Featured

ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ : ಮಹಿಳೆಯರತ್ತ ಕನಿಕರ ತೋರದ ಹಗಲು ದರೋಡೆಯ ಸರಕಾರ : ರಮಾನಾಥ‌ ರೈ -Vishwanews24

ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ : ಮಹಿಳೆಯರತ್ತ ಕನಿಕರ ತೋರದ ಹಗಲು ದರೋಡೆಯ ಸರಕಾರ : ರಮಾನಾಥ‌ ರೈ -Vishwanews24

ಮಂಗಳೂರು,: ಪೆಟ್ರೋಲ್, ಅಡುಗೆ ಅನಿಲ ಏರಿಸಿದ ಕೇಂದ್ರ ಸರಕಾರವು ಕರುಣೆ ಇಲ್ಲದ, ಮಹಿಳೆಯರತ್ತ ಕನಿಕರ ತೋರದ ಹಗಲು ದರೋಡೆಯ ಸರಕಾರ ‌ಎಂದು ಮಾಜೀ ಮಂತ್ರಿ ‌ಬಿ. ರಮಾನಾಥ‌ ರೈ ಅವರು ಕಾಂಗ್ರೆಸ್ ‌ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿದರು.

ಪೆಟ್ರೋಲ್, ಡೀಸೆಲ್ ‌ದರ‌ ಏರಿಕೆಯಿಂದ ಎಲ್ಲ ದಿನಬಳಕೆಯ ವಸ್ತುಗಳ ಬೆಲೆ ಏರಿದ್ದರಿಂದ ಜನಸಾಮಾನ್ಯರ ‌ಬದುಕು ಮೂರಾಬಟ್ಟೆ ಆಗಿದೆ. ಮನಮೋಹನ ಸಿಂಗ್ ‌ಪ್ರಧಾನಿ‌ ಆಗಿದ್ದಾಗ ಅಂತರರಾಷ್ಟ್ರೀಯ ‌ಮಾರುಕಟ್ಟೆಯಲ್ಲಿ ಬ್ಯಾರೆಲ್ ಕಚ್ಚಾ ತೈಲದ‌ ಬೆಲೆ‌ 147 ಡಾಲರ್ ತನಕ‌ ‌ಏರಿದ್ದ ಕಾಲದಲ್ಲೂ ಸರಕಾರ ಬೆಲೆಯನ್ನು ಹತೋಟಿಯಲ್ಲಿ‌ ಇಟ್ಟಿತ್ತು. ಮೋದಿ ಕಾಲದಲ್ಲಿ ಬ್ಯಾರೆಲ್ ದರ 40 ಡಾಲರ್ ಆಚೀಚೆ ಇದ್ದರೂ ಪೆಟ್ರೋಲ್, ಡೀಸೆಲ್‌ ದರ ರೂಪಾಯಿ 100ನ್ನು ಮುಟ್ಟಿದೆ ಎಂದು ರೈ ಟೀಕಿಸಿದರು.

ಫೆ. 22 ರಿಂದ 27ರ ವರೆಗೆ ಹೆಜಮಾಡಿಯಿಂದ – ಶಿರೂರಿನ ವರೆಗೆ 108 ಕಿಮಿಗಳ ‘ಜನಧ್ವನಿ’ ಪಾದಯಾತ್ರೆ : ಅಶೋಕ್ ಕುಮಾರ್ ಕೊಡವೂರು -Vishwanews24

ಕಾಂಗ್ರೆಸ್ ಸರಕಾರವು ಇದ್ದಾಗ ಈ ಮೋದಿ ಮಹಾಶಯ ಬಿಜೆಪಿಯನ್ನು ಗೆಲ್ಲಿಸಿ ಎಲ್ಲ ಬೆಲೆ ಇಳಿಸುತ್ತೇವೆ ಎನ್ನುತ್ತಿದ್ದರು. ಆದರೆ ಮೋದಿ ಪ್ರಧಾನಿ ಆದ ಮೇಲೆ ಎಲ್ಲ ಬೆಲೆ ನೂರಾರು ಪಟ್ಟು ಹೆಚ್ಚಿದೆ. ಇದನ್ನು ಪ್ರಶ್ನಿಸಲು ಯಾರಿಗೂ ಧೈರ್ಯ ಇಲ್ಲ. ಏಕೆಂದರೆ ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ. ಕಾಂಗ್ರೆಸ್ ಸರಕಾರ ಇದ್ದಾಗ ಬೆಲೆ ಏರಿಕೆಯನ್ನು ಎಲ್ಲರೂ ಖಂಡಿಸುತ್ತಿದ್ದರು. ಏಕೆಂದರೆ ಆಗ ನಿಜ ಪ್ರಜಾಪ್ರಭುತ್ವ ಇತ್ತು ಎಂದು ರಮಾನಾಥ‌ ರೈ ಹೇಳಿದರು.

ನಮ್ಮ ಸರಕಾರ ಕೇಂದ್ರದಲ್ಲಿ ಇದ್ದಾಗ ಅಬಕಾರಿ ಸುಂಕ ಇಳಿಸಿದ್ದೆವು. ಇವರು ಏರಿಸುತ್ತಲೇ ಇದ್ದಾರೆ. ಮೋದಿ ಸರಕಾರವು ಬಡವರನ್ನು ನಿರ್ಲಕ್ಷ್ಯ ‌ಮಾಡಿ, ಜನಸಾಮಾನ್ಯರನ್ನು ವಂಚಿಸಿ ಕಾರ್ಪೊರೇಟ್ ಜನರ ಹಿತ ಕಾಯುತ್ತದೆ. ಪೆಟ್ರೋಲ್ ಮೂಲ ಬೆಲೆ ರೂಪಾಯಿ 47 ಇದೆ ಇಷ್ಟು ಏರಿಕೆ ಏಕೆ? ಭಾರತದ ನೆರೆ ದೇಶಗಳಲ್ಲಿ ರೂ. 50ರ ಸುತ್ತಿನಲ್ಲಿ ಇದೆ. ಆದರೆ ಭಾರತದಲ್ಲಿ ಇಷ್ಟು ಏರಿಕೆ ಅಮಾನವೀಯ. ಇದು ಸುಳ್ಳು ಹೇಳುವ ಸರಕಾರ. ಪ್ರಧಾನಿ ಒಬ್ಬರು ಇಷ್ಟು ಸುಳ್ಳು ಹೇಳುವುದು ನಾಚಿಕೆಗೇಡು ಎಂದು ರೈ ಖಂಡಿಸಿದರು.

ಪುತ್ತೂರು: ಸಾಲ ವಸೂಲಿಗಾಗಿ ಮನೆ ಮುಟ್ಟುಗೋಲು ; ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ ಗೆ ಶರಣು -Vishwanews24

ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಕುಮಾರ್, ಜೆ. ಆರ್. ಲೋಬೋ, ಇಬ್ರಾಹಿಂ ಕೋಡಿಜಾಲ್, ವಿಶ್ವಾಸ್‌ ದಾಸ್, ಸದಾಶಿವ ಉಲ್ಲಾಳ ಮೊದಲಾದವರು ಉಪಸ್ಥಿತರಿದ್ದರು

Vishwa News 24

Recent Posts

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

8 hours ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

8 hours ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

8 hours ago

ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ ಕಲಿಯಬೇಕಿಲ್ಲ : ವಿಪಕ್ಷಗಳಿಗೆ ಜಮೀರ್ ಅಹ್ಮದ್ ಖಾನ್‌  ತಿರುಗೇಟು – vishwanews24

ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್‌ ಅಹ್ಮದ್‌ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…

9 hours ago

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ – vishwanews24

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…

9 hours ago

2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸುತ್ತೇವೆ : ಪ್ರಧಾನಿ ಮೋದಿ – vishwanews24

2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸುತ್ತೇವೆ : ಪ್ರಧಾನಿ ಮೋದಿ ನವದೆಹಲಿ: 2047ರ ವೇಳೆಗೆ ‘ವಿಕಸಿತ ಭಾರತ’ದ ಕನಸನ್ನು…

9 hours ago