ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ಜಿಲ್ಲೆಯ ನಂದಿಗಿರಿಧಾಮದ ರಸ್ತೆಯಲ್ಲಿ ಅಂಕು ಡೊಂಕಿನ ರಸ್ತೆಯಲ್ಲಿ ಬೈಕಿನ ಹಿಂಬದಿ ಸೀಟಿನಲ್ಲಿ ಕೂತು ಸಾಗಬೇಕಾದ ಯುವತಿಯೊಬ್ಬಳು ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂತು ಸಾಗಿದ್ದಾಳೆ.
ಪ್ರೇಮಿಗಳಿಬ್ಬರು ನಂದಿಗಿರಿಧಾಮದ ರಸ್ತೆಯಲ್ಲಿ ಅಸಭ್ಯವಾಗಿ ಬೈಕ್ ಚಲಾಯಿಸಿರುವ ವಿಡಿಯೋವೊಂದು ಲಭ್ಯವಾಗಿದೆ. ತನ್ನ ಪ್ರೇಮಿಯನ್ನು ಬೈಕಿನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಪ್ರಿಯಕರ ಬೈಕ್ ಓಡಿಸಿದ್ದಾನೆ. ಪ್ರೇಮಿಗಳ ಜಾಲಿ ರೈಡನ್ನು ಅವರ ಹಿಂದೆ ಬರುತ್ತಿದ್ದ ಸವಾರರು ವಿಡಿಯೋ ಮಾಡಿದ್ದಾರೆ.
ಯುವತಿಯೊಬ್ಬಳು ತನ್ನ ಪ್ರಿಯಕರನ್ನ ತನ್ನ ತೋಳಲ್ಲಿ ಬಂಧಿ ಮಾಡಿಕೊಂಡು ಬೈಕಿನ ಟ್ಯಾಂಕ್ ಮೇಲೆ ಕುಳಿತು ಹೋಗಿದ್ದಾಳೆ. ಇತ್ತ ಬೈಕ್ ರೈಡ್ ಮಾಡುತ್ತಿದ್ದ ಪ್ರಿಯಕರ ಲೋಕದ ಪರಿವೇ ಇಲ್ಲದಂತೆ ಬೈಕ್ ರೈಡ್ ಮಾಡುತ್ತಿದ್ದನು. ಅಸಲಿಗೆ ಕಾನೂನನ್ನ ಗಾಳಿಗೆ ತೂರಿ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಜೋಡಿಯ ಹುಚ್ಚಾಟ ಇತರೆ ಪ್ರವಾಸಿಗರಿಗೆ ಇರುಸು ಮುರುಸು ಉಂಟುಮಾಡಿತ್ತು ಎಂದು ಪ್ರವಾಸಿಗ ಚಿಕ್ಕ ಅಂಜಿನಪ್ಪ ಹೇಳಿದ್ದಾರೆ.
ಪ್ರೇಮಿಗಳ ಪಾಲಿನ ಸ್ವರ್ಗ ತಾಣದಲ್ಲಿ ವಿಹರಿಸಿ ಬಂದಿದ್ದ ಈ ಜೋಡಿ ಇಡೀ ಲೋಕದ ಪರಿವೆಯನ್ನ ಮರೆತಿದ್ದರು. ಬೈಕಿನ ಮುಂಭಾಗದ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರಿಯಕರನ್ನ ಬಿಗಿದಪ್ಪಿಕೊಂಡಿದ್ದು, ತನ್ನ ಪ್ರಿಯತಮೆಯ ತೋಳಲ್ಲಿ ಬಂಧಿಯಾಗಿದ್ದ ಆ ಯುವಕ ಜಾಂ ಜೂಮ್ ಅಂತ ಬೈಕ್ ರೈಡ್ ಮಾಡುತ್ತಿದ್ದನು. ನಡುರಸ್ತೆಯಲ್ಲಿ ಯಾರಿಗೂ ಡೋಂಟ್ ಕೇರ್ ಎಂಬಂತೆ ಬೈಕಿನಲ್ಲಿ ಸಾಗುತ್ತಿದ್ದ ಈ ಜೋಡಿಯ ಹುಚ್ಚಾಟ ಇತರೆ ವಾಹನ ಸವಾರರಿಗೆ ಮುಜುಗರವನ್ನುಂಟು ಮಾಡಿತ್ತು. ಇದು ಇದೊಂದು ಜೋಡಿಯ ಕಥೆ ಅಲ್ಲ ಬಹುತೇಕರದ್ದು ಇದೆ ತರ ಅಂತ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ನಂದಿಗಿರಿಧಾಮ ಹೇಳಿ ಕೇಳಿ ಪ್ರೇಮಿಗಳ ಪಾಲಿನ ಅಚ್ಚು ಮೆಚ್ಚಿನ ತಾಣವಾಗಿದೆ. ಆದರೆ ಪ್ರೇಮದ ಹೆಸರಲ್ಲಿ ನಡುರಸ್ತೆಯಲ್ಲೇ ಯಾರಿಗೂ ಡೋಂಟ್ ಕೇರ್ ಮಾಡದ ಜೋಡಿ ಹಕ್ಕಿಗಳು ಸಭ್ಯತೆಯ ಎಲ್ಲೆಯನ್ನೇ ಮೀರಿ ನಡೆದುಕೊಂಡಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…