ಕೈಕಂಬ ; ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಕಂದಾವರ ಪದವಿನ ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ದಿನಾಂಕ 20.03.2022 ರಂದು ರಾತ್ರಿ ದುಶ್ಕರ್ಮಿಯೋರ್ವ ದೈವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿ, ರಾಹು ದೈವದ ಗುಡಿಯಲ್ಲಿ ಉರಿಯುತ್ತಿದ್ದ ದೀಪವನ್ನು ನಂದಿಸಿ, ಅದನ್ನು ಕವಚಿ ಅದಕ್ಕೆ ರಕ್ತವನ್ನು ಹರಿಸಿ, ನಂತರ ದೈವಸ್ಥಾನದ ಬಲಬದಿಯಲ್ಲಿರುವ ಆಯದಕಲ್ಲಿಗೆ ರಕ್ತದ ಬಿಂದು ಹರಿಸುತ್ತಾ ಸುತ್ತು ಬಂದು ನಂತರ ಇಡೀ ಅಂಗಣದ ಸುತ್ತಲೂ ರಕ್ತದ ಬಿಂದು ಸುರಿಸಿದ್ದಾನೆ.
ಬೆಳಿಗ್ಗೆ ದೈವದ ಚಾಕರಿಯವರೋರ್ವರು ದೈವಸ್ಥಾನಕ್ಕೆ ಬಂದಾಗ ಸಂಗತಿ ಬೆಳಕಿಗೆ ಬಂತು.
ಕ್ಷಣ ಮಾತ್ರದಲ್ಲಿ ಸಧ್ಭಕ್ತರು ದೈವಸ್ಥಾನದ ಅಂಗಣದಲ್ಲಿ ನೆರೆದು ಮಧ್ಯಾಹ್ನವೇ ಶ್ರೀ ಬಬ್ಬು ಸ್ವಾಮಿಯ ದರ್ಶನಕ್ಕೆ ಸಮಯ ನಿಗದಿಪಡಿಸಿ, ದರ್ಶನದ ಸಮಯದೊಳಗೆ ದುಷ್ಕರ್ಮಿ ದೈವಸ್ಥಾನಕ್ಕೆ ಬರಬೇಕೆಂದು ಪ್ರಾರ್ಥಿಸಿದರು.
ತದನಂತರ ಬಜ್ಪೆ ಠಾಣೆಗೆ ದೂರು ನೀಡಲಾಗಿ ಪೊಲೀಸರು ಅಗಮಿಸಿ, ಕೇವಲ ಒಂದುಗಂಟೆಯೊಳಗೆ ದುಷ್ಕರ್ಮಿಯನ್ನು ಬಂಧಿಸಿದರು.
ಸ್ಥಳೀಯ ನಿವಾಸಿ ಸಾಹುಲ್ ಎಂಬಾತನನ್ನು ಪೋಲಿಸರು ಆತನ ಮನೆಯಿಂದ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಬ್ಬುಸ್ವಾಮಿಯ ದರ್ಶನ ಆಯೋಜಿಸಿರುವ ಭಕ್ತರು ದುಷ್ಕರ್ಮಿ ಪತ್ತೆಯಾಗಬೇಕೆಂದು ಮನವಿ ಮಾಡಿದ್ದರು. ಇದೀಗ ದೂರು ದಾಖಲಾದ ಒಂದೇ ಗಂಟೆಯಲ್ಲೇ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಳೆದ 2020 ರಲ್ಲಿ ದೈವಸ್ಥಾನವನ್ನು ಪುನರ್ ನಿರ್ಮಿಸಿ, ಪಂಚವಿಂಶತಿ ಕಲಶಾಭಿಷೇಕ ನಡೆದು ಶ್ರೀ ದೈವಗಳ ಕಾರಣಿಕ ದಿನದಿಂದ ದಿನಕ್ಕೆ ವಿಜೃಂಬಿಸುತ್ತಿದ್ದು, ಇಂದಿನ ಘಟನೆ ಶ್ರೀ ಬಬ್ಬು ಸ್ವಾಮಿ ಮತ್ತು ರಾಹುದೈವದ ಕಾರಣಿಕಕ್ಕೆ ಮತ್ತೊಂದು ಗರಿ.
ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…
ಕರ್ನಾಟಕ ಬಂದ್ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…
ವಿಧಾನ ಪರಿಷತ್ ಸಭಾ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್ ಕಲಾಪ…
ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…
ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…
ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…