ಮಂಗಳೂರು: ಪರಿಸರ ಉಳಿಯಲು ವನಸಂರಕ್ಷಣೆ ಎಷ್ಟು ಮುಖ್ಯವೋ ಗೋ ಸಂರಕ್ಷಣೆ ಕೂಡ ಅಷ್ಟೇ ಮುಖ್ಯ ಎಂದು ಶ್ರೀ ರಾಮಚಂದ್ರಾಪುರ ಮಠದ ಯತಿವರ್ಯರಾದ ಶ್ರಿ ರಾಘವೇಶ್ವರ ಭಾರತೀ ಸ್ವಾಮೀಜಿ ತಮ್ಮ ಅನುಗ್ರಹ ಭಾಷಣದಲ್ಲಿ ಹೇಳಿದರು.
ಮಂಗಳೂರಿನ ಕುಂಜತ್ತಬೈಲಿನ ಮಾರುತಿ ಬಡಾವಣೆಯಲ್ಲಿ ಪೂಜ್ಯರು ಗೋಸಂರಕ್ಷಣೆ ಬಗ್ಗೆ ಪ್ರವಚನ ನೀಡುತ್ತಿದ್ದರು.
ಗೋವನ್ನು ನಾವು ಕಾಪಾಡಿದರೆ ಗೋವು ನಮ್ಮನ್ನು ಕಾಪಾಡುತ್ತದೆ. ಇಡೀ ಸೃಷ್ಟಿಯೇ ಒಬ್ಬರನ್ನೊಬ್ಬರು ಅನುಸರಿಸಿ ಬಾಳುವುದನ್ನು ಹೇಳಿಕೊಡುತ್ತದೆ. ನಾವು ಸೃಷ್ಟಿಯ ವಿರುದ್ಧ ಹೋಗುತ್ತಿದ್ದೇವೆ. ಇದು ಒಳ್ಳೆಯದಲ್ಲ. ಪ್ರಕೃತಿ, ಪರಿಸರ, ಪ್ರಾಣಿ-ಪಕ್ಷಿಗಳನ್ನು ಈ ರೀತಿ ನಾಶ ಮಾಡುತ್ತ ಹೋದರೆ ನಮ್ಮ ವಿನಾಶವನ್ನು ನಾವೇ ತಂದುಕೊಂಡಂತೆ ಎಂದು ಶ್ರೀಗುರುಗಳು ಹೇಳಿದರು.
ಮನುಕುಲದ ವಿಕಾಸದ ಕಾಲದಿಂದಲೂ ಗೋವು ಮನುಷ್ಯನ ಸಹವರ್ತಿಯಾಗಿ ಬದುಕಿದ ಅತ್ಯಂತ ಸಾಧು ಸ್ವಭಾವದ ಪ್ರಾಣಿ. ದೇವತೆಗಳ ಸಕಲ ಅಂಶಗಳನ್ನೂ ಹೊಂದಿರುವ ಪೂಜನೀಯ ಪ್ರಾಣಿ. ಆಧುನಿಕ ನಾಗರಿಕತೆಯ ಹೆಸರಿನಲ್ಲಿ ಸಾಕ್ಷರ ರಾಕ್ಷಸರಾದ ನಾವು ಅವುಗಳನ್ನು ಕೊಂದು ತಿಂದು ಅವುಗಳ ಸಂತತಿಯನ್ನೇ ನಾಶ ಪಡಿಸುವ ಹಂತಕ್ಕೆ ಬಂದು ನಿಂತಿದ್ದೇವೆ. ಹಸುಗಳು ಅಳಿದರೆ ಮನುಷ್ಯರೂ ಉಳಿಯುವುದಿಲ್ಲ ಎಂದು ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀಪಾದರು ನುಡಿದರು.
ಪ್ರಜೆಗಳೆಲ್ಲರೂ ಸರಕಾರದ ಮೇಲೆ ಒಕ್ಕೊರಲ ಒತ್ತಡ ಹಾಕಿ ಗೋ ಸಂರಕ್ಷಣೆ ಮಾಡುವ ಶಪಥ ಹಾಕಬೇಕು ಎಂದು ಪೂಜ್ಯರು ಒತ್ತಾಯಿಸಿದರು.
ಕುಂಜತ್ ಬೈಲ್ ವೃತ್ತದಿಂದ ಮಾರುತಿ ಬಡಾವಣೆಯ ವರೆಗೆ ಸುಮಾರು ಒಂದು ಕಿ. ಮೀ. ದೂರ ಕಲಶ ಹಿಡಿದ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಚೆಂಡೆ ವಾದ್ಯಗಳ ಬೃಹತ್ ಶೋಭಾಯಾತ್ರೆಯಲ್ಲಿ ಶ್ರೀಗಳವರನ್ನು ತೆರೆದ ವಾಹನದಲ್ಲಿ ವೇದಿಕೆಯ ವರೆಗೆ ಕರೆದೊಯ್ದರು. ಕುಂಜತ್ ಬೈಲ್ ಪರಿಸರದ ಸಾವಿರಾರು ಮಂದಿ ವೈಭವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಉಡುಪಿ : ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ…
ಚಾ.ನಗರ: ಗ್ರೈಂಡರ್ನಿಂದ ವಿದ್ಯುತ್ ಶಾಕ್ – ನಾಲ್ಕು ವರ್ಷದ ಬಾಲಕಿ ದುರ್ಮರಣ ಚಾಮರಾಜನಗರ: ಗ್ರೈಂಡರ್ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು…
ಉಡುಪಿ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಜಿಲ್ಲೆಯ ಮನೆಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ:…
ಆರ್ಎಸ್ಎಸ್ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…
ಬೆಳ್ತಂಗಡಿ: ಎಸ್ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…