Featured

ಪಡುಬಿದ್ರಿ : ಬೈಕ್‌ ಅಡ್ಡಗಟ್ಟಿ ಹಲ್ಲೆ ; ದರೋಡೆಗೆ ಯತ್ನ: ಪ್ರಕರಣ ದಾಖಲು – vishwanews24

ಪಡುಬಿದ್ರಿ : ಬೈಕ್‌ ಅಡ್ಡಗಟ್ಟಿ ಹಲ್ಲೆ ; ದರೋಡೆಗೆ ಯತ್ನ: ಪ್ರಕರಣ ದಾಖಲು

ಪಡುಬಿದ್ರಿ: ಕಟಪಾಡಿಯ ಇಚ್ಛಿತ್‌ ಶೆಟ್ಟಿ (24) ಅವರ ಮೋಟಾರು ಬೈಕನ್ನು ಪಲಿಮಾರು ಪೇಟೆಯಲ್ಲಿ ನ. 22ರಂದು ತಡರಾತ್ರಿ ತಡೆದು ನಿಲ್ಲಿಸಿದ್ದ ಮಹೇಶ ಹಾಗೂ ಇನ್ನಿಬ್ಬರು ಆರೋಪಿಗಳು ಇಚ್ಛಿತ್‌ ಅವರ ಮೊಬೈಲ್‌ ಹಾಗೂ ಚಿನ್ನದ ಸರವನ್ನು ಕಸಿಯಲು ಯತ್ನ ನಡೆಸಿದ್ದಾರೆ.

ಮಂಗಳೂರಿಗೆ ಕಾರ್ಯಕ್ರಮವೊಂದರ ನಿಮಿತ್ತ ತೆರಳಿದ್ದ ಇಚ್ಛಿತ್‌ ಅವರು ತಮ್ಮ ಗೆಳೆಯ ಸಂಕೇತ್‌ನನ್ನು ಅವರ ಊರು ಬಳ್ಕುಂಜೆಯಲ್ಲಿ ಇಳಿಸಿ ಬೈಕಿನಲ್ಲಿ ಕಟಪಾಡಿಗೆ ಮರಳುತ್ತಿದ್ದರು. ರಾತ್ರಿ 11.30ರ ವೇಳೆಗೆ ಪಲಿಮಾರು ಜಂಕ್ಷನ್‌ ತಲುಪಿದಾಗ ಆರೋಪಿಗಳು ಕೈ ಅಡ್ಡ ಹಿಡಿದು ಬೈಕನ್ನು ನಿಲ್ಲಿಸಿದ್ದಾರೆ. ಬೈಕ್‌ ಕೀ ತೆಗೆದ ಮಹೇಶ ರಸ್ತೆ ಬದಿಗೆ ಬಿಸಾಡಿದ್ದುದನ್ನು ಪ್ರಶ್ನಿಸಿದಾಗ ಇಚ್ಛಿತ್‌ ಮೇಲೆ ಕೈಯಿಂದ ಹಾಗೂ ಆತನ ಹೆಲ್ಮೆಟ್‌ ಮೂಲಕ ಹೊಡೆದು ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ತುಳಿದಿದ್ದಾರೆ.

ಇಚ್ಛಿತ್‌ ತನ್ನ ಅಕ್ಕನಿಗೆ ವೀಡಿಯೋ ಕಾಲ್‌ ಮಾಡುತ್ತಿದ್ದಾಗ ಆರೋಪಿಗಳು ಮೊಬೈಲ್‌ ಕಿತ್ತುಕೊಂಡು ನೆಲಕ್ಕೆಸೆದಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇಚ್ಛಿತ್‌ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಕಸಿದಿದ್ದಾರೆ. ಅದು ತುಂಡಾಗಿ ರಸ್ತೆಗೆ ಬಿದ್ದಾಗ ಇಚ್ಛಿತ್‌ ಅದನ್ನು ಎತ್ತಿಕೊಂಡಿದ್ದಾರೆ. ಬಳಿಕ ಆರೋಪಿಗಳು ಇಚ್ಛಿತ್‌ನನ್ನು ತಮ್ಮ ಕಾರಿಗೆ ಹಾಕಿಕೊಳ್ಳಲು ಯತ್ನವನ್ನೂ ನಡೆಸಿದ್ದಾರೆ. ಆ ವೇಳೆಗೆ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಬಂದಾಗಿ ಆರೋಪಿಗಳು ಕಾರು ಹತ್ತಿ ಪರಾರಿಯಾಗಿದ್ದರು. ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

2 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

3 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

3 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

3 days ago

ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ ಕಲಿಯಬೇಕಿಲ್ಲ : ವಿಪಕ್ಷಗಳಿಗೆ ಜಮೀರ್ ಅಹ್ಮದ್ ಖಾನ್‌  ತಿರುಗೇಟು – vishwanews24

ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್‌ ಅಹ್ಮದ್‌ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…

3 days ago

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ – vishwanews24

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…

3 days ago