Featured

ಭಾರತೀಯ ನಾಗರಿಕರಿಗೆ ಸೆ. 21ರವರೆಗೆ ಕೆನಡಾ ಪ್ರಯಾಣ ರದ್ದು -Vishwanews24

ಭಾರತೀಯ ನಾಗರಿಕರಿಗೆ ಸೆ. 21ರವರೆಗೆ ಕೆನಡಾ ಪ್ರಯಾಣ ರದ್ದು -Vishwanews24

ಟೊರೆಂಟೋ : ಕೋವಿಡ್ ಸೋಂಕು ಹರಡುವ ಆತಂಕದಿಂದ ಭಾರತೀಯ ನಾಗರಿಕ ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಿ ಕೆನಡಾ ಸರ್ಕಾರ ಹೊರಡಿಸಿರುವ ಆದೇಶವನ್ನು ಸೆಪ್ಟಂಬರ್ 21ರವರೆಗೆ ಮುಂದುವರೆಸಿದೆ. ಕೋವಿಡ್‍ನ ಎರಡನೇ ಅಲೆ ಹೆಚ್ಚಾಗಿದ್ದ ಕಳೆದ ಏಪ್ರಿಲ್‍ನಲ್ಲಿ ಕೆನಡಾದ ಒಕ್ಕೂಟ ಸಾರಿಗೆ ಸಚಿವಾಲಯ ಕಳೆದ ಭಾರತದಿಂದ ನೇರವಾಗಿ ಆಗಮಿಸುವ ವಿಮಾನಗಳ ಸೇವೆಯನ್ನು ತಡೆ ಹಿಡಿದಿತ್ತು. ಅದನ್ನು ಮತ್ತೆ ಮುಂದುವರೆಸಲಾಗಿದ್ದು ಸೆಪ್ಟಂಬರ್ 21ರವರೆಗೆ ನೇರ ವಿಮಾನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಕೆನೆಡಿಯನ್ನರ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆ ನಮ್ಮ ಮೊದಲ ಆಧ್ಯತೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದ ಅಂಕಿ ಅಂಶಗಳನ್ನು ಪರಿಶೀಲಿಸಿದ ಬಳಿಕ ಸದ್ಯಕ್ಕೆ ವಿಮಾನಗಳ ಪ್ರಯಾಣಕ್ಕೆ ಅವಕಾಶ ನೀಡುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸಾರಿಗೆ ಸಚಿವ ಒಮರ್ ಅಲ್‍ಗೋಬ್ರಾ ತಿಳಿಸಿದ್ದಾರೆ.

ಭಾರತದಿಂದ ನೇರವಾಗಿ ಕೆನಡಾಗೆ ಪ್ರಯಾಣ ಮಾಡಲು ಅವಕಾಶ ಇಲ್ಲವಾದರೂ, ಬೇರೆ ದೇಶಗಳ ಮೂಲಕ ಭಾರತೀಯರು ಕೆನಡಾಗೆ ಭೇಟಿ ನೀಡಬಹುದು. ಆದರೆ ಅದಕ್ಕೂ ಮೊದಲು ಭಾರತ ಹೊರತು ಪಡಿಸಿ ಬೇರೆ ದೇಶದಲ್ಲಿ ಕೋವಿಡ್ ಪತ್ತೆಗೆ ಮೋಲ್ಯಾಕ್ಯೂಲರ್ ಪರೀಕ್ಷೆ ಮಾಡಿಸಿ, ನೆಗೆಟಿವ್ ಫಲಿತಾಂಶ ಬಂದಿರಬೇಕು. ಅಂತಹ ವ್ಯಕ್ತಿಗಳು ಪ್ರಯಾಣ ಮಾಡಬಹುದು.

ಈ ಮೊದಲು ಕೋವಿಡ್ ಸೋಂಕಿಗೆ ಸಿಲುಕಿದ್ದವರು ತಮ್ಮ ಪ್ರಯಾಣಕ್ಕೆ ಮೊದಲು 14ರಿಂದ 90 ದಿನಗಳ ನಡುವೆ ಬೇರೆ ದೇಶದಲ್ಲಿ ಪರೀಕ್ಷೆ ಮಾಡಿಸಿರಬೇಕು. ಅದಕ್ಕೂ ಮೊದಲು ಅನ್ಯ ದೇಶದಲ್ಲಿ 14 ದಿನ ನೆಲೆಸಿರಬೇಕು ಎಂಬ ಕಠಿಣ ನಿಯಮಾವಳಿಗಳನ್ನು ವಿಧಿಸಲಾಗಿದೆ. ಭಾರತದಲ್ಲಿ ಕೋವಿಡ್‍ನಲ್ಲಿ ಡೆಲ್ಟಾ, ಡೆಲ್ಟಾ ಪ್ಲಸ್ ಸೇರಿದಂತೆ ನಾನಾ ರೀತಿಯ ರೂಪಾಂತರ ಸೋಂಕುಗಳ ಹರಡುತ್ತಿದ್ದು, ಬಹಳಷ್ಟು ದೇಶಗಳು ಇತರ ಬಗ್ಗೆ ಕಾಳಜಿ ವಹಿಸಿವೆ.

Vishwa News 24

Recent Posts

ಮಲ್ಪೆ ಬಂದರಿನಲ್ಲಿ ಹೊಡೆದಾಟ: 2 ಪ್ರತ್ಯೇಕ ಪ್ರಕರಣ ದಾಖಲು – vishwanews24

ಮಲ್ಪೆ ಬಂದರಿನಲ್ಲಿ ಹೊಡೆದಾಟ: 2 ಪ್ರತ್ಯೇಕ ಪ್ರಕರಣ ದಾಖಲು ಉಡುಪಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಮೀನುಗಾರರ ಎರಡು ತಂಡಗಳ ನಡುವೆ…

2 minutes ago

ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ – vishwanews24

ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ  ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಮೇ…

14 minutes ago

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಆರೋಪ; ಸಾರ್ವಜನಿಕರ ಆಕ್ರೋಶ – vishwanews24

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಆರೋಪ; ಸಾರ್ವಜನಿಕರ ಆಕ್ರೋಶ ಉಡುಪಿ: ಜಿಲ್ಲೆಯ ಮಲ್ಪೆ ಮೀನುಗಾರಿಕಾ ದಕ್ಕೆಯಲ್ಲಿ ಮಹಿಳೆಯ…

20 hours ago

ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ – vishwanews24

ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ ನವದೆಹಲಿ :ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು…

20 hours ago

ಉಡುಪಿ : ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ : ಕೃಷ್ಣರಾಜ ತಂತ್ರಿ – vishwanews24

ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ.. ಏಸಿಯಲ್ಲಿ ಇರುವ ಗ್ಯಾಸ್‌ಗೆ ಯಾವುದೇ ರೀತಿಯಲ್ಲೂ ಬೆಂಕಿ ಹಿಡಿಯಲ್ಲ.. ಕರಾವಳಿಗೆ ಕೂಲರ್‌ಗಿಂದ…

22 hours ago

ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ – vishwanews24

ಕೌಟುಂಬಿಕ ಕಲಹ : ಕೊಲೆಯಲ್ಲಿ  ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…

23 hours ago