ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಭಾನುವಾರ “ಸರ್ವಜನಿಕ ಮಸೀದಿ ದರ್ಶನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಗಮನ ಸೆಳೆಯಿತು. ಸರ್ವಧರ್ಮ ಸಾಮರಸ್ಯವನ್ನು ಉತ್ತೇಜಿಸುವ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಗುರಿಯೊಂದಿಗೆ ಎಲ್ಲಾ ಧರ್ಮದ ಜನರಿಗೆ ಮಸೀದಿ ವೀಕ್ಷಣೆಗೆ ಅವಕಾಶ ಕಲ್ಪಿಸಿ ಈ ಕಾರ್ಯಕ್ರಮ ನಡೆಸಲಾಯಿತು. ಮಸೀದಿ ನಿರ್ವಹಣಾ ಸಮಿತಿಯು ಕುದ್ರೋಳಿ ಮುಸ್ಲಿಂ ಐಕ್ಯತ ವೇದಿಕೆ , ಜಮಾತ್-ಇ-ಇಸ್ಲಾಮಿ ಹಿಂದ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿತು.
ಶತಮಾನದಷ್ಟು ಹಳೆಯದಾದ ಈ ಮಸೀದಿಯನ್ನು 2013 ರಲ್ಲಿ ನವೀಕರಿಲಾಗಿತ್ತು. ಸದ್ಯ, “ಸರ್ವಜನಿಕ ಮಸೀದಿ ದರ್ಶನ” ಕಾರ್ಯಕ್ರಮದ ಅಂಗವಾಗಿ ಭಾನುವಾರ ವಿವಿಧ ಧಾರ್ಮಿಕ ಹಿನ್ನೆಲೆಯ ಮುಖಂಡರು, ಸಂದರ್ಶಕರು ಮಸೀದಿಗೆ ಭೇಟಿ ನೀಡಿದರು.
ಮಸೀದಿಗೆ ಬಂದ ಸರ್ವ ಧರ್ಮೀಯರನ್ನು ಖರ್ಜೂರ, ಕಲ್ಲಂಗಡಿ ರಸ, ತಿಂಡಿಗಳು, ಚಹಾ, ಊಟ, ಇಸ್ಲಾಮಿಕ್ ಸಾಹಿತ್ಯ ಮತ್ತು ಸುಗಂಧ ದ್ರವ್ಯ ಉಡುಗೊರೆಗಳನ್ನು ಒಳಗೊಂಡ ಆತಿಥ್ಯದೊಂದಿಗೆ ಸ್ವಾಗತಿಸಲಾಯಿತು. ಮಸೀದಿಯ ಆವರಣವನ್ನು, ಅದರ ಪ್ರಾರ್ಥನಾ ಪ್ರದೇಶಗಳು, ಮೇಲಿನ ಮಹಡಿಗಳು ಮತ್ತು ಪರಂಪರೆಯ ವಿಭಾಗಗಳನ್ನು ಮುಕ್ತವಾಗಿ ಅನ್ವೇಷಿಸಲು ಅವಕಾಶ ನೀಡಲಾಯಿತು. ಫೋಟೋಗಳನ್ನು ಸೆರೆಹಿಡಿಯುವುದು ಮತ್ತು ಚಿಂತನಶೀಲ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಲ್ಪಿಸಲಾಯಿತು.
ಮಸೀದಿ ದರ್ಶನದಲ್ಲಿ ಏನೇನಿತ್ತು?
ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಕುರಾನ್ ಸಂದೇಶಗಳು, ಪ್ರವಾದಿಯ ಬೋಧನೆಗಳು, ವಿವಿಧ ಭಾಷೆಗಳಲ್ಲಿ ಕುರಾನ್ನ ಅನುವಾದ ಕೃತಿಗಳು ಮತ್ತು ಮಸೀದಿಯ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ತೋರಿಸುವ ವೀಡಿಯೊ ಪ್ರಸ್ತುತಿ ಮಾಡಲಾಗಿತ್ತು. ಸ್ವಯಂಸೇವಕರು ಮತ್ತು ಧಾರ್ಮಿಕ ವಿದ್ವಾಂಸರು ನಮಾಜ್ (ಪ್ರಾರ್ಥನೆ), ಅಜಾನ್ (ಪ್ರಾರ್ಥನೆಗೆ ಕರೆ), ಮಸೀದಿ ಶಿಷ್ಟಾಚಾರ ಮತ್ತು ವಿವಿಧ ಜಮಾಅತ್ಗಳ (ಸಭೆಗಳು) ಪಾತ್ರಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದರು.
ಮುಕ್ತತೆ, ಶಿಕ್ಷಣ ಮತ್ತು ಪರಸ್ಪರ ಗೌರವದ ಮೂಲಕ ಸಮುದಾಯಗಳ ನಡುವೆ ಸೇತುವೆಗಳನ್ನು ನಿರ್ಮಿಸುವತ್ತ ಒಂದು ಪ್ರಬಲ ಹೆಜ್ಜೆಯಾಗಿ ಈ ಕಾರ್ಯಕ್ರಮ ನೆರವೇರಿದೆ ಎಂದು ಸಂದರ್ಶಕರು ಅಭಿಪ್ರಾಯಪಟ್ಟರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಲಕ್ಷ್ಮಿಶ ಗಬ್ಲಡ್ಕ, ‘ನಾವು ಪ್ರಾರ್ಥನೆಯಲ್ಲಿ ನಮ್ಮ ಕಣ್ಣುಗಳನ್ನು ಮುಚ್ಚಿದ್ದಾಗ, ನಮ್ಮ ಒಳಗಣ್ಣು ತೆರೆದಿರುತ್ತದೆ. ಈ ಭೇಟಿಯು ಜನರು ಆ ಆಂತರಿಕ ದೃಷ್ಟಿಯೊಂದಿಗೆ ನೋಡಲು ಸಹಾಯ ಮಾಡುತ್ತದೆ’ ಎಂದು ಹೇಳಿದರು.
ಹೋಲಿ ರೋಸರಿ ಚರ್ಚ್ನ ಫಾದರ್ ವಲೇರಿಯನ್ ಡಿ’ಸೋಜಾ, ಈ ಕಾರ್ಯಕ್ರಮವನ್ನು ಏಕತೆಯ ಕಡೆಗೆ ದೇವರಿಂದ ಪ್ರೇರಿತವಾದ ಹೆಜ್ಜೆ ಎಂದು ಶ್ಲಾಘಿಸಿದರು. ದೇವಾಲಯಗಳು, ಮಸೀದಿಗಳು ಮತ್ತು ಚರ್ಚ್ಗಳು ಪ್ರೀತಿಯನ್ನು ಬೋಧಿಸುತ್ತವೆ. ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ಶಾಂತಿಯುತವಾಗಿ ಬದುಕಲು ನಾವು ಅಂತಹ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: ಕಲ್ಲೆಸೆಯುವವರಿಗೆ ಕಲ್ಲಿನಿಂದಲೇ ಉತ್ತರ ಕೊಡಬೇಕು: ಬೆಂಗಳೂರಿನಲ್ಲಿ ವಿವಾದದ ಕಿಡಿ ಹೊತ್ತಿಸಿದ ಸಾಧ್ವಿ ಪ್ರಜ್ಞಾ ಸಿಂಗ್
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೆಐಎಚ್ (ಮಂಗಳೂರು ದಕ್ಷಿಣ) ಅಧ್ಯಕ್ಷ ಇಶಾಕ್ ಪುತ್ತೂರು, ಪ್ರವಾದಿಯವರ ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಹಂಚಿಕೊಂಡರು.
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…