ಉಡುಪಿ: ಈಶ್ವರ್ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ “ಜೋಡುಮಾರ್ಗ” ಭಾರಿ ಕುತೂಹಲದ ಕಿರುಚಿತ್ರ ಟಾಕೀಸ್ ಯುಟ್ಯೂಬ್ ಚಾನೆಲಿನಲ್ಲಿ ತೆರೆಕಂಡು ಭರ್ಜರಿಯಾಗಿ ಯಶಸ್ಸನ್ನು ಕಂಡಿದೆ.
ಎರಡು ಮಾರ್ಗ ಸೇರುವ ಸ್ಥಳದಲ್ಲಿ ನಡೆಯುವ ಅನಿರೀಕ್ಷಿತ ರಹಸ್ಯಮಯ ಘಟನೆಗಳನ್ನು ಹೊಂದಿರುವ ಈ ಕಿರುಚಿತ್ರದಲ್ಲಿ ತುಳುನಾಡಿನ ಹಿರಿಯ ಮತ್ತು ಕಿರಿಯ ಕಲಾವಿದರು ತುಂಬ ಅದ್ಭುತವಾಗಿ ಮತ್ತು ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಇದರ ಚಿತ್ರೀಕರಣವನ್ನು ಸಂಪೂರ್ಣವಾಗಿ ಮಂಗಳೂರು ಮತ್ತು ಆಸುಪಾಸಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ಕಿಶೋರ್ ಮೂಡಬಿದಿರೆಯವರ ತಾಂತ್ರಿಕ ಸಲಹೆಯೊಂದಿಗೆ ಪ್ರತೀಕ್ ಸಾಲಿಯಾನ್ ಅವರು ಈ ಕಿರುಚಿತ್ರಕ್ಕೆ ನಿರ್ದೇಶನ ಮಾಡಿರುತ್ತಾರೆ.
ಪರೀಕ್ಷಿತ್ ಈಶ್ವರ್ ಅವರ ಕಥೆ, ನ್ ವಿ ನ್ ಪ್ರೋಡ್ಯೂಕ್ಷನ್ಸ್ನರವರ ಕ್ಯಾಮೆರಾ ಕೈ ಚಾಲಕವಿದ್ದು ರಾಜಗೋಪಾಲರವರ ಪ್ರಸಾದನ ಮತ್ತು ಮೆವಿನ್ ಜೋಯೆಲ್ ಅವರ ಸಂಕಲನ ಈ ಚಿತ್ರಕ್ಕೆ ಇದೆ.
ಚಿತ್ರದ ಮುಖ್ಯ ಪಾತ್ರದಲ್ಲಿ ಹೆಚ್ ಕೆ ನಯನಾಡ್, ವಿಜೆ ದೀಕ್ಷಿತ್, ಚಿರಾಗ್ ಕುಂದಾಪುರ,ಪ್ರಶಾಂತ್ ಜಾರ್ಕಳ, ವರುಣ್ ಬಂಗೇರ, ಸರೋಜಿನಿ ಶೆಟ್ಟಿ, ಶೋಭಾ ಶೆಟ್ಟಿ, ಚಂದ್ರಶೇಖರ್ ಸಿದ್ದಕಟ್ಟೆ, ಧೀರಜ್ ಕೋಟ್ಯಾನ್ ಹಾಗು ಗೌರವ ಪಾತ್ರದಲ್ಲಿ ದಾನಿಶ್ ಶೆಟ್ಟಿ, ಸುಧೀರ್ ಕುಮಾರ್, ನವನೀತ್, ಅಖಿಲ್ ಕೆಐ, ಮನೀಶ್ ಸುವರ್ಣ ಶಕ್ತಿನಗರ ಮತ್ತು ಗಿರೀಶ್ ಕುಮಾರ್ ಅಭಿನಯಿಸಿದ್ದಾರೆ.
ಜೋಡುಮಾರ್ಗದಲ್ಲಿ ರಹಸ್ಯಮಯ ಘಟನೆಗಳು ನಡೀತಾ ಇದೆ ಎಂದು ಎಲ್ಲರಿಗೂ ಗೊತ್ತಾಗಿದೆ. ಆದರೆ ಈ ಅನಿರೀಕ್ಷಿತ ರಹಸ್ಯಮಯ ಘಟನೆಗಳು ಯಾಕೆ ಆಗುತ್ತಿದೆ ಮತ್ತು ಯಾರು ಮಾಡುತ್ತಿದ್ದಾರೆ ಎಂದು ಯಾರಿಗೂ ತಿಳಿಯುತ್ತಿಲ್ಲ.ಇದರ ಹಿಂದೆ ಯಾರದ್ದೋ ಕೈವಾಡವಿದೆಯೇ? ಅಥವಾ ಬೇರೆ ಏನೋ ನಡೀತಾ ಇದೆಯೇ? ಈ ಎಲ್ಲಾ ರಹಸ್ಯಗಳಿಗೆ ಉತ್ತರ ತಿಳಿಯಲು…..ಇಂದೇ ಜೋಡುಮಾರ್ಗ ಕಿರುಚಿತ್ರವನ್ನು ವೀಕ್ಷಿಸಿ..
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…