Featured

ಬೈಂದೂರು: ವಿಧಾನಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ರ ನಿಧನ : ಜೆಡಿಎಸ್ ಮುಖಂಡ ಡಾ.ರವಿ ಶೆಟ್ಟಿ  ಸಂತಾಪ  -Vishwanews24

ಬೈಂದೂರು: ವಿಧಾನಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ರ ನಿಧನ : ಜೆಡಿಎಸ್ ಮುಖಂಡ ಡಾ.ರವಿ ಶೆಟ್ಟಿ  ಸಂತಾಪ  -Vishwanews24

ಬೈಂದೂರು: ಧರ್ಮೇಗೌಡ ರಂಥ ಸೂಕ್ಷ್ಮ ವ್ಯಕ್ತಿತ್ವದ ವ್ಯಕ್ತಿಗಳು ಸಿಗುವುದು ಬಹಳ ಕಷ್ಟ. ಎಸ್ ಎಲ್ ಬೋಜೇಗೌಡ ರ ಅಣ್ಣನಾದ ಧರ್ಮೇಗೌಡರು ನನಗೆ ಬಹಳಷ್ಟು ಹತ್ತಿರದ ವ್ಯಕ್ತಿ ಎಂದರೆ ತಪ್ಪಾಗಲಾರದು.

ಒಂದು ವಿಷಯ ನೆನಪಿಸಿಕೊಳ್ಳ ಬೇಕೆಂದರೆ. ದೇವಸ್ಥಾನ ಪೂಜೆಗೆ ಅವರೊಂದಿಗೆ ನಾನು ಕೂಡ ಹೋಗಿದ್ದೆ ಅವರ ಸರಳ ವ್ಯಕ್ತಿತ್ವ ನೋಡಿ ತಲೆದೂಗದವರಿಲ್ಲ ಒಟ್ಟಿಗೆ ಪೂಜೆ ,ಒಟ್ಟಿಗೆ ಊಟ ಮಾಡಿದ ಸ್ನೇಹಜೀವಿ ಸಾವಿರ ಸಜ್ಜನಿಕೆಯ ಅಂತಹ ವ್ಯಕ್ತಿಯನ್ನು ಕಳೆದುಕೊಂಡ ನನಗೆ ನೋವು ಬಹಳಷ್ಟು ಕಾಡುತ್ತಿದೆ.ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು..

ವಿಧಾನಸೌಧ ಮತ್ತು ವಿಧಾನಪರಿಷತ್ ಜನರ ಕಷ್ಟಗಳನ್ನು ನಾಡಿನ ಜ್ವಾಲಾಅಂತ ಸಮಸ್ಯೆಯನ್ನು ಆರೋಗ್ಯಕರವಾಗಿ ಚರ್ಚಿಸಬೇಕಾದಈ ಎರಡು ಕ್ಷೇತ್ರಗಳಲ್ಲಿ ಇಂದು ಕೆಲವು ಭ್ರಷ್ಟ ರಾಜಕಾರಣಿಗಳು ಪ್ರಚಾರಕ್ಕೆ ಬಳಸಿ ಕೊಳ್ಳುತ್ತಿರುವುದು ಸಾಕಷ್ಟು ಬೇಸರವನ್ನುಂಟು ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಾಯಂ ಆಗಿದೆ.

ದೇವಸ್ಥಾನಕ್ಕೆ ಸಮನಾದ ಸದನಗಳಲ್ಲಿ ಅಂಗಿ ಹರಿದುಕೊಂಡು ಪೀಠೋಪಕರಣ ಧ್ವಂಸಗೊಳಿಸಿ, ಎಳೆದಾಡಿ, ಹೊಡೆದಾಡಿ, ಗಲ್ಲಿ ರೌಡಿಗಳಂತೆ ವರ್ತಿಸುವ ಕೆಲವು ಭ್ರಷ್ಟ ರೌಡಿ ರಾಜಕಾರಣಿಗಳು ಇರುವವರೆಗೆ ಆಸ್ಥಾನಕ್ಕೆ ಗೌರವ ಇಲ್ಲ ನಾಡಿನ ಜನತೆಗೆ ನ್ಯಾಯ ದೊರಕುವುದಿಲ್ಲ..

ಇತ್ತೀಚಿನ ರಾಜಕೀಯ ವ್ಯವಸ್ಥೆ ತುಂಬಾ ಬೇಸರ ಮೂಡಿಸುವಂತಿದೆ. ನಾವು ಈಗ ಒಬ್ಬ ಹಿರಿಯ ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ.ಇದರಿಂದ ನಾಡಿಗೆ ಮತ್ತು ಪಕ್ಷಕ್ಕೆ ಬಹಳ ನಷ್ಟವಾಗಿದ್ದು ಇನ್ನಾದರೂ ಸದನಗಳ ಗೌರವ ಉಳಿಸುವುದಕ್ಕೆ ಕೆಲಸ ಆಗಲಿ . ಹಾಗೆಯೇ ಎಸ್ಎಲ್ ಭೋಜೆಗೌಡ ರ ಸಾವಿನ ಸತ್ಯ ಸತ್ಯ ಹೊರಬರಲಿಅವರ ಕುಟುಂಬಕ್ಕೆ ಅವರನ್ನು ಕಳೆದುಕೊಂಡ ನೋವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೋರಿದರು..

Vishwa News 24

Recent Posts

ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ನಿಧನ – vishwanews24

ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ನಿಧನ ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್,…

2 hours ago

ಶಿರ್ವ ವಿದ್ಯಾವರ್ಧಕ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಯಾಗಿ ಮಟ್ಟಾರ್ ರತ್ನಾಕರ್ ಹೆಗ್ಡೆ ಆಯ್ಕೆ – vishwanews24

ಶಿರ್ವ ವಿದ್ಯಾವರ್ಧಕ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಯಾಗಿ ಮಟ್ಟಾರ್ ರತ್ನಾಕರ್ ಹೆಗ್ಡೆ ಆಯ್ಕೆ ಉಡುಪಿ: ಕಾಪು ತಾಲೂಕಿನ ಶಿರ್ವದಲ್ಲಿರುವ…

2 hours ago

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದ ಕೇರಳಂ ಮುಖ್ಯಮಂತ್ರಿ ವಿ. ಡಿ. ಸತೀಶನ್ – vishwanews24

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದ ಕೇರಳಂ ಮುಖ್ಯಮಂತ್ರಿ ವಿ. ಡಿ. ಸತೀಶನ್ ಕೊಲ್ಲೂರು: ಕೇರಳಂ…

3 hours ago

ಸೌದಿಯಲ್ಲಿ ಹೃದಯಾಘಾತ: ಪಡುಬಿದ್ರಿ ಮೂಲದ ಉದ್ಯಮಿ ನಿಧನ – vishwanews24

ಸೌದಿಯಲ್ಲಿ ಹೃದಯಾಘಾತ: ಪಡುಬಿದ್ರಿ ಮೂಲದ ಉದ್ಯಮಿ ನಿಧನ ಪಡುಬಿದ್ರಿ: ಪಡುಬಿದ್ರಿಯ ದೀನ್‍ಸ್ಟ್ರೀಟ್ ನಿವಾಸಿ, ದಿ. ಇದಿನಬ್ಬ ಅವರ ಪುತ್ರ ರಿಯಾಝ್…

3 hours ago

ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ – vishwanews24

ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ ಮಡಿಕೇರಿ: ಗುಂಡು ಹಾರಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಸಮೀಪದ ಕುಂಬಳದಾಳು ಬಳಿ…

3 hours ago

ಉಡುಪಿ: ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗುವ ಬಿಎಲ್‌ಒಗಳ ವಿರುದ್ಧ ಕ್ರಮ : ಡಿಸಿ ಸ್ವರೂಪ ಟಿ.ಕೆ. ಎಚ್ಚರಿಕೆ – vishwanews24

ಉಡುಪಿ : ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಿ ಅರ್ಜಿಗಳನ್ನು ವಿತರಿಸಲು ಮತ್ತು ಸಂಗ್ರಹಿಸಲು ಸೂಚಿಸಲಾಗಿದೆ : ಡಿಸಿ ಸ್ವರೂಪ…

4 hours ago