Featured

ಮಂಗಳೂರು : ನಕಲಿ ಪರಶುರಾಮ ಪ್ರತಿಮೆ :  ಶಾಸಕತ್ವದಿಂದ ಸುನೀಲ್ ಕುಮಾರ್ ಅಮಾನತು ಆಗಬೇಕು : ಮಿಥುನ್ ರೈ – vishwanews24

ಹಿಂದುತ್ವದ ಭಾಷಣ ಬಿಗಿಯುವವರು ಪರಶುರಾಮನ ನಕಲಿ ವಿಗ್ರಹ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ?

ಇಡೀ ಭಾರತಕ್ಕೆ ಕಾರ್ಕಳ ಶಾಸಕರು ಮಾಡಿದ ವಂಚನೆ, ನಂಬಿಕೆ ದ್ರೋಹ..

ಶಾಸಕ ಸುನಿಲ್ ಕುಮಾರ್ ಧರ್ಮದ ಹೆಸರಲ್ಲಿ ರಾಜಕೀಯ  ಮಾಡಿದ್ದಾರೆ..

ಒಂದು ವೇಳೆ ಕಾಂಗ್ರೆಸ್ ಇದನ್ನ ಮಾಡ್ತಿದ್ದರೆ ಜಿಲ್ಲೆಗೆ ಬೆಂಕಿ ಹಾಕ್ತಿದ್ರು..

ಮಂಗಳೂರು: ಕಾರ್ಕಳ ಥೀಮ್ ಪಾರ್ಕಿನ ಪರಶುರಾಮ ಪ್ರತಿಮೆ ನಕಲಿಯಾಗಿದ್ದು ಇದು ಇಡೀ ಭಾರತಕ್ಕೆ ಕಾರ್ಕಳ ಶಾಸಕರು ಮಾಡಿದ ವಂಚನೆ, ನಂಬಿಕೆ ದ್ರೋಹವಾಗಿದೆ ಆದ್ದರಿಂದ ಶಾಸಕತ್ವದಿಂದ ಸುನೀಲ್ ಕುಮಾರ್ ಅಮಾನತು ಆಗಬೇಕು ಮತ್ತು ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಒತ್ತಾಯಿಸಿದ್ದಾರೆ.

ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಿಥುನ್ ರೈ ಪರಶು ಚಿರಂಜೀವಿಯಾಗಿದ್ದು ಇಂದೂ ಕೂಡ ಪರಶು ದೇವರು ಇದ್ದಾರೆ,ಅವರ ಸ್ಮರಣೆ ಮಾಡ್ತೇವೆ. ಇಲ್ಲಿನ ಬಹಳ ದೇವಾಲಯಗಳಿಗೆ ಪರಶುರಾಮನೇ ಅಧಿಪತಿ.ಆದರೆ ಹಿಂದುತ್ವದ ಭಾಷಣ ಮಾಡುವವರು ಪರಶು ವಿಗ್ರಹ ವಿಚಾರದಲ್ಲಿ ಇಷ್ಟು ದೊಡ್ಡ ಮೋಸ ಆಗುವಾಗ ಯಾಕೆ ಮಾತನಾಡುತ್ತಿಲ್ಲ? ಈ ಸಂದರ್ಭದಲೂ ಧ್ವನಿ ಎತ್ತದಿದ್ದರೆ ದೇವರಿಗೆ ಮಾಡುವ ಅವಮಾನವಾಗಿದೆ.ಶಾಸಕ ಸುನಿಲ್ ಕುಮಾರ್ ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ್ದಾರೆ, ಆಗಿನ ಸರ್ಕಾರವೂ ಇದರಲ್ಲಿ ಶಾಮೀಲಾಗಿದೆ ಗೊತ್ತಿದ್ರೂ ಸಿಎಂ ಯಾಕೆ ಅನಧಿಕೃತ ಕೆಲಸ ಉದ್ಘಾಟನೆಗೆ ಬಂದಿದ್ರು? ಕಾಂಗ್ರೆಸ್ ಒಂದು ವೇಳೆ ಮಾಡ್ತಿದ್ದರೆ ಜಿಲ್ಲೆಗೆ ಬೆಂಕಿ ಹಾಕ್ತಿದ್ರು ಎಂದ ಅವರು ಇಡೀ ವಿಶ್ವದಲ್ಲಿ ದೇವರ ನಕಲಿ ಪ್ರತಿಮೆ ಸೃಷ್ಟಿಸಿ ಮೋಸ ಯಾರೂ ಮಾಡಲು ಸಾಧ್ಯವಿಲ್ಲ. 14 ಕೋಟಿ ಜನರ ಹಣ ವಂಚನೆ ಆಗಿದೆ. ಇಷ್ಡು ಗಂಭೀರ ವಿಚಾರ ಬಿಟ್ಟು ಏನೇನೋ ಆರೋಪ ಮಾಡ್ತಾರಲ್ಲ ಇದಕ್ಕೆ ಸುನೀಲ್ ಕುಮಾರ್ ಉತ್ತರ ನೀಡಲಿ.

ತರಾತುರಿಯಲ್ಲಿ ಒಂದು ದಿನದಲ್ಲಿ‌ ಫೈಬರ್ ಪ್ರತಿಮೆ ಮಾಡಲು ಸಾಧ್ಯವಾ? ಉದ್ದೇಶ ಪೂರ್ವಕವಾಗಿ ಮಾಡಿರುವಂಥದ್ದು. ಚುನಾವಣೆಗಾಗಿ ಧರ್ಮದ ಹೆಸರಿನಲ್ಲಿ ಜನರ ಭಾವನೆಗ ಧಕ್ಕೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಉನ್ನತ ತನಿಖೆ ಮಾಡುದಾಗಿ ಹೇಳಿದ್ದಾರೆ. ಲೋಕಾಯುಕ್ತಕ್ಕೂ ಹೋರಾಟಗಾರರು ದೂರು ನೀಡಿದಾರೆ. ಇನ್ನು ಪ್ರತಿಮೆ ಪೂರ್ಣ ಮಾಡೋದು ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ್ದು. ಅದು ಮಾಡೇ ಮಾಡ್ತೇವೆ. ಹೊರಾಟಕ್ಕೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತೇನೆ. ನಾನು ಈ ವಿಚಾರ ಇಲ್ಲಿಗೇ ನಿಲ್ಲಿಸಲ್ಲ. ಎಲ್ಲ ಮಠಗಳಿಗೆ ಹೋಗಿ‌ ಈ ಅಧರ್ಮದ ವಿರುದ್ಧ ಬೆಂಬಲ ಕೋರುತ್ತೇನೆ ಮತ್ತು ನ್ಯಾಯ ಸಿಗುವ ವರೆಗೂ ಹೋರಾಟ ಮಾಡುತ್ತೆನೆ ಎಂದರು

ವಿಶ್ವಾಸ್ ದಾಸ್,ಅನಿಲ್ ಪೂಜಾರಿ,ಪ್ರವೀಣ್ ಚಂದ್ರ ಆಳ್ವಾ,ಪ್ರಕಾಶ್ ಸಾಲಿಯಾನ್, ಕಾರ್ಕಳ ಪುರಸಭೆ ಸದಸ್ಯ ಸುಬೋಧ್, ದುರ್ಗಾ ಪ್ರಸಾದ್, ರಾಕೇಶ್ ದೇವಾಡಿಗ ಮತ್ತಿತರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Vishwa News 24

Recent Posts

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

2 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

3 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

3 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

3 days ago

ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ ಕಲಿಯಬೇಕಿಲ್ಲ : ವಿಪಕ್ಷಗಳಿಗೆ ಜಮೀರ್ ಅಹ್ಮದ್ ಖಾನ್‌  ತಿರುಗೇಟು – vishwanews24

ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್‌ ಅಹ್ಮದ್‌ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…

3 days ago

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ – vishwanews24

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…

3 days ago