Featured

ಮಂಗಳೂರು:ಭಾರೀ ಮಳೆಗೆ ಮತ್ತೆ ಕುಸಿಯಲಾರಂಭಿಸಿದ ಕೆತ್ತಿಕಲ್ ಗುಡ್ಡ – vishwanews24

ಮಂಗಳೂರು:ಭಾರೀ ಮಳೆಗೆ ಮತ್ತೆ ಕುಸಿಯಲಾರಂಭಿಸಿದ ಕೆತ್ತಿಕಲ್ ಗುಡ್ಡ

ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ಷೇಪ

ಮಂಗಳೂರು: ವಾಮಂಜೂರು ತಿರುವೈಲು ಶಾಲೆಯ ಸಮೀಪದ ಕೆತ್ತಿಕಲ್ ಗುಡ್ಡ ಮಂಗಳವಾರ ಮತ್ತೆ ಕುಸಿತಗೊಂಡಿದ್ದು, ಮಣ್ಣು ಹಾಗೂ ಬಂಡೆ ಕಲ್ಲುಗಳು ರಸ್ತೆಗೆ ಉರುಳಿದೆ.

ಕೆಲವು ದಿನಗಳ ಹಿಂದೆ ಅದೇ ಜಾಗದಲ್ಲಿ ಕುಸಿತವಾಗಿ ಗುಡ್ಡದ ಮಣ್ಣು ಹೆದ್ದಾರಿಗೆ ಬಿದ್ದಿತ್ತು. ಆ ಬಳಿಕ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿತ್ತು. ಕಳೆದು ಎರಡು ದಿನಗಳಿಂದ ಸುರಿದ ನಿರಂತರ ಮಳೆಗೆ ಮತ್ತೆ ಕುಸಿತವಾಗುತ್ತಿದೆ. ಮಂಗಳವಾರ ಮಧ್ಯಾಹ್ನದ ವೇಳೆ ಭಾರೀ ಪ್ರಮಾಣದಲ್ಲಿ ಮಣ್ಣು ಹಾಗೂ ಬಂಡೆ ಕುಸಿದಿದೆ. ಗುಡ್ಡದ ಮೇಲೆ ಮಣ್ಣು ಹಾಗೂ ಬಂಡೆ ಬಿರುಕು ಬಿಟ್ಟು ನಿಂತಿದ್ದು ಮತ್ತಷ್ಟು ಕುಸಿತದ ಆತಂಕವಿದೆ.

 

ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ಷೇಪ
ಕಳೆದ ವರ್ಷ ಭಾರೀ ಮಳೆಯ ಸಂದರ್ಭದಲ್ಲಿ ಕೆತ್ತಿಕಲ್‌ನ ವಿವಿಧ ಭಾಗಗಳಲ್ಲಿ ಕುಸಿದಿತ್ತು. ಅಸಮರ್ಪಕ ವಾಗಿ ಅಗೆದಿರುವ ಜಾಗಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿ ಕಾರಿಯವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ತಿರುವೈಲು ಶಾಲೆಯ ಸಮೀಪದಲ್ಲಿ ಸಮರ್ಪಕ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಿಲ್ಲ. ನಿರಂತರವಾಗಿ ಗುಡ್ಡದ ಮಣ್ಣು ಅವೈಜ್ಞಾನಿಕ ರೀತಿಯಲ್ಲಿ ಅಗೆದಿ ರುವುದರಿಂದ ಕುಸಿತ ಮುಂದುವರಿ ದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಡ್ಡದ ಮೇಲ್ಬಾಗ ದಲ್ಲೂ ಮನೆಗಳಿದ್ದು, ಅವರೂ ಅಪಾಯವನ್ನು ಎದುರಿಸುತ್ತಿದ್ದಾರೆ.

Vishwa News 24

Recent Posts

ಮೂಡಬಿದ್ರೆ: ಯುವತಿ ನಾಪತ್ತೆ ; ಪತ್ತೆಗೆ ಮನವಿ – vishwanews24

ಮೂಡಬಿದ್ರೆ: ಯುವತಿ ನಾಪತ್ತೆ ; ಪತ್ತೆಗೆ ಮನವಿ ಮೂಡಬಿದ್ರೆ: ಸಾಬಿರಾ ಬಾನು (20) ಎಂಬವರು ಜುಲೈ 27 ರಂದು ಕಾಣೆಯಾಗಿದ್ದು,…

6 minutes ago

ಉಡುಪಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯ ಕುಟುಂಬಕ್ಕೆ 1.45 ಕೋಟಿ ವಿಮಾ ಚೆಕ್ ಹಸ್ತಾಂತರ – vishwanews24

ಉಡುಪಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯ ಕುಟುಂಬಕ್ಕೆ 1.45 ಕೋಟಿ ವಿಮಾ ಚೆಕ್ ಹಸ್ತಾಂತರ ಉಡುಪಿ: ಕರ್ತವ್ಯದಲ್ಲಿದ್ದಾಗ ರಸ್ತೆ…

10 minutes ago

ವಿಮೆ ಇಲ್ಲದ ವಾಹನಗಳಿಗೆ ಇನ್ಮುಂದೆ ಪೆಟ್ರೋಲ್‌ ನಿರಾಕರಣೆ : ಕೇಂದ್ರಕ್ಕೆ ಸುಪ್ರೀಂ ನಿದೇರ್ಶನ ! vishwanews24

ವಿಮೆ ಇಲ್ಲದ ವಾಹನಗಳಿಗೆ ಬಂಕ್‌ಗಳಲ್ಲಿ ಪೆಟ್ರೋಲ್‌ ನಿರಾಕರಣೆ : ಪ್ರಾಯೋಗಿಕ ಯೋಜನೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ ನವದೆಹಲಿ: ದೇಶದಲ್ಲಿ ವಿಮೆ ಇಲ್ಲದೆಯೇ…

29 minutes ago

ಕಟಪಾಡಿ : ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್  – vishwanews24

ಕಟಪಾಡಿ : ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್  ಕಟಪಾಡಿಯ ಯೇಣಗುಡ್ಡೆಯ ತೇಕಲ್ ತೋಟದ ಬಳಿ ರಾಷ್ಟ್ರೀಯ ಹೆದ್ದಾರಿ 66…

46 minutes ago

ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ – vishwanews24

ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ ಮುಂಬಯಿ: 'ಲಗಾನ್' ಮತ್ತು 'ಗಜನಿ' ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ…

1 hour ago

ಕಾರ್ಕಳ: ಹೋಟೆಲ್‌ನ ಜೂಜಾಟ ಅಡ್ಡೆಯ ಮೇಲೆ ಪೊಲೀಸರ ದಾಳಿ ; ಆರು ಮಂದಿ ಅರೆಸ್ಟ್‌ – vishwanews24

ಕಾರ್ಕಳ: ಹೋಟೆಲ್‌ನ ಜೂಜಾಟ ಅಡ್ಡೆಯ ಮೇಲೆ ಪೊಲೀಸರ ದಾಳಿ ; ಆರು ಮಂದಿ ಅರೆಸ್ಟ್‌ ಕಾರ್ಕಳ: ಕಾರ್ಕಳ ತಾಲೂಕಿನ ನಿಟ್ಟೆ…

21 hours ago