Featured

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್‌ ರದ್ದು ಪಡಿಸಿದ ಆರ್‌ಬಿಐ – vishwanews24

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್‌ ರದ್ದು ಪಡಿಸಿದ ಆರ್‌ಬಿಐ

ನವದೆಹಲಿ : ನಿಯಮಗಳನ್ನು ನಿರಂತರ ಉಲ್ಲಂಘನೆ ಮಾಡಿದ್ದಕ್ಕೆ ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನೀಡಿದ್ದ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದುಗೊಳಿಸಿದೆ.

ಬ್ಯಾಂಕಿನ ವ್ಯವಹಾರಗಳು ಹಾನಿಕಾರಕ ರೀತಿಯಲ್ಲಿ ನಡೆದಿದ್ದು, ಇದು ಠೇವಣಿದಾರರು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಬ್ಯಾಂಕ್ ಪದೇ ಪದೇ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿ ಆರ್‌ಬಿಐ ಬ್ಯಾಂಕಿನ ಪರವಾನಗಿಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ.

ಈ ಕ್ರಮವು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಮಾತ್ರ ಅನ್ವಯಿಸುತ್ತದೆ. ಪೇಟಿಎಂ ಆಪ್ (Paytm App), ಪೇಟಿಎಂ ಯುಪಿಐ (UPI), ಮತ್ತು ಇತರ ಮರ್ಚೆಂಟ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಇದನ್ನೂ ಓದಿ:

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್‌ಬಿಐ ಅಡಿಯಲ್ಲಿ ಬರುವ ವಿಶೇಷ ಬ್ಯಾಂಕ್‌ ಆಗಿತ್ತು.ಇದು ಸಾಮಾನ್ಯ ಬ್ಯಾಂಕುಗಳಿಗಿಂತ ಸ್ವಲ್ಪ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿತ್ತು.ಇವು ಗ್ರಾಹಕರಿಂದ ಠೇವಣಿ ಸ್ವೀಕರಿಸಲು ಅನುಮತಿ ಇತ್ತು. ಆದರೆ ಸಾಲ ನೀಡಲು ಅಥವಾ ಕ್ರೆಡಿಟ್ ಕಾರ್ಡ್ ನೀಡಲು ಇವುಗಳಿಗೆ ಅನುಮತಿ ಇರುವುದಿಲ್ಲ.

ಈ ಬ್ಯಾಂಕ್ ಖಾತೆಯಲ್ಲಿ ಒಬ್ಬ ಗ್ರಾಹಕರು ಗರಿಷ್ಠ 2 ಲಕ್ಷದವರೆಗೆ ಮಾತ್ರ ಹಣವನ್ನು ಇಟ್ಟುಕೊಳ್ಳಲು ಅವಕಾಶವಿತ್ತು. ಇದು ಉಳಿತಾಯ ಖಾತೆ , ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಮತ್ತು ವ್ಯಾಲೆಟ್ ಸೇವೆಗಳನ್ನು ನೀಡುತ್ತಿತ್ತು. ಇದಕ್ಕೆ ಸಾಮಾನ್ಯ ಬ್ಯಾಂಕುಗಳಂತೆ ಹೆಚ್ಚಿನ ಭೌತಿಕ ಶಾಖೆಗಳಿರಲಿಲ್ಲ. ಮೊಬೈಲ್ ಆಪ್ ಮೂಲಕವೇ ಎಲ್ಲ ವ್ಯವಹಾರಗಳು ನಡೆಯುತ್ತಿದ್ದವು.

ಇದನ್ನೂ ಓದಿ:

Vishwa News 24

Recent Posts

ಪುತ್ತೂರು : ವಿದ್ಯುತ್ ತಂತಿ ತಗುಲಿ ಬಾಲಕ ಸಾವು – vishwanews24

ಪುತ್ತೂರು : ವಿದ್ಯುತ್ ತಂತಿ ತಗುಲಿ  ಬಾಲಕ ಸಾವು ಪುತ್ತೂರು : ಆಕಸ್ಮಿಕವಾಗಿ ಕರೆಂಟ್ ಶಾಕ್ ಗೆ ಬಾಲಕನೊರ್ವ ಸಾವನಪ್ಪಿದ…

8 minutes ago

ಕಾರ್ಕಳ: ಕಾರು ಮತ್ತು ಬೈಕ್ ಅಪಘಾತ ; ತಂದೆ ಸಾವು , ಮಗಳು ಗಂಭೀರ – vishwanews24

ಕಾರ್ಕಳ: ಕಾರು ಮತ್ತು ಬೈಕ್ ಅಪಘಾತ ; ತಂದೆ ಸಾವು , ಮಗಳು ಗಂಭೀರ ಕಾರ್ಕಳ: ಕಾರು ಮತ್ತು ಬೈಕ್…

14 minutes ago

ಬಂಟ್ವಾಳ :  ಬಿ.ಸಿ.ರೋಡ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ – vishwanews24

ಬಂಟ್ವಾಳ :  ಬಿ.ಸಿ.ರೋಡ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬಂಟ್ವಾಳ:  ದ.ಕ. ಗ್ರಾಮೀಣ ಜಿಲ್ಲಾ ಮಹಿಳಾ ಕಾಂಗ್ರೆಸ್…

1 hour ago

ಮಣಿಪಾಲ : ನಡು ರಸ್ತೆಯಲ್ಲೇ ಜೋಡಿಗಳ ಅಸಭ್ಯ ವರ್ತನೆ ; ಸಾರ್ವಜನಿಕರ ಆಕ್ರೋಶ – vishwanews24

ಮಣಿಪಾಲ : ನಡು ರಸ್ತೆಯಲ್ಲೇ ಜೋಡಿಗಳ ಅಸಭ್ಯ ವರ್ತನೆ ; ಸ್ಥಳೀಯರಲ್ಲಿ ಆಕ್ರೋಶ – ವಿಡಿಯೋ ವೈರಲ್..! ಉಡುಪಿ: ಉಡುಪಿಯ ಮಣಿಪಾಲ…

2 hours ago

ಆನ್‌ಲೈನ್ ವಂಚನೆ : APK ಲಿಂಕ್ ಕ್ಲಿಕ್ ಮಾಡಿ 74,000 ರೂ ಕಳೆದುಕೊಂಡ ವ್ಯಕ್ತಿ – vishwanews24

ಆನ್‌ಲೈನ್ ವಂಚಕರ ಹೊಸ ಸ್ಕೆಚ್: ಪಾವತಿ ಮಾಡುವ ಮುನ್ನ ಎಚ್ಚರ ಬೆಂಗಳೂರು: ಬೆಂಗಳೂರಿನ 56 ವರ್ಷದ ಕಂಪನಿ ನಿರ್ದೇಶಕರೊಬ್ಬರು ನಕಲಿ…

2 hours ago

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದು ಬಿದ್ದ ಕಾಲು ಸಂಕ : 8 ಮಂದಿಗೆ ಗಾಯ – vishwanews24

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದು ಬಿದ್ದ ಕಾಲು ಸಂಕ : 8 ಮಂದಿಗೆ ಗಾಯ ಮಂಗಳೂರು: ದೈವದ ಭಂಡಾರ …

2 hours ago