ಪಡುಬಿದ್ರಿ: ಕಂಚಿನಡ್ಕ ರಸ್ತೆಯಾಗಿ ಜ. 31ರ ರಾತ್ರಿಯ ಸುಮಾರು 8ಗಂಟೆಯ ವೇಳೆಗೆ ಮನೆಯತ್ತ ಹೋಗುತ್ತಿದ್ದ ತರಕಾರಿ ಉದ್ಯಮಿ ಮನ್ಸೂರ್ ಎಂಬುವರ ಬಳಿಯಿದ್ದ 3ಲಕ್ಷ ರೂ. ಗಳನ್ನು ಗುಂಪೊಂದು ದರೋಡೆ ಗೈದಿರುವ ಬಗ್ಗೆ ಪಡುಬಿದ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ರಿಕ್ಷಾ ಹಾಗೂ ಎರಡು ಕಾರುಗಳಲ್ಲಿ ಸುಮಾರು 8 ಮಂದಿ ದರೋಡೆಕೋರರು ಬಂದಿದ್ದರು. ಪಿಸ್ತೂಲ್, ಚೂರಿ, ದೊಣ್ಣೆ, ತಲವಾರುಗಳನ್ನು ಹೊಂದಿದ್ದ ಈ ಗುಂಪು ಉದ್ಯಮಿಯನ್ನು ತಡೆದು ನಿಲ್ಲಿಸಿ ಹಣೆಗೆ ಪಿಸ್ತೂಲನ್ನು ಗುರಿ ಇರಿಸಿ ಹಣವನ್ನು ನೀಡುವಂತೆ ಬೆದರಿಸಿತ್ತು ಎಂದು ಪೋಲೀಸರಿಗಿತ್ತ ದೂರಲ್ಲಿ ತಿಳಿಸಲಾಗಿದೆ.
ಆರೋಪಿಗಳನ್ನು ಕಂಚಿನಡ್ಕ ನಿವಾಸಿಗಳಾದ ಹಸನ್ ಬಾವಾ, ಫಿರೋಝ್, ರೆಹಮಾನ್, ನಝೀರ್, ರಹೀಮ್, ಯೂಸುಫ್, ಕಾಟಿಪಳ್ಳದ ಅಜೀದ್ ಸಹಿತ ಎಂಟು ಮಂದಿ ದರೋಡೆ ನಡೆಸಿರುವ ಆರೋಪಿಗಳೆಂದು ಪೋಲೀಸರಿಗಿತ್ತ ದೂರಲ್ಲಿ ಮನ್ಸೂರ್ ತಿಳಿಸಿದ್ದಾರೆ.
ದೂರುದಾರ ಮನ್ಸೂರ್ ಉಡುಪಿಯ ಸರಕಾರಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…