Featured

ಭೂಮಿಯಲ್ಲಿದ್ದುಕೊಂಡೇ ಅಂತರಿಕ್ಷದಲ್ಲಿ ಸೆಲ್ಫಿ ತೆಗೆಯಿರಿ!

ವಾಷಿಂಗ್ಟನ್,: ವರ್ಚುವಲ್ ಸ್ಪೇಸ್‍ಸೂಟ್‍ನಲ್ಲಿ ಅದ್ಭುತ ನಕ್ಷತ್ರಪುಂಜಗಳ ನಡುವೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಡುವ ವಿನೂತನ ಆಯಪ್ ಇದೀಗ ಲಭ್ಯವಿದೆ. ವಿಶ್ವದ ಅಗ್ರಗಣ್ಯ ಬಾಹ್ಯಾಕಾಶ ಸಂಸ್ಥೆಗಳಲ್ಲೊಂದಾದ ‘ನಾಸಾ’ ಇದನ್ನು ಬಿಡುಗಡೆ ಮಾಡಿದೆ. ಸೌರಮಂಡಲದ ವಿವಿಧ ಸ್ಥಳಗಳಲ್ಲಿ ಅಂದರೆ ‘ಒರಿಯನ್ ನೆಬುಲಾ’ ಅಥವಾ ಸೌರಮಂಡಲದ ಮಧ್ಯಭಾಗದಲ್ಲಿ ನಿಂತು ಸೆಲ್ಫಿ ತೆಗೆಸಿಕೊಂಡ ಅನುಭವವನ್ನು ಇದು ನೀಡುತ್ತದೆ.

NASA Selfies ಹೆಸರಿನ ಈ ಆಯಪ್ ಜತೆಗೆ, ಅಮೆರಿಕದ ಈ ಬಾಹ್ಯಾಕಾಶ ಸಂಸ್ಥೆ ಎಕ್ಸೋಪ್ಲಾನೆಟ್ ಎಕ್ಸ್‍ಕರ್‍ಷನ್ಸ್ ವರ್ಚುವಲ್ ರಿಯಾಲಿಟಿ (ವಿಆರ್) ಎಂಬ ಆಯಪ್ ಕೂಡಾ ಬಿಡುಗಡೆ ಮಾಡಿದೆ. ಇದು ವಿಆರ್ ಬಳಕೆದಾರರನ್ನು ಟ್ರಾಪಿಸ್ಟ್-1 ಗ್ರಹಮಂಡಲದಲ್ಲಿ ಮಾರ್ಗದರ್ಶನ ಸಹಿತ ಯಾನ ಕೈಗೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಸ್ಪಿಟ್ಸರ್ ಬಾಹ್ಯಾಕಾಶ ಟೆಲೆಸ್ಕೋಪ್‍ಗೆ ಚಾಲನೆ ನೀಡಿದ 15ನೇ ವರ್ಷಾಚರಣೆಗಾಗಿ ಈ ಡಿಜಿಟಲ್ ಉತ್ಪನ್ನಗಳನ್ನು ಸೃಷ್ಟಿಸಲಾಗಿದೆ ಎಂದು ನಾಸಾ ಹೇಳಿದೆ.

ಸೆಲ್ಫಿ ಆಯಪ್‍ನ ಸರಳ ಇಂಟರ್‍ಫೇಸ್, ನೀವು ಫೋಟೊ ಕ್ಲಿಕ್ಕಿಸಿಕೊಂಡು, ನಿಮ್ಮ ಆಯ್ಕೆಯ ಹಿನ್ನೆಲೆಯನ್ನು ಸೃಷ್ಟಿಸಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಶೇರ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಐಒಎಸ್ ಮತ್ತು ಆಯಂಡ್ರಾಯ್ಡ್ ಡಿವೈಸ್ ಗಳಿಗೆ ಈ ಆಯಪ್ ಲಭ್ಯವಿದೆ.

Vishwa News 24

Recent Posts

ಮೈಸೂರು: ಮದುವೆ ನಿಶ್ಚಯವಾಗಿದ್ದ SBI ಉದ್ಯೋಗಿಗಳಿಬ್ಬರು ಆತ್ಮಹತ್ಯೆಗೆ ಶರಣು – vishwanews24

ಮೈಸೂರು: ಮದುವೆ ನಿಶ್ಚಯವಾಗಿದ್ದ SBI ಉದ್ಯೋಗಿಗಳಿಬ್ಬರು ಆತ್ಮಹತ್ಯೆಗೆ ಶರಣು ಮೈಸೂರು: ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ SBI ಉದ್ಯೋಗಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆಗೆ…

5 minutes ago

ಬಂಟ್ವಾಳ : ಅಡುಗೆ ಸಿಬ್ಬಂದಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ವಿದ್ಯಾರ್ಥಿಗೆ ಸಿಎಂ ಮೆಚ್ಚುಗೆ – vishwanews24

ಬಂಟ್ವಾಳ : ಅಡುಗೆ ಸಿಬ್ಬಂದಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ವಿದ್ಯಾರ್ಥಿಗೆ ಸಿಎಂ ಮೆಚ್ಚುಗೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು…

15 minutes ago

ಹಿಂದೂ ಸಂಘಟನೆಗಳ ಮುಖಂಡರಿಗೆ ಜಿಲ್ಲೆ ಪ್ರವೇಶ ನಿಷೇಧ: ಜಿಲ್ಲಾಡಳಿತದ ಕ್ರಮಕ್ಕೆ ಕಾಪು ಬಿಜೆಪಿ ತೀವ್ರ ಖಂಡನೆ – vishwanews24

ಸಂಘಪರಿವಾರದ ಪ್ರಮುಖರಿಗೆ ನಿರ್ಬಂಧ ವಿಧಿಸಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ಕ್ರಮ .. ನಿರ್ಬಂಧಗಳ ಮೂಲಕ ಸಂಘಪರಿವಾರದ ಮುಖಂಡರ ರಾಷ್ಟ್ರಭಕ್ತಿ ಮತ್ತು…

31 minutes ago

ಶಿರ್ವ ಡೇವಿಡ್‌ ಡಿ’ಸೋಜಾ ಕೊಲೆ ಪ್ರಕರಣಕ್ಕೆ ಶೀಘ್ರವೇ ತಾರ್ಕಿಕ ಅಂತ್ಯ – vishwanews24

ತಾರ್ಕಿಕ ಅಂತ್ಯ ಕಾಣಲಿರುವ ಶಿರ್ವ ಡೇವಿಡ್‌ ಡಿ'ಸೋಜಾ ಕೊಲೆ ಪ್ರಕರಣ ಹೊರ ರಾಜ್ಯದಲ್ಲಿ ಮಧ್ಯವರ್ತಿಯ ಹುಡುಕಾಟ ..  ಪೊಲೀಸರಿಂದ ಆರೋಪಿಗಳ…

44 minutes ago

ಬಿ.ಪಿ.ಎಲ್. ಪಡಿತರ ಚೀಟಿ ಆದಾಯ ಮಿತಿ ರೂ. 3 ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ – vishwanews24

ಬಿ.ಪಿ.ಎಲ್. ಪಡಿತರ ಚೀಟಿ ಆದಾಯ ಮಿತಿ ರೂ. 3 ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ ಉಡುಪಿ:…

56 minutes ago

ಪ್ರೇಯಸಿ ಆತ್ಮಹತ್ಯೆ ಸುದ್ದಿ ತಿಳಿದು ನೇಣಿಗೆ ಶರಣಾದ ಪ್ರಿಯಕರ – vishwanews24

ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ವಿಷ ಸೇವಿಸಿದ್ದ ಯುವತಿ.. ಪ್ರೇಯಸಿ ಆತ್ಮಹತ್ಯೆ ಸುದ್ದಿ ತಿಳಿದು ನೇಣಿಗೆ ಶರಣಾದ ಪ್ರಿಯಕರ ಧಾರವಾಡ: ಪ್ರೇಯಸಿ…

1 hour ago