರಿನಿಂದ ಶಬರಿಮಲೆಗೆ 1750 ರೂಪಾಯಿ ಟಿಕೆಟ್‌ ದರವಿದೆ.

ಭಕ್ತರಿಗೆ ಅನ್ನಸಂತರ್ಪಣೆ
ಶಬರಿಮಲೆಗೆ ಆಗಮಿಸುವ ಎಲ್ಲಅಯ್ಯಪ್ಪ ಭಕ್ತರಿಗೆ ಅನ್ನಸಂತರ್ಪಣೆ ಮಾಡಲು ದೇವಸ್ವಂ ಮಂಡಳಿ ಯಾವುದೇ ಕೊರತೆ ಇಲ್ಲದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ. ಸನ್ನಿಧಾನದಲ್ಲಿರುವ ಅನ್ನದಾನ ಮಂಟಪದಲ್ಲಿ ಬೆಳಗ್ಗೆ 6 ಗಂಟೆಯಿಂದ ಪ್ರಾರಂಭವಾಗಿ 11 ರವರೆಗೆ ಉಪಹಾರ ನೀಡಲಾಗುತ್ತದೆ. ಮಧ್ಯಾಹ್ನ 12 ರಿಂದ 3:30ರವರೆಗೆ ಊಟ ನೀಡಲಾಗುತ್ತದೆ. ಮತ್ತೆ ಸಂಜೆ 6:30 ರಿಂದ ಭಕ್ತರ ರಶ್‌ ಮುಗಿಯುವವರೆಗೆ ಊಟ ನೀಡಲಾಗುತ್ತದೆ. ಒಂದೇ ಬಾರಿಗೆ 1000 ಮಂದಿ ಊಟ ಮಾಡುವ ರೀತಿಯಲ್ಲಿಅನ್ನದಾನ ಮಂಟಪವನ್ನು ಸಿದ್ಧಪಡಿಸಲಾಗಿದೆ.

ಭಕ್ತರ ಸಂಖ್ಯೆ ಹೆಚ್ಚಾದಂತೆ 2500 ಮಂದಿಗೆ ಅನುಕೂಲವಾಗುವಂತೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಶಬರಿಮಲೆಯ ಸ್ವಯಂ ಸೇವಕರು ಆಹಾರದ ಅವಶೇಷಗಳನ್ನು ಇನ್ಸಿನೇಟರ್‌ ಬಳಿ ತಲುಪಿಸುತ್ತಿದ್ದಾರೆ. ಇಲ್ಲಿ 50 ಖಾಯಂ ಸಿಬ್ಬಂದಿ ಮತ್ತು 200 ದಿನವೇತನ ಕೆಲಸಗಾರರು ಶಬರಿಮಲೆಗೆ ಬರುವ ಭಕ್ತರಿಗೆ ಅನ್ನ ಸಂರ್ತಪಣೆಯಲ್ಲಿ ನಿರತರಾಗಿದ್ದಾರೆ.

ಸ್ವಾಮಿ ಚಾಟ್‌ಬೋಟ್‌ ಆ್ಯಪ್‌ ಜನಪ್ರಿಯ
ಶಬರಿಮಲೆಗೆ ಭೇಟಿ ನೀಡುವ ಅಯ್ಯಪ್ಪ ಭಕ್ತರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ವಾಟ್ಸ್ಯಾಪ್‌ ಚಾಟ್‌ ಬೋಟ್‌ ಜನಪ್ರಿಯವಾಗುತ್ತಿದೆ. ಪತ್ತನಂತಿಟ್ಟ ಜಿಲ್ಲಾಡಳಿತದ ನೇತೃತ್ವದಲ್ಲಿ‘ಸ್ವಾಮಿಗಳ ಚಾಟ್‌ಬೋಟ್‌’ ಸಿದ್ಧಪಡಿಸಲಾಗಿದೆ. ವಿವರಗಳಿಗಾಗಿ 6238008000ಗೆ ಸಂದೇಶ ಕಳುಹಿಸಿ. ಚಾಟ್‌ಬೋಟ್‌ನ ಸೇವೆಯನ್ನು ಸ್ಮಾರ್ಟ್‌ಫೋನ್‌ ಇಂಟರ್‌ಫೇಸ್‌ ಮೂಲಕ ಪ್ರವೇಶಿಸಬಹುದಾದ ಕ್ಯೂಆರ್‌ ಕೋಡ್‌ಅನ್ನು ಸ್ಕ್ಯಾ‌ನ್‌ ಮಾಡುವ ಮೂಲಕ ಪಡೆಯಬಹುದು.

ಸ್ವಾಮಿ ಚಾಟ್‌ಬಾಟ್‌ ಇಂಗ್ಲಿಷ್‌, ಹಿಂದಿ, ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿಸಮಗ್ರ ಸೇವೆಗಳನ್ನು ಒದಗಿಸುತ್ತದೆ.

ಭಕ್ತರು ಕ್ಷೇತ್ರದ ಪೂಜಾ ಸಮಯಗಳು, ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಪೊಲೀಸ್‌ ಮತ್ತು ಅರಣ್ಯ ಇಲಾಖೆಯಂತಹ ಪ್ರಮುಖ ಇಲಾಖೆಗಳ ಸೇವೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ಸ್ವಾಮಿ ಚಾಟ್‌ಬೋಟ್‌ ಮೂಲಕ ಭಕ್ತರು ಅಪಘಾತ-ಮುಕ್ತ ಮತ್ತು ನಿಖರವಾದ ತೀರ್ಥಯಾತ್ರೆಯ ಅನುಭವವನ್ನು ಖಚಿತಪಡಿಸಿಕೊಳ್ಳಬಹುದು. ವಸತಿ, ವರ್ಚುವಲ್‌ ಕ್ಯೂ, ಸ್ಥಳಗಳು, ಹತ್ತಿರದ ದೇವಾಲಯಗಳು, ತುರ್ತು ಪರಿಸ್ಥಿತಿಗಳನ್ನು ವರದಿ ಮಾಡಲು, ಆಹಾರ ದರ, ಕೆಎಸ್ಸಾರ್ಟಿಸಿ ಬಸ್‌ ಸಮಯ, ಹತ್ತಿರದ ನಿಲ್ದಾಣಗಳು, ವೈದ್ಯಕೀಯ, ಪೊಲೀಸ್‌, ವಾಹನ, ಆಹಾರ ಸುರಕ್ಷತೆ ಬಗ್ಗೆ ಮೋಟಾರ್‌ ಮಾಹಿತಿ ಮತ್ತು ಚಾಟ್‌ಬೋಟ್‌ನಲ್ಲಿಅಗ್ನಿ ಸುರಕ್ಷತೆ ಸಹಾಯವಾಣಿಯೂ ಲಭ್ಯವಿದೆ.

Vishwa News 24

Recent Posts

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ – vishwanews24

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…

16 hours ago

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ – vishwanews24

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…

16 hours ago

ದೇಣಿಗೆ ಕಳ್ಳತನ ವಿವಾದ: ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ – vishwanews24

ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…

16 hours ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ – vishwanews24

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ  ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…

16 hours ago

ರಾಮ ಮಂದಿರ ದೇಣಿಗೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್‌ ಎಚ್ಚರಿಕೆ – vishwanews24

ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್‌ ಲಕ್ನೋ: ರಾಮಭಕ್ತರ…

16 hours ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

18 hours ago