Featured

ಬೆಂಗಳೂರು ಕಮಿಷನರ್​ ಆಗಿ ಅಧಿಕಾರ ಸ್ವೀಕರಿಸಿದ ಪ್ರತಾಪ್​ ರೆಡ್ಡಿ – Vishwanews24

ಬೆಂಗಳೂರು ಕಮಿಷನರ್​ ಆಗಿ ಅಧಿಕಾರ ಸ್ವೀಕರಿಸಿದ ಪ್ರತಾಪ್​ ರೆಡ್ಡಿ

ಬೆಂಗಳೂರು: ರಾಜಧಾನಿಯ ನೂತನ ಪೊಲೀಸ್​ ಆಯುಕ್ತರಾಗಿ ನಮೇಕವಾದ ಎಡಿಜಿಪಿ ಸಿ.ಎಚ್​.ಪ್ರತಾಪ್​ ರೆಡ್ಡಿ ಅವರಿಗೆ ನಿರ್ಗಮಿತ ಕಮಿಷನರ್​ ಕಮಲ್​ ಪಂತ್ ಅವರು ಮಂಗಳವಾರ ಅಧಿಕಾರ ಹಸ್ತಾಂತರಿಸಿದರು. 1991ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿರುವ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ಮೂಲದ ಪ್ರತಾಪ್​ರೆಡ್ಡಿ, ಬೆಂಗಳೂರು ನಗರದ 35ನೇ ಕಮಿಷನರ್​ ಆಗಿ ಅಧಿಕಾರ ಸ್ವೀಕರಿಸಿದರು.

ಹೆಚ್ಚುವರಿ‌ ಪೊಲೀಸ್ ಆಯುಕ್ತರು, ನಗರದ ಎಲ್ಲ ಡಿಸಿಪಿಗಳು ಉಪಸ್ಥಿತರಿದ್ದರು.

ಬೆಂಗಳೂರಿನ ನ್ಯಾಷನಲ್​ ಅಸೋಸಿಯೇಷನ್​ ಆಫ್​ ಸಾಫ್ಟ್​ವೇರ್​ ಆಯಂಡ್​ ಸರ್ವೀಸಸ್​ ಕಂಪನೀಸ್​ (ಸೈಬರ್​ ಸೆಕ್ಯೂರಿಟಿ ವಿಂಗ್​) ಸಲಹೆಗಾರರಾಗಿ ಪ್ರತಾಪ್​ರೆಡ್ಡಿ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದರು. ಕೆಲ ಕಾಲ ಸೈಬರ್​ ಸೆಕ್ಯೂರಿಟಿ ವಿಭಾಗದ ನಿರ್ದೇಶಕರಾಗಿದ್ದರು. ತಾಂತ್ರಿಕ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿರುವ ವಿರಳ ಐಪಿಎಸ್​ ಅಧಿಕಾರಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ವಿಜಯಪುರ, ಕಲಬುರಗಿಯಲ್ಲಿ ಎಸ್​ಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Vishwa News 24

Recent Posts

ಉದ್ಯಾವರ :ಚರಂಡಿಗೆ ಬಿದ್ದ ಸಕ್ಕರೆ ಸಾಗಣೆ ಲಾರಿ; ಮದ್ಯದ ಅಮಲಿನಲ್ಲಿದ್ದ ಚಾಲಕ ವಶಕ್ಕೆ – vishwanews24

ಉದ್ಯಾವರ :ಚರಂಡಿಗೆ ಬಿದ್ದ ಸಕ್ಕರೆ ಸಾಗಣೆ ಲಾರಿ; ಮದ್ಯದ ಅಮಲಿನಲ್ಲಿದ್ದ ಚಾಲಕ ವಶಕ್ಕೆ ಉಡುಪಿ: ರಾಷ್ಟ್ರೀಯ ಹೆದ್ದಾರಿ–66ರ ಉದ್ಯಾವರ ಸಮೀಪ…

5 minutes ago

ಹೆಜಮಾಡಿ–ಪಡುಬಿದ್ರಿ ಟೋಲ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸಚಿವರಿಗೆ ನಿಯೋಗದಿಂದ ಮನವಿ – vishwanews24

ಹೆಜಮಾಡಿ–ಪಡುಬಿದ್ರಿ ಟೋಲ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸಚಿವರಿಗೆ ನಿಯೋಗದಿಂದ ಮನವಿ ಬೆಂಗಳೂರು: ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ…

11 minutes ago

ಮೂಡಬಿದ್ರೆ: ಯುವತಿ ನಾಪತ್ತೆ ; ಪತ್ತೆಗೆ ಮನವಿ – vishwanews24

ಮೂಡಬಿದ್ರೆ: ಯುವತಿ ನಾಪತ್ತೆ ; ಪತ್ತೆಗೆ ಮನವಿ ಮೂಡಬಿದ್ರೆ: ಸಾಬಿರಾ ಬಾನು (20) ಎಂಬವರು ಜುಲೈ 27 ರಂದು ಕಾಣೆಯಾಗಿದ್ದು,…

18 minutes ago

ಉಡುಪಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯ ಕುಟುಂಬಕ್ಕೆ 1.45 ಕೋಟಿ ವಿಮಾ ಚೆಕ್ ಹಸ್ತಾಂತರ – vishwanews24

ಉಡುಪಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯ ಕುಟುಂಬಕ್ಕೆ 1.45 ಕೋಟಿ ವಿಮಾ ಚೆಕ್ ಹಸ್ತಾಂತರ ಉಡುಪಿ: ಕರ್ತವ್ಯದಲ್ಲಿದ್ದಾಗ ರಸ್ತೆ…

22 minutes ago

ವಿಮೆ ಇಲ್ಲದ ವಾಹನಗಳಿಗೆ ಇನ್ಮುಂದೆ ಪೆಟ್ರೋಲ್‌ ನಿರಾಕರಣೆ : ಕೇಂದ್ರಕ್ಕೆ ಸುಪ್ರೀಂ ನಿದೇರ್ಶನ ! vishwanews24

ವಿಮೆ ಇಲ್ಲದ ವಾಹನಗಳಿಗೆ ಬಂಕ್‌ಗಳಲ್ಲಿ ಪೆಟ್ರೋಲ್‌ ನಿರಾಕರಣೆ : ಪ್ರಾಯೋಗಿಕ ಯೋಜನೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ ನವದೆಹಲಿ: ದೇಶದಲ್ಲಿ ವಿಮೆ ಇಲ್ಲದೆಯೇ…

41 minutes ago

ಮಂಗಳೂರು:ಭಾರೀ ಮಳೆಗೆ ಮತ್ತೆ ಕುಸಿಯಲಾರಂಭಿಸಿದ ಕೆತ್ತಿಕಲ್ ಗುಡ್ಡ – vishwanews24

ಮಂಗಳೂರು:ಭಾರೀ ಮಳೆಗೆ ಮತ್ತೆ ಕುಸಿಯಲಾರಂಭಿಸಿದ ಕೆತ್ತಿಕಲ್ ಗುಡ್ಡ ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ಷೇಪ ಮಂಗಳೂರು: ವಾಮಂಜೂರು ತಿರುವೈಲು ಶಾಲೆಯ ಸಮೀಪದ…

48 minutes ago