ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿ ಇಂದು ದೆಹಲಿಯ ಕಾರ್ ಬೈಕ್ ಗೆ ಹಿಟ್ ಅಂಡರ್ ರನ್ ಮಾದರಿಯಲ್ಲಿಯೇ ಭೀಕರ ಅಮಾನವೀಯ ಕೃತ್ಯವೊಂದು ನಡೆದಿದೆ. ಕಾರ್ ಗೆ ಡಿಕ್ಕಿಯಾಗಿದ್ದಕ್ಕೆ ಗಲಾಟೆ ಮಾಡಿ ಬೈಕ್ ಹಿಂಪದಿ ಹಿಡಿದಂತ ವ್ಯಕ್ತಿಯನ್ನೇ ಒಂದು ಕಿಲೋಮೀಟರ್ ದೂರದವರೆಗೆ ಬೈಕ್ ಸವಾರ ಎಳೆದೊಯ್ದಿರೋ ಡೆಡ್ಲಿ ಕೃತ್ಯ ನಡೆದಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಲ್ಲಿ ಬೈಕ್ ಸವಾರನೊಬ್ಬ ಟಾಟಾ ಸುಮೋಗೆ ಡಿಕ್ಕಿ ಹೊಡೆದಿದ್ದನು. ಈ ವೇಳೆ ಸುಮೋ ಚಾಲಕ ಬೈಕ್ ಸವಾರನನ್ನು ಪ್ರಶ್ನಿಸಿ, ಗಲಾಟೆ ಮಾಡಿದ್ದಾನೆ. ಈ ವೇಳೆ ಬೈಕ್ ಸವಾರ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಬೈಕ್ ಸೀಟ್ ಹಿಂಪದಿಯ ಹಿಡಿಯನ್ನು ಜಗ್ಗಿ ಹಿಡಿದಿದ್ದಾನೆ.
ಇದನ್ನೂ ಲೆಕ್ಕಿಸದೇ ಬೈಕ್ ಸವಾರ ಮಾತ್ರ ಮಾಗಡಿ ರಸ್ತೆ ಟೋಲ್ ಗೇಟ್ ನಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಸುಮಾರು ಒಂದು ಕಿಲೋಮೀಟರ್ ದೂರು ರಸ್ತೆಯಲ್ಲಿ ಧರಧರ ಎಳೆದೊಯ್ದಿದ್ದಾನೆ.
ಇದನ್ನು ಗಮನಿಸಿದಂತ ಸಾರ್ವಜನಿಕರು, ಬೈಕ್ ಸವಾರನನ್ನು ತಡೆದು, ಪ್ರಶ್ನಿಸಿದ್ದಾರೆ. ಅಲ್ಲದೇ ಅಮಾನವೀಯ ರೀತಿಯಲ್ಲಿ ವಯಸ್ಸಾಗಿದ್ದಂತ ಕಾರು ಚಾಲಕ ಬೈಕ್ ಹಿಂದೆ ಹಿಡಿದಿದ್ದರೂ ಎಳೆದೊಯ್ದು ಕೃತ್ಯವೆಸಗಿದಂತ ಬೈಕ್ ಸವಾರನಿಗೆ ಧರ್ಮದೇಟು ನೀಡಿದರು.
ಸಾರ್ವಜನಿಕರ ಒಡೆತದಿಂದಾಗಿ ಬೈಕ್ ಸವಾರ ಅಸ್ವಸ್ಥಗೊಂಡಿದ್ದನು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಬೈಕ್ ಸವಾರ, ಕಾರು ಚಾಲಕ ಇಬ್ಬರನ್ನು ಆಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು.
Join our Whatsapp group by clicking the below link 👇👇
ಕೌಟುಂಬಿಕ ಕಲಹ : ಕೊಲೆಯಲ್ಲಿ ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…
ಲಡಾಖ್ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್ನಲ್ಲಿ4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…
ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…
ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆ ವಧು ಕರೆತರಲು ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು ಹಾಸನ: ಕೆಲವೇ…
ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ ಪುತ್ತೂರು: ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ನೀರಕಟ್ಟೆ…
ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ ಉಡುಪಿ : ಸುದೀಪ್ ಶೆಟ್ಟಿ ಆತ್ಮಹತ್ಯೆ…