Featured

ಮಂಗಳವಾರ ಹನುಮಂತನನ್ನು ಪೂಜಿಸುವುದರಿಂದ ನಮ್ಮಲ್ಲಿ ಸಕಾರಾತ್ಮಕ ಮನೋಭಾವವು ಹೆಚ್ಚಾಗುತ್ತದೆ -Vishwanews24

ಮಂಗಳವಾರ ಹನುಮಂತನನ್ನು ಪೂಜಿಸುವುದರಿಂದ ನಮ್ಮಲ್ಲಿ ಸಕಾರಾತ್ಮಕ ಮನೋಭಾವವು ಹೆಚ್ಚಾಗುತ್ತದೆ -Vishwanews24

ಮಂಗಳವಾರ ಭಗವಾನ್‌ ಹನುಮನ ದಿನ. ಈ ದಿನ ಹನುಮಂತನನ್ನು ಪೂಜಿಸಲಾಗುತ್ತದೆ. ಮಂಗಳವಾರದಂದು ಮುಂಜಾನೆ ಹನುಮನ ಪೂಜೆಯನ್ನು ಮಾಡುವುದರಿಂದ ಅತ್ಯಂತ ಫಲದಾಯಕವಾಗಿದೆ. ಜೀವನದ ಯಶಸ್ಸಿಗಾಗಿ, ಧೈರ್ಯಕ್ಕಾಗಿ, ಶಕ್ತಿಗಾಗಿ ಮತ್ತು ಗೌರವಕ್ಕಾಗಿ ಹನುಮಂತನನ್ನು ಪೂಜಿಸಬೇಕು. ಕೋಪಿಷ್ಟ ಸ್ವಭಾವವನ್ನು ಹೊಂದಿರುವವರು ಹಾಗೂ ಹಿಂಸಾತ್ಮಕ ಮನೋಭಾವವನ್ನು ಹೊಂದಿರುವವರು ಮಂಗಳವಾರ ತಪ್ಪದೇ ಹನುಮನ ಪೂಜೆ ಮಾಡಿ ಉಪವಾಸವನ್ನು ಕೈಗೊಳ್ಳಬೇಕು.

ಮಂಗಳವಾರದ ಹನುಮನ ಪೂಜೆಗೆ ಅಗತ್ಯವಾದ ವಸ್ತುಗಳು:

ದೀಪ, ಅಗರಬತ್ತಿ, ಯಾವುದೇ ರೀತಿಯ ಹಣ್ಣು, ವಿಶೇಷವಾಗಿ ಬಾಳೆಹಣ್ಣಿದ್ದರೆ ಉತ್ತಮ. ನೀರು, ಹೂವುಗಳು, ಕುಂಕುಮ, ಕೆಂಪು ಬಣ್ಣದ ಬಟ್ಟೆ, ಹನುಮನ ಫೋಟೋ ಅಥವಾ ಹನುಮನ ಮೂರ್ತಿ ಅಥವಾ ಭಗವಾನ್‌ ಹನುಮಾನ್‌ ಯಂತ್ರ, ನೈವೇದ್ಯಕ್ಕಾಗಿ ಬೆಲ್ಲ ಅಥವಾ ಮೋತಿಚೂರ್‌ ಲಡ್ಡು ಇವೆಲ್ಲವೂ ಹನುಮನ ಪೂಜೆಗೆ ಅತ್ಯಂತ ಅವಶ್ಯಕವಾದ ವಸ್ತುಗಳಾಗಿವೆ.

ಮಂಗಳವಾರ ಹನುಮಂತನನ್ನು ಪೂಜಿಸುವ ವಿಧಾನ:

1) ನೀವು ಹನುಮನನ್ನು ಪೂಜಿಸುವ ಸ್ಥಳವನ್ನು ಸ್ವಚ್ಛಗೊಳಿಸಿ.

2) ಹನುಮಂತನಿಗೆ ಪ್ರಾರ್ಥನೆಯನ್ನು ಸಲ್ಲಿಸಿ..

3) ಹನುಂತನನ್ನು ನೀರಿನಿಂದ ಶುದ್ಧಗೊಳಿಸಿ.

4) ನೀವು ಪೂಜೆ ಮಾಡುವ ಸ್ಥಳದಲ್ಲಿ ಸ್ವಲ್ಪ ನೀರನ್ನು ಸಂಪಡಿಸಿ ಮತ್ತು ನಿಮ್ಮ ಮೇಲೆ ಕೂಡ ಸಿಂಪಡಿಸಿಕೊಳ್ಳಿ.

5) ನಂತರ ಕೆಂಪು ಬಟ್ಟೆಯ ಮೇಲೆ ಹನುಂತನ ವಿಗ್ರಹವನ್ನೋ ಅಥವಾ ಫೋಟೋವನ್ನೋ ಇರಿಸಿ.

6) ನೀವು ಪೂಜೆಗೆಂದು ಸಿದ್ಧಗೊಳಿಸಿದ ಹನುಮಂತನಿಗೆ ಕುಂಕುಮವನ್ನು ಹಚ್ಚಿ.

7) ಹನುಮಂತನಿಗೆ ದೀಪ ಮತ್ತು ಧೂಪವನ್ನು ನೆಳಬೇಕು.

8) ಕೊನೆಯಲ್ಲಿ ಹನುಮಂತನಿಗೆ ಹೂಗಳನ್ನು ಮತ್ತು ನೈವೇದ್ಯವನ್ನು ಅರ್ಪಿಸಿ.

 

ಮಂಗಳವಾರ ಹನುಮನ ಪೂಜೆಯಲ್ಲಿ ನೆನಪಿಟ್ಟುಕೊಳ್ಳಬೇಕಾದ ವಿಷಯ:

1) ಮಂಗಳವಾರ ಹನುಮಂತನನ್ನು ಪೂಜಿಸುವಾಗ ಕಡ್ಡಾಯವಾಗಿ ತಲೆ ಸ್ನಾನ ಮಾಡಬೇಕು.

2) ಸಾಧ್ಯವಾದರೆ ಹನುಮನ ಪೂಜೆಯಲ್ಲಿ 108 ಅಕ್ಷತೆ, 108 ವೀಳ್ಯದೆಲೆಯನ್ನು ಮತ್ತು 108 ಹಣ್ಣುಗಳನ್ನು ಇಡಿ.

3) ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ. ತಪ್ಪಿಯೂ ಮಾಂಸಾಹಾರವನ್ನು ಸೇವಿಸದಿರಿ.

4) ಭಗವಾನ್‌ ಹನುಮನಿಗೆ 5 ಬಾಳೆಹಣ್ಣುಗಳನ್ನು ಅರ್ಪಿಸಿ.

5) ಹನುಮಂತನನ್ನು ಈಶಾನ್ಯ ದಿಕ್ಕಿನಲ್ಲಿಟ್ಟು ಪೂಜಿಸಿ.

ಮಂಗಳವಾರ ಹನುಮನ ಪೂಜೆಗೆ ಉಪವಾಸ ವಿಧಾನ:

ಹನುಮನ ಆಶೀರ್ವಾದಕ್ಕಾಗಿ 21 ಮಂಗಳವಾರ ನಿರಂತರವಾಗಿ ಉಪವಾಸವನ್ನು ಆಚರಿಸಬೇಕು. ಮತ್ತು ಈ ಉಪವಾಸವನ್ನು ಮಾಡುವ ವ್ಯಕ್ತಿಯು ಸೂರ್ಯೋದಯಕ್ಕೂ ಮುಂಚಿತವಾಗಿ ಏಳಬೇಕು. ಸ್ನಾನ ಮಾಡಿದ ನಂತರ ಮನೆಯ ಮೂಲೆ ಮೂಲೆಯಲ್ಲೂ ಗಂಗಾ ಜಲವನ್ನು ಸಿಂಪಡಿಸಿ. ಸಾಧ್ಯವಾದರೆ ಈ ದಿನ ನೀವು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ. ಮೇಲೆ ತಿಳಿಸಿದ ವಿಧಾನದಲ್ಲಿ ಹನುಮನಿಗೆ ಪೂಜೆಯನ್ನು ಆರಂಭಿಸಿ. ಪೂಜೆಯ ನಂತರ ಹನುಮಾನ್‌ ಚಾಲೀಸ ಪಠಿಸಿ ಮತ್ತು ಸುಮಾರು 15 ನಿಮಿಷಗಳ ಕಾಲ ಧ್ಯಾನ ಮಾಡಿ ಹನುಮಂತನ ಆಶೀರ್ವಾದವನ್ನು ಪಡೆದುಕೊಳ್ಳಿ. ಬೆಲ್ಲದಿಂದ ತಯಾರಿಸಿದ ಖಾದ್ಯವನ್ನು ಒಂದು ಹೊತ್ತು ಮಾತ್ರ ಸೇವಿಸಬಹುದು. ಸಂಜೆ ಉಪವಾಸವನ್ನು ಕೈಬಿಡುವ ಮುನ್ನ ಚಾಲೀಸವನ್ನು ಮತ್ತೊಮ್ಮೆ ಓದಿ ಹನುಮನಿಗೆ ಭೋಗವನ್ನು ಅಥವಾ ನೈವೇದ್ಯವನ್ನು ಅರ್ಪಿಸಿ.

ಮಂಗಳವಾರ ಹನುಮನ ಪೂಜೆಯ ಪ್ರಯೋಜನ:

1) ಹನುಮನ ಪೂಜೆಯಿಂದ ಶಕ್ತಿ ಮತ್ತು ಸಾಮರ್ಥ್ಯವು ಹೆಚ್ಚಾಗುವುದು.

2) ಸಂಪತ್ತನ್ನು ವೃದ್ಧಿಸುತ್ತದೆ ಮತ್ತು ಎಲ್ಲಾ ಆರ್ಥಿಕ ಸಮಸ್ಯೆಗಳು ದೂರಾಗುತ್ತದೆ.

3) ನಿಮ್ಮ ಇಚ್ಛೆಗಳೆಲ್ಲವೂ ಈಡೇರುತ್ತದೆ.

4) ಎಲ್ಲಾ ಪಾಪ – ಕರ್ಮಗಳು ದೂರಾಗುತ್ತದೆ.

5) ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ.

6) ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಲು ಪುರುಷರು ಈ ಉಪವಾಸವನ್ನು ಕೈಗೊಳ್ಳಬಹುದು.

7) ಶನಿ ದೋಷ ನಿವಾರಣೆಗೆ ಕೇವಲ ಮಂಗಳವಾರ ಮಾತ್ರವಲ್ಲ, ಶನಿವಾರ ಕೂಡ ಹನುಮನ ಪೂಜೆಯನ್ನು ಮಾಡಬಹುದು.

ಇಂದು ಮಂಗಳವಾರ. ಈ ದಿನ ಹನುಮಂತನನ್ನು ಪೂಜಿಸುವುದರಿಂದ ನಮ್ಮಲ್ಲಿ ಸಕಾರಾತ್ಮಕ ಮನೋಭಾವವು ಹೆಚ್ಚಾಗುತ್ತದೆ. ಶನಿ ಗ್ರಹದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ತಪ್ಪದೇ ಪ್ರತೀ ಮಂಗಖವಾರ ಹಾಗೂ ಶನಿವಾರ ಭಗವಾನ್‌ ಹನುಮಂತನನ್ನು ಪೂಜಿಸಬೇಕು.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಕೇಂದ್ರ.

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

1 day ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

1 day ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

1 day ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

1 day ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

1 day ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

1 day ago