Featured

ಪಡುಬಿದ್ರಿ : ಡೆತ್ ನೋಟ್ ಬರೆದಿಟ್ಟು ಯುವತಿ ನೇಣಿಗೆ ಶರಣು -Vishwanews24

ಪಡುಬಿದ್ರಿ : ಡೆತ್ ನೋಟ್ ಬರೆದಿಟ್ಟು ಯುವತಿ ನೇಣಿಗೆ ಶರಣು -Vishwanews24

ಕೊರೊನಾ ಹಿನ್ನಲೆಯಲ್ಲಿ ಮನೆಯಲ್ಲೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಾವಾಹಿಸುತ್ತಿದ್ದ ಬ್ರಹ್ಮಸ್ಥಾನ ಬಳಿಯ ನಿವಾಸಿ ಯುವತಿಯೋರ್ವಳು ತಾನು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಕೋಣೆಯಲ್ಲೇ ತಾಯಿಯ ಸೀರೆಯನ್ನು ಉರುಳಾಗಿ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೃತ ಯುವತಿ ಬ್ರಹ್ಮಸ್ಥಾನ ಬಳಿ ನಿವಾಸಿ ಎಲೆಕ್ಟ್ರಿಕಲ್ ಉದ್ಯೋಗಿ ರಾಮಕೃಷ್ಣ ಎಂಬವರ ಎರಡನೇ ಪುತ್ರಿ ಸೌಜನ್ಯ(22) ಬಿಎಸ್ಸಿ ಪದವಿ ಪಡೆದಿರುವ ಈಕೆ ಕಳೆದ ಹತ್ತು ತಿಂಗಳಿಂದ ಹೈದರಾಬಾದ್ ನ ಖಾಸಗಿ ವಿಪೆÇ್ರ ಕಂಪನಿಯಲ್ಲಿ ಕೆಲಸಕ್ಕಿದ್ದು, ಕೊರೊನಾ ಹಿನ್ನಲೆಯಲ್ಲಿ ಕೆಲಸಕ್ಕೆ ಸೇರಿದ ದಿನದಿಂದ ಮನೆಯಲ್ಲೇ ಕಂಪನಿಯ ಕೆಲಸ ನಿರ್ವಾಹಿಸುತ್ತಿದ್ದಳು. ತಂದೆ, ತಾಯಿ ಹಾಗೂ ಅಜ್ಜಿಯೊಂದಿಗೆ ವಾಸವಾಗಿದ್ದ ಇವಳು ಎಂದಿನಂತೆ ತನ್ನ ಕೋಣೆಯ ಬಾಗಿಲ ಚಿಲಕ ಹಾಕಿ ಕೆಲಸ ಮಾಡಿಕೊಂಡಿದ್ದಳು. ಮುಂಜಾನೆ ತಾನೇ ಮ್ಯಾಗಿ ಮಾಡಿ ತಿಂದಿದ್ದಳು. ತಂದೆಯ ಅನಾರೋಗ್ಯದ ಕಾರಣ ಸುರತ್ಕಲ್ ಗೆ ವೈದ್ಯರ ಕಾರಣ ಬೆಳಗ್ಗೆ 10ರ ಸುಮಾರಿಗೆ ತಂದೆ ತಾಯಿ ಹೊರಟಿದ್ದರು. ತಾಯಿ ಮೊಬೈಲ್ ಗೆ ರೀಚಾರ್ಜ್ ಮಾಡುತ್ತೆನೆಂದ ಆಕೆ ಇವರು ಆಸ್ಪತ್ರೆಯಲ್ಲಿ ಇದ್ದ ವೇಳೆ ಕರೆ ಮಾಡಿ ರೀಚಾರ್ಜ್ ಆಗುತ್ತಿಲ್ಲ ಎಂದಾಕೆ ಮತ್ತೆ ಕೆಲವೇ ಹೊತ್ತಲ್ಲಿ ರೀಚಾರ್ಜ್ ಆಗಿದೆ ಎಂಬುದಾಗಿ ತಾಯಿಗೆ ಕರೆಮಾಡಿ ತಿಳಿಸಿರುವುದೇ ತಾಯಿಯೊಂದಿಗಿನ ಕೊನೆಯ ಮಾತು.

ಮಧ್ಯಾಹ್ನ ಹನ್ನೆರಡರ ಸುಮಾರಿಗೆ ಸ್ಥಳೀಯರೆಲ್ಲಾ ಇದ್ದ ವಾಟ್ಸಾಪ್ ಗ್ರೂಪ್ ನಿಂದ ಈಕೆ ಹೊರ ಬಂದಿದ್ದಳು. ಮಿತವಾಗಿ ಮಾತನಾಡುತ್ತಿದ್ದ ಈಕೆ ಸ್ಥಳೀಯ ಬ್ರಹ್ಮಸ್ಥಾನವನ್ನು ದಿನನಿತ್ಯ ಮುಂಜಾನೆ ಶುಚಿಗೊಳಿಸುತ್ತಿದ್ದಳು. ಮದ್ದಿಗೆ ಹೋದ ತಂದೆತಾಯಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮರಳಿ ಮನೆಗೆ ಬಂದಾಗ ಕೋಣೆಯ ಬಾಗಿಲು ಹಾಕಿದ ಸ್ಥಿತಿಯಲ್ಲಿದ್ದು ಬಾಗಿಲು ಬಡಿದರೂ ತೆರೆಯದಿದ್ದಾಗ, ಹಿಂದಿನಿಂದ ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಗಳನ್ನು ನೋಡಿ ಆಕಾಶವೇ ತಲೆ ಮೇಲೆ ಬಿದ್ದ ಅನುಭವ ಅನುಭವಿಸಿದರು. ಶವ ನೇತಾಡುತ್ತಿದ್ದ ಪಕ್ಕದಲ್ಲಿ ಕೃತ್ಯಕ್ಕೆ ಬಳಸಿದ ಎತ್ತರ ಮರದ ಸ್ಟೂಲ್ ಇತ್ತು.

ಮಗಳಾಡಿದ ಒಂದೊಂದು ವಾಕ್ಯವನ್ನೂ ಮೆಲುಕು ಹಾಕಿ ರೋದಿಸುತ್ತಿದ್ದ ತಾಯಿಯ ಮಾತು ಎಲ್ಲರ ಕಣ್ಣಿನಲ್ಲಿ ನೀರಾಡುವಂತೆ ಮಾಡಿದೆ. ಮನೆ ಸಮೀಪ ನಡೆಯಲಿದ್ದ ಮದುವೆಯೊಂದಕ್ಕೆ ತಾಯಿ ಎರಡು ಸಾವಿರ ಮುಖ ಬೆಲೆಯ ಸಾರಿ ತರುವುದಾಗಿ ಹೇಳಿದಾಗ ಬೇಡ ಐದು ಸಾವಿರದ್ದು ತರೋಣ ಎಂದಿದ್ದಾಳೆ ಎಂದಾಗಿದಾಗಿ ತಾಯಿಯ ಕಣ್ಣೀರಿನ ಮಾತು. ಸೌಮ್ಯ ಸ್ವಾಭಾವದ ಸೌಜನ್ಯ ಸಾವಿಗೆ ಮುನ್ನ ಡೆತ್ ನೋಟ್ ಒಂದನ್ನು ಇಂಗ್ಲೀಷ್ ನಲ್ಲಿ ಬರೆದು ಎದುರಿಗೆ ಕಾಣುವಂತೆ ಪಕ್ಕದ ಗಾದ್ರೇಜ್ ಗೆ ಅಯಸ್ಕಾಂತದ ಸಹಾಯದಿಂದ ಅಂಟಿಸಿ ಇಟ್ಟಿದ್ದಳು. ಮನೆಮಂದಿಯೊಂದಿಗೆ ಅನ್ಯೋನ್ಯತೆಯಲ್ಲಿ ಇದ್ದ ಈ ಯುವತಿ ಡೆತ್ ನೋಟ್ ನಲ್ಲಿ ಬಾಲ್ಯದ ದಿನಗಳ ಬಗ್ಗೆ ಹಾಗೂ ನಾನು ನಿಮ್ಮನ್ನು ಬಿಟ್ಟು ಹೋಗುವುದಾಗಿಯೂ ಅಪ್ಪ ಅಮ್ಮ ನನ್ನನ್ನು ಕ್ಷಮಿಸಿ ಎಂಬುದಾಗಿ ಬರೆದಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮಣಿಪಾಲಕ್ಕೆ ಸಾಗಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಗೋಲ್‌ಮಾಲ್ ಆಗಿಲ್ಲ:  ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ  – vishwanews24

ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್ ಆಗಿಲ್ಲ:  ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ  ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾಲೋಪವಾಗಿದೆ ಅಂತ ಸಿಎಜಿ…

7 minutes ago

ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ – vishwanews24

ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ ಮಂಗಳೂರು :…

16 minutes ago

ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ – vishwanews24

ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ ಅಯೋಧ್ಯೆ: ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತಾದಿಗಳು ನೀಡಿದ್ದ…

23 minutes ago

ಆರ್‌ ಎಸ್‌ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ – vishwanews24

ಆರ್‌ ಎಸ್‌ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ…

46 minutes ago

ಪಾಸ್‌ಪೋರ್ಟ್ ಶುಲ್ಕ ಹೆಚ್ಚಿಸಿದ ಕೇಂದ್ರ ಸರ್ಕಾರ; ಜು.1 ರಿಂದ ಹೊಸ ದರ ಜಾರಿಗೆ – vishwanews24

ಪಾಸ್‌ಪೋರ್ಟ್ ಶುಲ್ಕ ಹೆಚ್ಚಿಸಿದ ಕೇಂದ್ರ ಸರ್ಕಾರ; ಜು.1 ರಿಂದ ಹೊಸ ದರ ಜಾರಿಗೆ ನವದೆಹಲಿ: 14 ವರ್ಷಗಳಲ್ಲಿ ಇದೇ ಮೊದಲ…

53 minutes ago

ಬೆಳ್ತಂಗಡಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ; ಪ್ರಯಾಣಿಕರು ಅಪಾಯದಿಂದ ಪಾರು – vishwanews24

ಬೆಳ್ತಂಗಡಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ; ಪ್ರಯಾಣಿಕರು ಅಪಾಯದಿಂದ ಪಾರು ಬೆಳ್ತಂಗಡಿ: ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ…

1 hour ago