ಪುತ್ತೂರು: ”ಕಾಂಗ್ರೆಸ್ ಆಳ್ವಿಕೆಯಡಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸಾಕ್ಷರರ, ಬುದ್ಧಿವಂತರ, ಅಭಿವೃದ್ಧಿಶೀಲರ ಪ್ರದೇಶವಾಗಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿತ್ತು. ಇಂಥ ಸಂಪದ್ಭರಿತ ಜಿಲ್ಲೆಯನ್ನು ಕೊಲೆಗಡುಕರ ಜಿಲ್ಲೆಯಾಗಿ ಪರಿವರ್ತಿಸುವ ಮೂಲಕ ಬಿಜೆಪಿ ಕರಾವಳಿಯ ಅಭಿವೃದ್ಧಿಯ ರಥವನ್ನು ಶತಮಾನದಷ್ಟು ಹಿಂದಕ್ಕೆ ಕೊಡೊಯ್ದಿದೆ” ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ನಡದ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಕಾರ್ಯರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
”ಕರಾವಳಿಯು ಶಿಕ್ಷಣ, ಹೊಟೇಲ್ ಉದ್ಯಮ, ಕೈಗಾರಿಕೆ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದ ಪ್ರದೇಶ. ಕಾಂಗ್ರೆಸ್ ಸರಕಾರಗಳ ಅವಧಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಇಡೀ ರಾಜ್ಯದಲ್ಲೇ ಪ್ರತೀ ವರ್ಷ ಪ್ರಥಮ ಸ್ಥಾನ ಪಡೆಯುತ್ತಿದ್ದರು. ಯಾವಾಗ ಬಿಜೆಪಿ ಇಲ್ಲಿ ಪ್ರವರ್ಧಮಾನಕ್ಕೆ ಬರಲಾರಂಭಿಸಿತೋ ಅಂದಿನಿಂದ ಇಲ್ಲಿನ ಫಲಿತಾಂಶ ಕುಸಿಯುತ್ತಾ ಬಂದು, 18ನೇ ಸ್ಥಾನಕ್ಕೆ ಬರುವಂತಾಯಿತು.
ವಿದ್ಯೆ ಕಲಿಯಬೇಕಾದ ವಿದ್ಯಾರ್ಥಿಗಳ ಮನಸ್ಸಲ್ಲಿ ಕೋಮುದ್ವೇಷ, ಹಿಂಸಾ ಭಾವನೆ, ಮತೀಯವಾದ, ಪ್ರತಿಭಟನೆ ಇತ್ಯಾದಿಗಳನ್ನು ತುಂಬಿಸಿದ ಬಿಜೆಪಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಕಡಿಮೆಯಾಗಲು ಕಾರಣವಾಯಿತು. ಇದಲ್ಲದೆ ಬಿಜೆಪಿಯಿಂದಾಗಿ ಇಲ್ಲಿ ಕೊಲೆ, ಹಿಂಸೆ, ದೊಂಬಿ ಹೆಚ್ಚಳಗೊಂಡು ತರುಣರೇ ನೂರಾರು ಸಂಖ್ಯೆಯಲ್ಲಿ ಜೈಲಿಗೆ ಸೇರುವಂತಾಯಿತು. ಇದು ಕರಾವಳಿಗೆ ಬಿಜೆಪಿಯ ಕೊಡುಗೆ ಎಂದು ಅವರು ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನುಡಿದರು.
”ಬಿಜೆಪಿಗರು ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ಕಾಂಗ್ರೆಸ್ ಜನರಿಗೆ ಬದುಕು ನೀಡುತ್ತದೆ. ಅಭಿವೃದ್ಧಿ ಮುಂದಿಟ್ಟುಕೊಂಡರೆ ಕಾಂಗ್ರೆಸ್ ಸೋಲಿಸಲು ಸಾಧ್ಯವಿಲ್ಲಎಂಬುದು ಬಿಜೆಪಿಗೆ ಗೊತ್ತು. ಅದಕ್ಕಾಗಿ ಅದು ಜನರನ್ನು ಮತೀಯವಾಗಿ ಒಡೆದು ಭಾವನೆಗಳ ಬೀಜ ಬಿತ್ತುವ ಕೆಲಸ ಮಾಡುತ್ತದೆ. ಕಾಂಗ್ರೆಸ್ ನೀಡಲಿರುವ ಗೃಹಲಕ್ಷ್ಮೀ, ಗೃಹಜ್ಯೋತಿ ಮತ್ತು ಅನ್ನಭಾಗ್ಯಕ್ಕೆ ಹಣ ಎಲ್ಲಿಂದ ಹೊಂದಿಸುತ್ತದೆ ಎಂದು ಬಿಜೆಪಿ ಕೇಳುತ್ತಿದೆ. ಬಿಜೆಪಿ ಸರಕಾರ ಮಾಡುತ್ತಿರುವ 40 ಶೇ. ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ 126 ಲಕ್ಷ ಕೋಟಿ. ರೂ. ಸಿಗಲಿದೆ. ಇದೇ ಹಣದಿಂದ ನಾವು ಜನರಿಗೆ ಉಚಿತಗಳನ್ನು ನೀಡುತ್ತೇವೆ” ಎಂದು ಹರಿಪ್ರಸಾದ್ ಹೇಳಿದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿದರು. ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಪ್ರಮುಖರಾದ ದಿವ್ಯಪ್ರಭಾ ಚಿಲ್ತಡ್ಕ, ಅಶೋಕ್ ಕುಮಾರ್ ರೈ, ಕಾವು ಹೇಮನಾಥ ಶೆಟ್ಟಿ, ಕೃಪಾ ಅಮರ ಆಳ್ವಾ, ಸತೀಶ್ ಕುಮಾರ್ ಕೆಡೆಂಜಿ, ಎಂ.ಎಸ್. ಮಹಮ್ಮದ್, ಭರತ್ ಮುಂಡೋಡಿ, ಡಾ. ರಾಜಾರಾಂ ಕೆ.ಬಿ., ಧನಂಜಯ ಅಡ್ಪಂಗಾಯ, ಪ್ರಸಾದ್ ಕೌಶಲ್ ಶೆಟ್ಟಿ, ಡಾ.ಬೆಳ್ಳಿಪ್ಪಾಡಿ ರಘು, ಲುಕ್ಮಾನ್ ಬಂಟ್ವಾಳ್ ಉಪಸ್ಥಿತರಿದ್ದರು.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…