ಉಳ್ಳಾಲ, : ಹಿಂದೂ ರಾಷ್ಟ್ರ ಇನ್ನು ಒಂದು ಸಾವಿರ ವರ್ಷವಾದರೂ ಮಾಡಲು ಅಸಾಧ್ಯ. ಸಂವಿಧಾನ ಮುಟ್ಟಲು ಹೋದರೆ ಭಾರತೀಯರು ಸುಮ್ಮನಿರುವುದಿಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅಭಿಪ್ರಾಯಪಟ್ಟರು.
ಉಳ್ಳಾಲ ಮುಸ್ಲಿಂ ಒಕ್ಕೂಟ ವತಿಯಿಂದ ಉಳ್ಳಾಲದ ಹಝ್ರತ್ ಶಾಲಾ ಮೈದಾನದಲ್ಲಿ ಜರಗಿದ ಎನ್ ಪಿ ಆರ್, ಎನ್ ಆರ್ ಸಿ ಹಾಗೂ ಸಿಎಎ ವಿರುದ್ಧ ಭಾನುವಾರ ಹಮ್ಮಿಕೊಳ್ಳಲಾದ ಬೃಹತ್ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಸಂವಿಧಾನ ವಿರೋಧಿ ಕಾನೂನು ಜಾರಿಗೊಳಿಸುವ ಮೂಲಕ ಕೇಂದ್ರ ಸರಕಾರದ ನೀತಿಯಿಂದಾಗಿ ಇದುವರೆಗೆ ಕೈಯಲ್ಲಿ ತಿರಂಗಾ ಹಿಡಿಯದವನು ತಿರಂಗ ಹಿಡಿದಿದ್ದಾನೆ. ಪ್ರಜಾಪ್ರಭುತ್ವ ಏನು ಎಂಬುವುದನ್ನು ಕೇಂದ್ರ ತೋರಿಸಿಕೊಡಲು ಅವಕಾಶ ಕಲ್ಪಿಸಿದೆ. ಮಾಧ್ಯಮ, ವಿಶ್ವವಿದ್ಯಾಲಯಗಳನ್ನು ಕೈಯಲ್ಲಿ ಇಟ್ಟುಕೊಳ್ಳುತ್ತಾ ದೇಶವನ್ನು ಅಧೋಗತಿಯತ್ತ ಕೊಂಡೊಯ್ಯಲು ಹೊರಟಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಲು ರಾಜ್ಯವನ್ನೇ ಜೈಲಾಗಿ ಮಾಡಿ ಕಾನೂನು ಜಾರಿಗೆ ತಂದರು. ಇಲ್ಲಿಂದ ಭಾರತವನ್ನು ಕಳೆದುಕೊಳ್ಳುವ ಭಯ ಬಂತು. ಅದಕ್ಕಾಗಿಯೇ ಸರಕಾರಿ ಸೇವೆಯಿಂದ ಹೊರಬಂದಿರುವೆನು ಎಂದಿದ್ದಾರೆ.
ಪ್ರಧಾನಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರೀ ಸುಳ್ಳು ಹೇಳುತ್ತಿದ್ದಾರೆ. ಹಿಂದೂ ಅಲ್ಪಸಂಖ್ಯಾತರಿಗಾಗಿ ಕಾಯ್ದೆ ಅನ್ನುವ ಸುಳ್ಳು ಹೇಳುತ್ತಿದ್ದಾರೆ. ಆದರೆ ಜಾರಿಯಾದ ಕಾಯಿದೆಯಲ್ಲಿ ರಿಲೀಜಿಯಿಸ್ ಪರ್ಸಿಕ್ಯುಲೇಟಡ್ ಅನ್ನುವ ಪದವೇ ಇರಲಿಲ್ಲ. ಪ್ರಧಾನಿ ಹಾಗೂ ಗೃಹಮಂತ್ರಿ ನಡುವೆ ಚರ್ಚೆಯೇ ನಡೆಯದೇ, ದಿನಕ್ಕೊಂದು ಹೇಳಿಕೆಗಳನ್ನು ಜನತೆ ಮುಂದೆ ನೀಡುತ್ತಾ ಗೊಂದಲದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಇದು ಭಾರತದ ಸೌಹಾರ್ದತೆಗೆ ಕಠಿಣ ಹಾಗೂ ವಿರೋಧಿ ಕಾನೂನು ಆಗಿದೆ. ನಾಯಕತ್ವ ಇಲ್ಲದೇ ಎಲ್ಲರೂ ಸಂವಿಧಾನ ಉಳಿಸಲು ಹೊರಬರುತ್ತಿದ್ದಾರೆ. ಎನ್ ಪಿ ಆರ್, ಎನ್ ಆರ್ ಸಿ ಮೂಲಕ ಜನರನ್ನು ಜನರಿಂದ ದೂರ ಮಾಡಿ, ದ್ವೇಷ ಹುಟ್ಟಿಸಿ, ಅವರಿಂದ ಮತ ಪಡೆಯಬೇಕು ಅನ್ನುವ ಹುನ್ನಾರ ಸರಕಾರಕ್ಕಿದೆ. ಕೇಂದ್ರ ಗಲಭೆ ಆಗಲು ಕಾಯುತ್ತಲೇ ಇದ್ದಾರೆ. 25 ದಿನಗಳವರೆಗೂ ಎಲ್ಲಿಯೂ ಆಗಿಲ್ಲ. ಇದರಿಂದ ಕೇಂದ್ರ ಸರಕಾರ ಸೋಲು ಅನುಭವಿಸಿದೆ. ಇದು ಕೋಪ ತೋರಿಸುವ ಸಮಯವಲ್ಲ, ಧೈರ್ಯ ತೋರಿಸುವ ಸಮಯ. ಗೃಹಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಎನ್ ಆರ್ ಸಿ ಕೇಳಿಕೊಂಡು ಮನೆವರಗೆ ಅಧಿಕಾರಿಗಳು ಬಂದಲ್ಲಿ ಯಾವುದೇ ದಾಖಲೆಗಳನ್ನು ದೇವರಾಣೆಗೂ ಕೊಡುವುದಿಲ್ಲ. ಜೈಲಿಗೆ ಹಾಕಿದರೂ ಸಿದ್ಧ ಎಂದರು.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…