ಪಡುಬಿದ್ರಿ: ಕನ್ನಡದ ಬಿಗ್ ಬಾಸ್ ಸೀಸನ್ 12 ರಲ್ಲಿ ರನ್ನರ್ ಅಪ್ ಆದ ಬಳಿಕ ಉಡುಪಿಗೆ ಆಗಮಿಸಿದ ರಕ್ಷಿತಾ ಗೆ ಭರ್ಜರಿಯಾದ ಸ್ವಾಗತ ಸಿಕ್ಕಿದೆ.
ಹೆಜಮಾಡಿಯ ಟೋಲ್ ಗೇಟ್ ಪರಿಸರಕ್ಕೆ ರಕ್ಷಿತಾ ಆಗಮಿಸಿದಾಗ ಸೇರಿದ್ದ ಬೃಹತ್ ಸಂಖ್ಯೆಯ ಅಭಿಮಾನಿಗಳು ಹೂಮಾಲೆಗಳ ಗೌರವದೊಂದಿಗೆ ಆಕೆಯನ್ನು ಸ್ವಾಗತಿಸಿದರು. ಬಳಿಕ ಆಕೆಯನ್ನು ತೆರೆದ ಜೀಪಿನಲ್ಲಿ ಪಡುಬಿದ್ರಿಗೆ ಬೃಹತ್ ವಾಹನ ಜಾಥಾ, ಚೆಂಡೆ, ವಾದ್ಯಗಳ ಸಡಗರದೊಂದಿಗೆ ಕರೆತರಲಾಯಿತು.
ರಕ್ಷಿತಾ ಶೆಟ್ಟಿಯವರಿಗೆ ಜಾಥಾದಲ್ಲಿ ಮೀನುಗಾರ ಮಹಿಳೆಯೋರ್ವರು ಬಂಗುಡೆ ಮೀನು ನೀಡುವ ಮೂಲಕ ಸ್ವಾಗತಿಸಿದರು. ರಕ್ಷಿತಾ ಮತ್ತೆ ಪಡುಬಿದ್ರಿ ಬೇಂಗ್ರೆಯ ತನ್ನ ಅಜ್ಜಿ ಮನೆ ಬಳಿಗೆ ತೆರಳಿದಳು. ಅಲ್ಲಿ ಬೇಂಗ್ರೆ ನಾಗರಿಕರು ಆಯೋಜಿಸಿದ್ದ ಹುಟ್ಟೂರ ಸಮ್ಮಾನದಲ್ಲಿ ರಕ್ಷಿತಾಗೆ ಬೂತಾಯಿ ರಕ್ಷಿತಾ ಎಂಬ ಬಿರುದನ್ನಿತ್ತು ಸಮ್ಮಾನಿಸಲಾಯಿತು.
ಬೇಂಗ್ರೆ ಸದಾನಂದ ಶೆಟ್ಟಿ ಬಟಾರ ಮನೆಯ ರಕ್ಷಿತಾ ತಂದೆ ರವಿ ಶೆಟ್ಟಿ, ತಾಯಿ ಹರಿಣಿ ಶೆಟ್ಟಿ, ಪಡುಬಿದ್ರಿ ಬೇಂಗ್ರೆ ಅಭಿಮಾನಿ ಬಳಗದ ನಾಗೇಶ್, ಜಯ ಸಾಲ್ಯಾನ್, ವಿಶ್ವಜಿತ್ ರಾವ್, ಅರುಣ್ ಶೆಟ್ಟಿ, ಪ್ರಮುಖರಾದ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ನವೀನ್ ಚಂದ್ರ ಜೆ. ಶೆಟ್ಟಿ, ಶರತ್ ಶೆಟ್ಟಿ, ರವಿ ಎಚ್. ಕುಂದರ್ ಮತ್ತಿತರಿದ್ದರು.
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್…