ಬುಧವಾರ ಜನಿಸಿದವರು ಬುದ್ಧಿವಂತರು…ನೀವೂ ಬುಧವಾರ ಜನಿಸಿದವರೇ…?? ಹಾಗಾದರೆ ತಪ್ಪದೆ ಓದಿ -ಶ್ರೀ ಗಣಪತಿ ಭಟ್ 8088827292 -Vishwanews24

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ವ್ಯಕ್ತಿಯ ಭವಿಷ್ಯ ಹಾಗೂ ಅದೃಷ್ಟಗಳು ಅವನು ಹುಟ್ಟಿದ ಘಳಿಗೆ ಹಾಗೂ ದಿನವನ್ನು ಅವಲಂಬಿಸಿರುತ್ತದೆ. ವಾರದಲ್ಲಿ ಇರುವ ಪ್ರತಿಯೊಂದು ವಾರವು ವಿಶೇಷ ದೇವತೆಗಳಿಗೆ ಹಾಗೂ ಗ್ರಹಗಳಿಗೆ ಮೀಸಲಾಗಿರುವ ದಿನಗಳು. ಹಾಗಾಗಿ ವ್ಯಕ್ತಿ ಹುಟ್ಟಿದ ದಿನವು ಆ ದಿನದ ದೇವತೆ ಹಾಗೂ ಗ್ರಹಗಳಿಂದ ಆಶೀರ್ವದಿಸಲ್ಪಟ್ಟಿರುತ್ತಾರೆ ಎಂದು ಸಹ ಹೇಳಲಾಗುವುದು.

ವಾರಗಳ ಸಂಖ್ಯೆಯ ಪ್ರಕಾರ ಬುಧವಾರವು ನಾಲ್ಕನೇ ವಾರ. ಆ ದಿನವು ಬುಧ ಗ್ರಹಕ್ಕೆ ಸಂಬಂಧಿಸಿದ ದಿನ. ಬುಧವಾರದ ಆಡಳಿತಗಾರ ಬುಧ ಸೂರ್ಯನಿಗೆ ಸಮೀಪ ಇರುವವನು. ಇತರ ಗ್ರಹಗಳಿಗೆ ಹೋಲಿಸಿದರೆ ಬುಧನು ಅತ್ಯಂತ ಸಣ್ಣ ಗ್ರಹ ಎಂದು ಹೇಳಲಾಗುವುದು. ಈ ಗ್ರಹವು ವ್ಯಕ್ತಿಯ ಜೀವನ ಹಾಗೂ ಭವಿಷ್ಯದಲ್ಲಿ ಸಾಕಷ್ಟು ಅದೃಷ್ಟವನ್ನು ತಂದುಕೊಡುವುದು ಎಂದು ಹೇಳಲಾಗುತ್ತದೆ. ಕೆಲವು ಸಂಗತಿಯಲ್ಲಿ ವ್ಯಕ್ತಿ ನಿಧಾನಗತಿಯನ್ನು ತೋರುತ್ತಾನೆ ಆದರೂ ಬಹುತೇಕ ವಿಷಯದಲ್ಲಿ ಚತುರತೆಯನ್ನು ಪಡೆದುಕೊಳ್ಳುವರು.

ಬುಧವಾರ ಜನಿಸಿದವರು ಬುದ್ಧಿವಂತರು
ಬುಧವಾರ ಜನಿಸಿದ ವ್ಯಕ್ತಿಗಳು ಪ್ರಕ್ಷುಬ್ಧ ವ್ಯಕ್ತಿಗಳಾಗಿರುತ್ತಾರೆ. ಇವರು ಜೀವನದಲ್ಲಿ ಎಲ್ಲವನ್ನೂ ಪ್ರಶ್ನಿಸುತ್ತಾರೆ. ಬಹುಮುಖ ಸಾಮರ್ಥ್ಯ ಹೊಂದಿರುವ ಇವರು ಹೆಚ್ಚು ಸಂವೇದನಾ ಶೀಲರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಹೆಚ್ಚು ಸಕ್ರಿಯ ವ್ಯಕ್ತಿಗಳು ಹಾಗೂ ಬುದ್ಧಿವಂತರೂ ಆಗಿರುತ್ತಾರೆ. ಆದರೆ ಜೀವನದ ಕೆಲವು ಸಂಗತಿಗಳಲ್ಲಿ ಅಸಡ್ಡೆ ಹಾಗೂ ಆಲಸ್ಯವನ್ನು ಸಹ ತೋರುವರು. ತಮ್ಮ ಸುತ್ತಲೂ ನಡೆಯುವ ಹೊಸ ಬೆಳವಣಿಗೆ ಹಾಗೂ ಜ್ಞಾನದ ಬಗ್ಗೆ ನಿರಂತರ ಕಲಿಕೆಯನ್ನು ತೋರುವರು. ಎಲ್ಲಾ ವಿಷಯಗಳಲ್ಲೂ ಉತ್ಸಾಹ ಭರಿತವಾದ ಕಲಿಕಾ ಪ್ರವೃತ್ತಿಯನ್ನು ತೋರುವರು.

ಬುಧವಾರ ಜನಿಸಿದವರ ವ್ಯಕ್ತಿತ್ವ
ಬುಧವಾರ ಜನಿಸಿದ ವ್ಯಕ್ತಿಗಳು ಸಾಮಾನ್ಯವಾಗಿ ವಿಶ್ಲೇಷಣಾತ್ಮಕ ಚಿಂತಕರು. ಪ್ರಸ್ತುತ ಪರಿಸ್ಥಿತಿ ಹೇಗಿದೆ? ಸುತ್ತಲಿನ ವಾತಾವರಣ ಹೇಗಿದೆ ಎನ್ನುವುದರ ಆಧಾರದ ಮೇಲೆ ಅವರು ಜೀವನದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವರು. ಜೊತೆಗೆ ಅದಕ್ಕೆ ತಕ್ಕಂತೆ ತಮ್ಮ ನಡತೆಯನ್ನು ತಿದ್ದಿಕೊಳ್ಳುವರು. ಸಾಮಾಜಿಕ ಜೀವನವನ್ನು ಇಷ್ಟಪಡುವ ಇವರು ತಮ್ಮ ಸುತ್ತಮುತ್ತಲಿನ ಜನರು ಹಾಗೂ ನೆರೆಹೊರೆಯ ವ್ಯಕ್ತಿಗಳೊಂದಿಗೆ ಉತ್ಸಾಹದ ವರ್ತನೆಯನ್ನು ತೋರುವರು. ಆಳವಾದ ಚಿಂತನೆಯನ್ನು ತಕ್ಷಣದಲ್ಲಿ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಸಂವಹನದಲ್ಲಿ ಅತ್ಯಂತ ಪ್ರವೀಣರಾದ ಇವರು ಎಂತಹವರನ್ನೂ ಸಹ ಮಾತಿನಲ್ಲಿ ಸೋಲಿಸುವ ಹಾಗೂ ಅವರಿಗೆ ಮನವರಿಕೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರು ತಮ್ಮ ಮಾತಿನಿಂದಾಗಿಯೇ ಕೆಲವು ತೊಂದರೆಗಳನ್ನು ಮೈ ಮೇಲೆ ಎಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇವರು ಇತರರಿಗೆ ಅತ್ಯಂತ ಅಬ್ಬರದ ಅಥವಾ ಜೋರಾದ ವ್ಯಕ್ತಿಯಂತೆ ತೋರುವರು. ಇವರ ಅದೃಷ್ಟ ಸಂಖ್ಯೆ 5. ಅದೃಷ್ಟ ಮತ್ತು ಸಕಾರಾತ್ಮಕ ಫಲಿತಾಂಶವನ್ನು ಪಡೆಯಲು ಇವರು ಈ ಸಂಖ್ಯೆಯನ್ನು ಬಳಸಬಹುದು. ಜೊತೆಗೆ ಯಾವುದೇ ಶುಭ ಕೆಲಸ ಮಾಡುವ ಮುನ್ನ ಬುಧವಾರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕೈಗೊಳ್ಳಬೇಕು.

ವೃತ್ತಿ ಜೀವನ
ಬುಧವಾರ ಜನಿಸಿದ ವ್ಯಕ್ತಿಗಳು ಸಾಮಾನ್ಯವಾಗಿ ಹೆಚ್ಚು ತಾರ್ಕಿಕ ಮನಸ್ಸಿನವರಾಗಿರುತ್ತಾರೆ. ಗಣಿತ, ವಿಜ್ಞಾನ ಹಾಗೂ ಪ್ರಾಯೋಗಿಕ ಸಂಗತಿಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಥಾನ ಹಾಗೂ ಯಶಸ್ಸನ್ನು ಪಡೆದುಕೊಳ್ಳುವರು. ಇವರಲ್ಲಿ ಇರುವ ಕುತೂಹಲದ ಸ್ವಭಾವವು ಸುತ್ತಲಲ್ಲಿ ಇರುವ ಸಂಗತಿಗಳ ಬಗ್ಗೆ ಅನ್ವೇಷಣೆ ನಡೆಸಲು ಸಹಾಯವಾಗುವುದು. ಪ್ರಯಾಣವನ್ನು ಪ್ರೀತಿಸುವ ಇವರು ಹೊಸ ಹೊಸ ಪ್ರದೇಶ ಹಾಗೂ ಜನರೊಂದಿಗೆ ಬೆರೆಯಲು ಬಯಸುವರು. ಜೊತೆಗೆ ಅಲ್ಲಿಯ ವಿಶೇಷ ಸಂಗತಿಗಳನ್ನು ತಿಳಿದುಕೊಳ್ಳುವರು.

ಪ್ರೀತಿಯ ಜೀವನ
ಬುಧವಾರ ಜನಿಸಿದವರು ಅತ್ಯುತ್ತಮ ಸಂವಹನ ಕೌಶಲ್ಯವನ್ನು ಹೊಂದಿರುತ್ತಾರೆ. ಪ್ರೀತಿ ಪಾತ್ರರೊಂದಿಗೆ ಹೇಗೆ ವರ್ತಿಸಬೇಕು? ಮಾತಿನಲ್ಲಿ ಅವರನ್ನು ಹೇಗೆ ಆಕರ್ಷಿಸಬೇಕು ಎನ್ನುವುದು ಇವರಿಗೆ ತಿಳಿದಿರುತ್ತದೆ. ಸ್ನೇಹಿತರೊಂದಿಗೆ ಅಥವಾ ಸಂಗಾತಿಯ ಜೊತೆ ಎಲ್ಲಾದರೂ ಪ್ರಯಾಣಿಸುವಾಗ ಯಾವ ರೀತಿಯ ಮಾತುಗಳನ್ನು ಆಡಬೇಕು? ಅವರನ್ನು ಹೇಗೆ ಸಂತೋಷ ಗೊಳಿಸಬೇಕು? ಎನ್ನುವುದನ್ನು ಚೆನ್ನಾಗಿ ತಿಳಿದಿರುತ್ತಾರೆ.

ವೈವಾಹಿಕ ಜೀವನ
ಕುಟುಂಬದ ಬಗ್ಗೆ ಹಾಗೂ ಪ್ರೀತಿಯ ಬಗ್ಗೆ ಮನಸ್ಸಿನಲ್ಲಿ ಉತ್ತಮ ಸ್ಥಾನ ನೀಡಿದ್ದುದರಿಂದ ಸಂಬಂಧಗಳನ್ನು ಉತ್ತಮವಾಗಿ ನೋಡಿಕೊಳ್ಳುವರು. ಕೆಲವೊಮ್ಮೆ ದ್ವಂದ್ವ ವ್ಯಕ್ತಿತ್ವವು ಜೀವನದಲ್ಲಿ ವಿಶೇಷ ಒಲವು ಹುಟ್ಟುವಂತೆ ಮಾಡುವುದು. ಇವರ ಕೆಲವು ದ್ವಂದ್ವ ವರ್ತನೆ ಹಾಗೂ ಅಸಡ್ಡೆಯ ಸ್ವಭಾವದಿಂದ ಸಂಗಾತಿಯು ಇವರನ್ನು ವಿಶ್ವಾಸಾರ್ಹ ವ್ಯಕ್ತಿ ಅಲ್ಲ ಎಂದು ಭಾವಿಸುವರು. ನಿಮ್ಮ ಸಂಗಾತಿ ಏನು ಬಯಸುತ್ತಾರೋ ಆ ಸಂಗತಿಗಳ ಕಡೆಗೂ ಇವರು ಹೆಚ್ಚಿನ ಆಸಕ್ತಿ ಹಾಗೂ ಗಮನವನ್ನು ನೀಡಬೇಕು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ಆತ್ಮಹತ್ಯೆಗೆ ಶರಣಾದ ನವದಂಪತಿ ; ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪತಿಯೂ ನೇಣಿಗೆ ಶರಣು  – vishwanews24

ಆತ್ಮಹತ್ಯೆಗೆ ಶರಣಾದ ನವದಂಪತಿ ; ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪತಿಯೂ ನೇಣಿಗೆ ಶರಣು  ತುಮಕೂರು: ಪತ್ನಿ ನೇಣಿಗೆ ಶರಣಾಗಿದ್ದನ್ನು…

1 hour ago

ಬೆಂಗಳೂರು: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಬೆಂಗಳೂರು: ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ನವವಿವಾಹಿತೆ ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ನವವಿವಾಹಿತೆಯೊಬ್ಬರು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ…

2 hours ago

ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ -vishwanews24

ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ ಮೈಸೂರು : ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಹಿನ್ನಲೆ ಗಾಯಕಿ ಎಸ್.ಜಾನಕಿ…

2 days ago

ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿ – vishwanews24

ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿವಕುಮಾರ್…

2 days ago

ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ – vishwanews24

ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ ಮೈಸೂರು: "ನಾನು ಕಂಬಳವನ್ನು…

2 days ago

ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್‌ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ – vishwanews24

ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್‌ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ ಉಡುಪಿ:…

2 days ago