ಭಾರತವನ್ನು ಕಳೆದುಕೊಳ್ಳುವ ಭಯ ಬಂತು. ಅದಕ್ಕಾಗಿಯೇ ಸರಕಾರಿ ಸೇವೆಯಿಂದ ಹೊರಬಂದಿರುವೆ : ಸಸಿಕಾಂತ್ ಸೆಂಥಿಲ್ Vishwanews24

ಉಳ್ಳಾಲ, : ಹಿಂದೂ ರಾಷ್ಟ್ರ ಇನ್ನು ಒಂದು ಸಾವಿರ ವರ್ಷವಾದರೂ ಮಾಡಲು ಅಸಾಧ್ಯ. ಸಂವಿಧಾನ ಮುಟ್ಟಲು ಹೋದರೆ ಭಾರತೀಯರು ಸುಮ್ಮನಿರುವುದಿಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅಭಿಪ್ರಾಯಪಟ್ಟರು.

ಉಳ್ಳಾಲ ಮುಸ್ಲಿಂ ಒಕ್ಕೂಟ ವತಿಯಿಂದ ಉಳ್ಳಾಲದ ಹಝ್ರತ್ ಶಾಲಾ ಮೈದಾನದಲ್ಲಿ ಜರಗಿದ ಎನ್ ಪಿ ಆರ್, ಎನ್ ಆರ್ ಸಿ ಹಾಗೂ ಸಿಎಎ ವಿರುದ್ಧ ಭಾನುವಾರ ಹಮ್ಮಿಕೊಳ್ಳಲಾದ ಬೃಹತ್ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಸಂವಿಧಾನ ವಿರೋಧಿ ಕಾನೂನು ಜಾರಿಗೊಳಿಸುವ ಮೂಲಕ ಕೇಂದ್ರ ಸರಕಾರದ ನೀತಿಯಿಂದಾಗಿ ಇದುವರೆಗೆ ಕೈಯಲ್ಲಿ ತಿರಂಗಾ ಹಿಡಿಯದವನು ತಿರಂಗ ಹಿಡಿದಿದ್ದಾನೆ. ಪ್ರಜಾಪ್ರಭುತ್ವ ಏನು ಎಂಬುವುದನ್ನು ಕೇಂದ್ರ ತೋರಿಸಿಕೊಡಲು ಅವಕಾಶ ಕಲ್ಪಿಸಿದೆ. ಮಾಧ್ಯಮ, ವಿಶ್ವವಿದ್ಯಾಲಯಗಳನ್ನು ಕೈಯಲ್ಲಿ ಇಟ್ಟುಕೊಳ್ಳುತ್ತಾ ದೇಶವನ್ನು ಅಧೋಗತಿಯತ್ತ ಕೊಂಡೊಯ್ಯಲು ಹೊರಟಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಲು ರಾಜ್ಯವನ್ನೇ ಜೈಲಾಗಿ ಮಾಡಿ ಕಾನೂನು ಜಾರಿಗೆ ತಂದರು. ಇಲ್ಲಿಂದ ಭಾರತವನ್ನು ಕಳೆದುಕೊಳ್ಳುವ ಭಯ ಬಂತು. ಅದಕ್ಕಾಗಿಯೇ ಸರಕಾರಿ ಸೇವೆಯಿಂದ ಹೊರಬಂದಿರುವೆನು ಎಂದಿದ್ದಾರೆ.

ಪ್ರಧಾನಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರೀ ಸುಳ್ಳು ಹೇಳುತ್ತಿದ್ದಾರೆ. ಹಿಂದೂ ಅಲ್ಪಸಂಖ್ಯಾತರಿಗಾಗಿ ಕಾಯ್ದೆ ಅನ್ನುವ ಸುಳ್ಳು ಹೇಳುತ್ತಿದ್ದಾರೆ. ಆದರೆ ಜಾರಿಯಾದ ಕಾಯಿದೆಯಲ್ಲಿ ರಿಲೀಜಿಯಿಸ್ ಪರ್ಸಿಕ್ಯುಲೇಟಡ್ ಅನ್ನುವ ಪದವೇ ಇರಲಿಲ್ಲ. ಪ್ರಧಾನಿ ಹಾಗೂ ಗೃಹಮಂತ್ರಿ ನಡುವೆ ಚರ್ಚೆಯೇ ನಡೆಯದೇ, ದಿನಕ್ಕೊಂದು ಹೇಳಿಕೆಗಳನ್ನು ಜನತೆ ಮುಂದೆ ನೀಡುತ್ತಾ ಗೊಂದಲದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಇದು ಭಾರತದ ಸೌಹಾರ್ದತೆಗೆ ಕಠಿಣ ಹಾಗೂ ವಿರೋಧಿ ಕಾನೂನು ಆಗಿದೆ. ನಾಯಕತ್ವ ಇಲ್ಲದೇ ಎಲ್ಲರೂ ಸಂವಿಧಾನ ಉಳಿಸಲು ಹೊರಬರುತ್ತಿದ್ದಾರೆ. ಎನ್ ಪಿ ಆರ್, ಎನ್ ಆರ್ ಸಿ ಮೂಲಕ ಜನರನ್ನು ಜನರಿಂದ ದೂರ ಮಾಡಿ, ದ್ವೇಷ ಹುಟ್ಟಿಸಿ, ಅವರಿಂದ ಮತ ಪಡೆಯಬೇಕು ಅನ್ನುವ ಹುನ್ನಾರ ಸರಕಾರಕ್ಕಿದೆ. ಕೇಂದ್ರ ಗಲಭೆ ಆಗಲು ಕಾಯುತ್ತಲೇ ಇದ್ದಾರೆ. 25 ದಿನಗಳವರೆಗೂ ಎಲ್ಲಿಯೂ ಆಗಿಲ್ಲ. ಇದರಿಂದ ಕೇಂದ್ರ ಸರಕಾರ ಸೋಲು ಅನುಭವಿಸಿದೆ. ಇದು ಕೋಪ ತೋರಿಸುವ ಸಮಯವಲ್ಲ, ಧೈರ್ಯ ತೋರಿಸುವ ಸಮಯ. ಗೃಹಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಎನ್ ಆರ್ ಸಿ ಕೇಳಿಕೊಂಡು ಮನೆವರಗೆ ಅಧಿಕಾರಿಗಳು ಬಂದಲ್ಲಿ ಯಾವುದೇ ದಾಖಲೆಗಳನ್ನು ದೇವರಾಣೆಗೂ ಕೊಡುವುದಿಲ್ಲ. ಜೈಲಿಗೆ ಹಾಕಿದರೂ ಸಿದ್ಧ ಎಂದರು.

 

Vishwa News 24

Recent Posts

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

13 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

14 hours ago

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…

14 hours ago

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ – vishwanews24

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ…

16 hours ago

ಉಡುಪಿ : ಯುವಕ ನಾಪತ್ತೆ – vishwanews24

ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…

16 hours ago

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ – vishwanews24

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…

17 hours ago