ಬೆಳಗಿನ ಉಪಹಾರಕ್ಕೆ ದೋಸೆಗಿಂತ ಬೆಸ್ಟ್ ತಿನಿಸು ಇನ್ಯಾವುದೂ ಇಲ್ಲ. ಹಾಗಿದ್ದರೆ ಬನ್ನಿ ಬ್ರೆಡ್ ದೋಸೆಯನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.
ಸಾಮಾಗ್ರಿಗಳು
1. ಬ್ರೆಡ್ ಸ್ಲೈಸ್ – 10
2.ರವೆ- 1/2 ಕಪ್
3.ಮೊಸರು – 1/2 ಕಪ್
4.ಅಕ್ಕಿ ಹುಡಿ – 1 1/2 ಚಮಚ
5.ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ
1.ಎಣ್ಣೆ – 2 ಚಮಚ
2.ಜೀರಿಗೆ – 1/4 ನೇ ಚಮಚ
3.ಸಾಸಿವೆ – 1/2 ಕಪ್
4.ಉದ್ದಿನ ಬೇಳೆ – 1/2 ಚಮಚ
5.ಕರಿಬೇವಿನೆಸಳು – 2-3 (ಸಣ್ಣದಾಗಿ ಹೆಚ್ಚಿದ್ದು)
6.ಹಸಿಮೆಣಸು – 2 (ಸಣ್ಣದಾಗಿ ಹೆಚ್ಚಿದ್ದು)
7.ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
8.ಶುಂಠಿ – 1/2 ಇಂಚು ತುಂಡುಮಾಡಿದ್ದು (ಸಣ್ಣದಾಗಿ ಕತ್ತರಿಸಿದ್ದು)
ಮಾಡುವ ವಿಧಾನ
1. ಬ್ರೆಡ್ನ ಕಂದು ಭಾಗವನ್ನು ಕತ್ತರಿಸಿ ತೆಗೆಯಿರಿ.
2.ನೀರಿನಲ್ಲಿ 2 ನಿಮಿಷಗಳಷ್ಟು ಕಾಲ ಎಲ್ಲಾ ಬ್ರೆಡ್ ತುಂಡುಗಳನ್ನು ನೆನೆಸಿಡಿ.
3.ರವೆ, ಅಕ್ಕಿ ಹಿಟ್ಟು ಮತ್ತು ನೀರನ್ನು ಸೇರಿಸಿಕೊಂಡು ದಪ್ಪನೆಯ ಹಿಟ್ಟನ್ನು ಸಿದ್ಧಮಾಡಿಕೊಳ್ಳಿ.
4.ನೀರಿನಿಂದ ಬ್ರೆಡ್ ತುಂಡುಗಳನ್ನು ಹೊರತೆಗೆದು ಅವುಗಳನ್ನು ಚೆನ್ನಾಗಿ ಹುಡಿಮಾಡಿಕೊಳ್ಳಿ ಮತ್ತು ನಿಮ್ಮ ಕೈಗಳಿಂದ ಮೆತ್ತಗಾಗಿಸಿಕೊಳ್ಳಿ.
5.ಹುಡಿ ಮಾಡಿದ ಬ್ರೆಡ್ ಅನ್ನು ಹಿಟ್ಟಿಗೆ ಸೇರಿಸಿ ಮತ್ತು ಇದಕ್ಕೆ ಮೊಸರನ್ನು ಬೆರೆಸಿ, ಹಾಗೂ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
6.ಇಷ್ಟೆಲ್ಲಾ ಆದ ನಂತರ ಬ್ಲೆಂಡರ್ಗೆ ಎಲ್ಲವನ್ನೂ ಹಾಕಿ ಮತ್ತು ತಿರುಗಿಸಿಕೊಳ್ಳಿ. ಹಿಟ್ಟಿನಲ್ಲಿ ಯಾವುದೇ ಗಂಟುಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
7.ಈಗ ಸ್ವಚ್ಛವಾದ ಪಾತ್ರೆಗೆ ಹಿಟ್ಟನ್ನು ಸುರಿದುಕೊಳ್ಳಿ ಮತ್ತು ಹಿಟ್ಟಿನ ಸಾಂದ್ರತೆಯನ್ನು ಪರಿಶೀಲಿಸಿ.
8.ಇನ್ನು ಬಾಣಲೆಯನ್ನು ಅನ್ನು ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿ.
9.ಜೀರಿಗೆ, ಸಾಸಿವೆ,ಉದ್ದಿನ ಬೇಳೆ, ಕರಿಬೇವಿನೆಸಳು, ಈರುಳ್ಳಿ, ಶುಂಠಿ ಮತ್ತು ಹಸಿಮೆಣಸನ್ನು ಬಾಣಲೆಯಲ್ಲಿ ಹುರಿದುಕೊಳ್ಳಿ…ಈರುಳ್ಳಿ ಕಂದು ಬಣ್ಣಕ್ಕೆ ತಿರುಗಲಿ.
10.ಇನ್ನು ಗ್ಯಾಸ್ನಿಂದ ಬಾಣಲೆಯನ್ನು ಇಳಿಸಿ
11.ತವಾ ತೆಗೆದುಕೊಂಡು ಅದನ್ನು ಬಿಸಿಮಾಡಿ.
12.ತವಾಕ್ಕೆ ಎಣ್ಣೆಯನ್ನು ಹಾಕಿ ಮತ್ತು ಸ್ವಚ್ಛ ಬಟ್ಟೆಯಿಂದ ಒರೆಸಿ.
13.ಒಗ್ಗರಣೆಯನ್ನು ಹಿಟ್ಟಿಗೆ ಹಾಕಿ ಮತ್ತು ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ
14.ಈಗ ವೃತ್ತಾಕಾರದ ಸೌಟನ್ನು ಬಳಸಿಕೊಂಡು ತವಾದ ಮೇಲೆ ಹಿಟ್ಟನ್ನು ಸುರಿಯಿರಿ.
15.ಸೌಟಿನ ತಳವನ್ನು ಬಳಸಿಕೊಂಡು ದೋಸೆಯನ್ನು ಎಲ್ಲೆಡೆಯೂ ಹರಡಿಸಿ
16.ದೋಸೆಯ ಮಧ್ಯಭಾಗಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ನಂತರ 2-3 ನಿಮಿಷಗಳಷ್ಟು ಕಾಲ ಕಾಯಿರಿ.
17.ಬ್ರೆಡ್ ದೋಸೆಯನ್ನು ಬಿಸಿಬಿಸಿಯಾಗಿ ಸೇವಿಸಲು ನೀಡಿ.
ಮಧ್ಯದಲ್ಲಿ ಆಲೂಗಡ್ಡೆ ಪಲ್ಯ ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಬೇಯಿಸಿ. ದೋಸೆ ಗರಿಗರಿಯಾದ ಮೇಲೆ ಪೋಲ್ಡ್ ಮಾಡಿ ತೆಗೆಯಿರಿ. ಕಾಯಿ ಚಟ್ನಿ ಜೊತೆ ಬ್ರೆಡ್ ಮಸಾಲೆ ದೋಸೆ ಸವಿಯಲು ಸಿದ್ಧ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…