Featured

ಪಡುಬಿದ್ರಿ : ಡೆತ್ ನೋಟ್ ಬರೆದಿಟ್ಟು ಯುವತಿ ನೇಣಿಗೆ ಶರಣು -Vishwanews24

ಪಡುಬಿದ್ರಿ : ಡೆತ್ ನೋಟ್ ಬರೆದಿಟ್ಟು ಯುವತಿ ನೇಣಿಗೆ ಶರಣು -Vishwanews24

ಕೊರೊನಾ ಹಿನ್ನಲೆಯಲ್ಲಿ ಮನೆಯಲ್ಲೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಾವಾಹಿಸುತ್ತಿದ್ದ ಬ್ರಹ್ಮಸ್ಥಾನ ಬಳಿಯ ನಿವಾಸಿ ಯುವತಿಯೋರ್ವಳು ತಾನು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಕೋಣೆಯಲ್ಲೇ ತಾಯಿಯ ಸೀರೆಯನ್ನು ಉರುಳಾಗಿ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೃತ ಯುವತಿ ಬ್ರಹ್ಮಸ್ಥಾನ ಬಳಿ ನಿವಾಸಿ ಎಲೆಕ್ಟ್ರಿಕಲ್ ಉದ್ಯೋಗಿ ರಾಮಕೃಷ್ಣ ಎಂಬವರ ಎರಡನೇ ಪುತ್ರಿ ಸೌಜನ್ಯ(22) ಬಿಎಸ್ಸಿ ಪದವಿ ಪಡೆದಿರುವ ಈಕೆ ಕಳೆದ ಹತ್ತು ತಿಂಗಳಿಂದ ಹೈದರಾಬಾದ್ ನ ಖಾಸಗಿ ವಿಪೆÇ್ರ ಕಂಪನಿಯಲ್ಲಿ ಕೆಲಸಕ್ಕಿದ್ದು, ಕೊರೊನಾ ಹಿನ್ನಲೆಯಲ್ಲಿ ಕೆಲಸಕ್ಕೆ ಸೇರಿದ ದಿನದಿಂದ ಮನೆಯಲ್ಲೇ ಕಂಪನಿಯ ಕೆಲಸ ನಿರ್ವಾಹಿಸುತ್ತಿದ್ದಳು. ತಂದೆ, ತಾಯಿ ಹಾಗೂ ಅಜ್ಜಿಯೊಂದಿಗೆ ವಾಸವಾಗಿದ್ದ ಇವಳು ಎಂದಿನಂತೆ ತನ್ನ ಕೋಣೆಯ ಬಾಗಿಲ ಚಿಲಕ ಹಾಕಿ ಕೆಲಸ ಮಾಡಿಕೊಂಡಿದ್ದಳು. ಮುಂಜಾನೆ ತಾನೇ ಮ್ಯಾಗಿ ಮಾಡಿ ತಿಂದಿದ್ದಳು. ತಂದೆಯ ಅನಾರೋಗ್ಯದ ಕಾರಣ ಸುರತ್ಕಲ್ ಗೆ ವೈದ್ಯರ ಕಾರಣ ಬೆಳಗ್ಗೆ 10ರ ಸುಮಾರಿಗೆ ತಂದೆ ತಾಯಿ ಹೊರಟಿದ್ದರು. ತಾಯಿ ಮೊಬೈಲ್ ಗೆ ರೀಚಾರ್ಜ್ ಮಾಡುತ್ತೆನೆಂದ ಆಕೆ ಇವರು ಆಸ್ಪತ್ರೆಯಲ್ಲಿ ಇದ್ದ ವೇಳೆ ಕರೆ ಮಾಡಿ ರೀಚಾರ್ಜ್ ಆಗುತ್ತಿಲ್ಲ ಎಂದಾಕೆ ಮತ್ತೆ ಕೆಲವೇ ಹೊತ್ತಲ್ಲಿ ರೀಚಾರ್ಜ್ ಆಗಿದೆ ಎಂಬುದಾಗಿ ತಾಯಿಗೆ ಕರೆಮಾಡಿ ತಿಳಿಸಿರುವುದೇ ತಾಯಿಯೊಂದಿಗಿನ ಕೊನೆಯ ಮಾತು.

ಮಧ್ಯಾಹ್ನ ಹನ್ನೆರಡರ ಸುಮಾರಿಗೆ ಸ್ಥಳೀಯರೆಲ್ಲಾ ಇದ್ದ ವಾಟ್ಸಾಪ್ ಗ್ರೂಪ್ ನಿಂದ ಈಕೆ ಹೊರ ಬಂದಿದ್ದಳು. ಮಿತವಾಗಿ ಮಾತನಾಡುತ್ತಿದ್ದ ಈಕೆ ಸ್ಥಳೀಯ ಬ್ರಹ್ಮಸ್ಥಾನವನ್ನು ದಿನನಿತ್ಯ ಮುಂಜಾನೆ ಶುಚಿಗೊಳಿಸುತ್ತಿದ್ದಳು. ಮದ್ದಿಗೆ ಹೋದ ತಂದೆತಾಯಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮರಳಿ ಮನೆಗೆ ಬಂದಾಗ ಕೋಣೆಯ ಬಾಗಿಲು ಹಾಕಿದ ಸ್ಥಿತಿಯಲ್ಲಿದ್ದು ಬಾಗಿಲು ಬಡಿದರೂ ತೆರೆಯದಿದ್ದಾಗ, ಹಿಂದಿನಿಂದ ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಗಳನ್ನು ನೋಡಿ ಆಕಾಶವೇ ತಲೆ ಮೇಲೆ ಬಿದ್ದ ಅನುಭವ ಅನುಭವಿಸಿದರು. ಶವ ನೇತಾಡುತ್ತಿದ್ದ ಪಕ್ಕದಲ್ಲಿ ಕೃತ್ಯಕ್ಕೆ ಬಳಸಿದ ಎತ್ತರ ಮರದ ಸ್ಟೂಲ್ ಇತ್ತು.

ಮಗಳಾಡಿದ ಒಂದೊಂದು ವಾಕ್ಯವನ್ನೂ ಮೆಲುಕು ಹಾಕಿ ರೋದಿಸುತ್ತಿದ್ದ ತಾಯಿಯ ಮಾತು ಎಲ್ಲರ ಕಣ್ಣಿನಲ್ಲಿ ನೀರಾಡುವಂತೆ ಮಾಡಿದೆ. ಮನೆ ಸಮೀಪ ನಡೆಯಲಿದ್ದ ಮದುವೆಯೊಂದಕ್ಕೆ ತಾಯಿ ಎರಡು ಸಾವಿರ ಮುಖ ಬೆಲೆಯ ಸಾರಿ ತರುವುದಾಗಿ ಹೇಳಿದಾಗ ಬೇಡ ಐದು ಸಾವಿರದ್ದು ತರೋಣ ಎಂದಿದ್ದಾಳೆ ಎಂದಾಗಿದಾಗಿ ತಾಯಿಯ ಕಣ್ಣೀರಿನ ಮಾತು. ಸೌಮ್ಯ ಸ್ವಾಭಾವದ ಸೌಜನ್ಯ ಸಾವಿಗೆ ಮುನ್ನ ಡೆತ್ ನೋಟ್ ಒಂದನ್ನು ಇಂಗ್ಲೀಷ್ ನಲ್ಲಿ ಬರೆದು ಎದುರಿಗೆ ಕಾಣುವಂತೆ ಪಕ್ಕದ ಗಾದ್ರೇಜ್ ಗೆ ಅಯಸ್ಕಾಂತದ ಸಹಾಯದಿಂದ ಅಂಟಿಸಿ ಇಟ್ಟಿದ್ದಳು. ಮನೆಮಂದಿಯೊಂದಿಗೆ ಅನ್ಯೋನ್ಯತೆಯಲ್ಲಿ ಇದ್ದ ಈ ಯುವತಿ ಡೆತ್ ನೋಟ್ ನಲ್ಲಿ ಬಾಲ್ಯದ ದಿನಗಳ ಬಗ್ಗೆ ಹಾಗೂ ನಾನು ನಿಮ್ಮನ್ನು ಬಿಟ್ಟು ಹೋಗುವುದಾಗಿಯೂ ಅಪ್ಪ ಅಮ್ಮ ನನ್ನನ್ನು ಕ್ಷಮಿಸಿ ಎಂಬುದಾಗಿ ಬರೆದಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮಣಿಪಾಲಕ್ಕೆ ಸಾಗಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

10 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

10 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

10 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

13 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

13 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

14 hours ago