ಮಹಾರಾಷ್ಟ್ರ: ಹಣೆಗೆ ಬಿಂದಿ ಇರಿಸದ ಕಾರಣಕ್ಕೆ ಪತ್ರಕರ್ತೆಯ ಜತೆ ಮಾತನಾಡಲು ಮಹಾರಾಷ್ಟ್ರದ ಹಿಂದೂ ಕಾರ್ಯಕರ್ತ ಸಂಭಾಜಿ ಭಿಡೆ ನಿರಾಕರಿಸಿದ ಘಟನೆ ಬುಧವಾರ ನಡೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಕ್ಷಿಣ ಮುಂಬಯಿಯ ರಾಜ್ಯ ಕಾರ್ಯಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ ಬಳಿಕ ಭಿಡೆ ಈ ನಡೆ ಅನುಸರಿಸಿದ್ದಾರೆ.
ತಮ್ಮ ಹೇಳಿಕೆ ಪಡೆದುಕೊಳ್ಳಲು ಮುನ್ನ ಹಣೆಗೆ ಬಿಂದಿ ಇರಿಸಬೇಕು ಎಂದು ಟೆಲಿವಿಷನ್ ವರದಿಗಾರ್ತಿಗೆ ಭಿಡೆ ಮರಾಠಿಯಲ್ಲಿ ಹೇಳುವುದು ಕೇಳಿಸಿದೆ. ಬಳಿಕ ಅವರು ಆಕೆ ಜತೆ ಮಾತನಾಡಲು ನಿರಾಕರಿಸಿದ್ದಾರೆ.
ಹೆಣ್ಣು ಭಾರತ ಮಾತೆ ಇದ್ದಂತೆ. ಆಕೆ ಹಣೆಗೆ ಕುಂಕುಮ ಇರಿಸದೆ ‘ವಿಧವೆ’ ರೀತಿ ಕಾಣಿಸಬಾರದು ಎಂದು ಸಂಭಾಜಿ ಭಿಡೆ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮ್ಮ ಹೇಳಿಕೆಗೆ ವಿವರಣೆ ನೀಡುವಂತೆ ಭಿಡೆ ಅವರಿಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಾಂಕರ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ನವೆಂಬರ್ 7 ರಂದು ಕಾಪು -ಬೈಂದೂರಿಗೆ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳ ಆಗಮನ..
ಶಿಂಧೆ ಅವರನ್ನು ಭೇಟಿ ಮಾಡಿದ ಬಳಿಕ ಭಿಡೆ ಅವರು ನಿರ್ಗಮಿಸುತ್ತಿದ್ದಾಗ ಸಾಮ್ ಟಿವಿ ವಾಹಿನಿಯ ಪತ್ರಕರ್ತೆ ಅವರನ್ನು ಎದುರಾಗಿದ್ದರು. ತಮಗೆ ಪ್ರಶ್ನೆ ಕೇಳಲು ಮೈಕ್ ಹಿಡಿದ ವರದಿಗಾರ್ತಿ ಜತೆ ಮಾತನಾಡಲು ಭಿಡೆ ನಿರಾಕರಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಪತ್ರಕರ್ತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಣೆಗೆ ಬಿಂದಿ ಇಡುವುದು ಅಥವಾ ಬಿಡುವುದು ತಮ್ಮ ವೈಯಕ್ತಿಕ ಆಯ್ಕೆ ಎಂದು ಅವರು ಹೇಳಿದ್ದಾರೆ. “ನಾವು ಜನರನ್ನು ಅವರ ವಯಸ್ಸು ಕಂಡು ಗೌರವಿಸುತ್ತೇವೆ. ಆದರೆ ಕೆಲವು ಜನರು ಗೌರವಕ್ಕೂ ಅರ್ಹರಾಗಿರುವುದಿಲ್ಲ. ಬಿಂದಿ ಇರಿಸುವುದು ಅಥವಾ ಬಿಡುವುದು ನನ್ನ ವೈಯಕ್ತಿಕ ಆಯ್ಕೆ. ಇದು ಪ್ರಜಾಪ್ರಭುತ್ವ” ಎಂದು ಹೇಳಿದ್ದಾರೆ.
ಕಾಪುವಿಗೆ ಲಾಲಾಜಿ ಮಾತ್ರವಲ್ಲ ನಾನು ಕೂಡ ಟಿಕೆಟ್ ಆಕಾಂಕ್ಷಿ : ಕುಯಿಲಾಡಿ ಸುರೇಶ್ ನಾಯಕ್ : vishwanews24
ಮಂಗಳೂರು: ಕರಾವಳಿಯ ಮೀನುಗಾರ ಮುಖಂಡ , ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ನಿಧನ ಮಂಗಳೂರು : ಕರಾವಳಿಯ ಪ್ರಭಾವಿ…
ಮಂಗಳೂರು: ಯುವತಿ ನಾಪತ್ತೆ ; ಪ್ರಕರಣ ದಾಖಲು ಮಂಗಳೂರು: ಮುಲ್ಕಿ ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ನಿವಾಸಿ…
ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು ಚಿಕ್ಕಮಗಳೂರು: ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ…
ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಜೀರ್ ಅಹ್ಮದ್ ಬೆಂಗಳೂರು : ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್ಸಿ…
ಉಡುಪಿ: ಹೃದಯಾಘಾತದಿಂದ ಲೆಕ್ಕಪರಿಶೋಧಕ ನಿಧನ ಉಡುಪಿ: ಕುಕ್ಕಿಕಟ್ಟೆಯ ದಿನಸಿ ವ್ಯಾಪಾರಿ ದಿ. ಮರ್ತಪ್ಪ ಶೆಣೈ ಅವರ ಪುತ್ರ, ಲೆಕ್ಕಪರಿಶೋಧಕ ದೀಪಕ್…
ಶಿರ್ವ : ಮಾನಸಿಕ ಖಿನ್ನತೆ ಹಿನ್ನೆಲೆ : ವ್ಯಕ್ತಿ ಆತ್ಮಹತ್ಯೆ… ಶಿರ್ವ: ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಗ್ರಾಮದ…