Featured

ಬ್ಲೂವೆಲ್ ಗೇಮ್ ಮುಗೀತು, ಮತ್ತೆ ಶುರುವಾಯಿತು ಕೀಕೀ ಡ್ಯಾನ್ಸ್ ಹೊಸ ಗೇಮ್ ಚಾಲೇಂಜ್. ಆಡುವ ಮುನ್ನವಿರಲಿ ಜೀವದ ಭಯ…!

ಬ್ಲೂ ವೇಲ್ ಚಾಲೆಂಜ್ ನಂತರ ವಿಶ್ವಾದ್ಯಂತ ಕೀಕೀ ಡ್ಯಾನ್ಸ್ ರೂಪದಲ್ಲಿ ಮತ್ತೆ ಮಾರಣಾಂತಿಕ ಚಾಲೆಂಜ್ ಒಂದು ಟ್ರೆಂಡ್ ಆಗಿದೆ. ದಿನದಿಂದ ದಿನಕ್ಕೆ ಈ ಕೀಕೀ ಡ್ಯಾನ್ಸ್ ಚಾಲೆಂಜ್ ವೈರಲ್ ಆಗತೊಡಗಿದೆ. ಕೀಕೀ ಚಾಲೆಂಜ್ ಅಥವಾ ಇನ್ ಮೈ ಫೀಲಿಂಗ್ಸ್ ಚಾಲೆಂಜ್ ಅಮೆರಿಕ ರ್ಯಾಪರ್ ಡ್ರೇಕ್ಸ್ ನ ಇತ್ತೀಚಿನ ಹಾಡಿನಿಂದ ಪ್ರೇರಿತಗೊಂಡಿದ್ದು, ಚಲಿಸುತ್ತಿರುವ ಕಾರಿನ ಜೊತೆಗೆ ರಸ್ತೆಯಲ್ಲಿ ನೃತ್ಯ ಮಾಡುವುದು ಈ ಚಾಲೆಂಜ್ ನ ಟಾಸ್ಕ್ ಆಗಿದೆ.  ಕೀಕೀ ಡು ಯು ಲವ್ ಮೀ… ಸಾಂಗ್ ಚಾಲೆಂಜ್ ಅತ್ಯಂತ ಅಪಾಯಕಾರಿಯಾಗಿದೆ. ಹಲವೆಡೆ ಇದನ್ನ ನಿಷೇಧಿಸಲಾಗಿದೆ.

ಚಲಿಸುತ್ತಿರುವ ಕಾರಿನ ಜೊತೆಗೆ ರಸ್ತೆಯಲ್ಲಿ ನೃತ್ಯ ಮಾಡುವುದಷ್ಟೇ ಈ ಚಾಲೆಂಜ್ ನ ಟಾಸ್ಕ್ ಆಗಿದ್ದರೆ ಬಹುಶಃ ಹೆಚ್ಚಿನ ಅಪಾಯ ಇರುತ್ತಿರಲಿಲ್ಲವೇನೋ. ಆದರೆ ಟಾಸ್ಕ್ ನ ಮತ್ತೊಂದು ಭಾಗವಾಗಿರುವ ನೃತ್ಯ ಮಾಡುತ್ತಾ ಚಲಿಸುತ್ತಿರುವ ಕಾರಿನೊಳಗೆ ವಾಪಸ್ ಜಿಗಿದು ಕುಳಿತುಕೊಳ್ಳಿವ ಭಾಗ ಅತ್ಯಂತ ಅಪಾಯಕಾರಿಯಾಗಿದ್ದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆಯುತ್ತಿದೆ.  ನಿಧಾನಗತಿಯಲ್ಲಿರುವ ಕಾರಿನಿಂದ ಕೆಳಗೆ ಜಿಗಿದು ಇನ್ ಮೈ ಫೀಲಿಂಗ್ಸ್ ಹಾಡಿನ ಕೆಲವು ಸಾಲುಗಳಿಗೆ ನೃತ್ಯ ಮಾಡಬೇಕು, ನಂತರ ವಾಪಸ್ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು, ಇದೇ ಕೀಕೀ ಚಾಲೆಂಜ್ ನ ಟಾಸ್ಕ್.

ಅಪಾಯಕಾರಿಯಂತಿರುವ ಕಿಕಿ ಜಾಲೆಂಜ್​ನ್ನು ಈಗಾಗಲೇ ಹಲವೆಡೆ ಬ್ಯಾನ್ ಮಾಡಲಾಗಿದೆ. ಇದರ ವಿರುದ್ಧ ಮುಂಬೈನ್​ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೂಡಾ ಕೈಗೊಳ್ಳುತ್ತಿದ್ದಾರೆ. ಅದಾಗ್ಯೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕಿಕಿ ಚಾಲೆಂಜ್​ ಟ್ರೆಂಡ್​ ಸೃಷ್ಟಿಸುತ್ತಿದೆ. ಸೆಲಿಬ್ರಿಟಿಗಳು ಈ ಸವಾಲು ಸ್ವೀಕರಿಸುತ್ತಿದ್ದಾರೆ

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

4 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

4 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

2 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

3 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

3 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

3 days ago