Featured

ಮಂಗಳೂರು : ನಕಲಿ ಪರಶುರಾಮ ಪ್ರತಿಮೆ :  ಶಾಸಕತ್ವದಿಂದ ಸುನೀಲ್ ಕುಮಾರ್ ಅಮಾನತು ಆಗಬೇಕು : ಮಿಥುನ್ ರೈ – vishwanews24

ಹಿಂದುತ್ವದ ಭಾಷಣ ಬಿಗಿಯುವವರು ಪರಶುರಾಮನ ನಕಲಿ ವಿಗ್ರಹ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ?

ಇಡೀ ಭಾರತಕ್ಕೆ ಕಾರ್ಕಳ ಶಾಸಕರು ಮಾಡಿದ ವಂಚನೆ, ನಂಬಿಕೆ ದ್ರೋಹ..

ಶಾಸಕ ಸುನಿಲ್ ಕುಮಾರ್ ಧರ್ಮದ ಹೆಸರಲ್ಲಿ ರಾಜಕೀಯ  ಮಾಡಿದ್ದಾರೆ..

ಒಂದು ವೇಳೆ ಕಾಂಗ್ರೆಸ್ ಇದನ್ನ ಮಾಡ್ತಿದ್ದರೆ ಜಿಲ್ಲೆಗೆ ಬೆಂಕಿ ಹಾಕ್ತಿದ್ರು..

ಮಂಗಳೂರು: ಕಾರ್ಕಳ ಥೀಮ್ ಪಾರ್ಕಿನ ಪರಶುರಾಮ ಪ್ರತಿಮೆ ನಕಲಿಯಾಗಿದ್ದು ಇದು ಇಡೀ ಭಾರತಕ್ಕೆ ಕಾರ್ಕಳ ಶಾಸಕರು ಮಾಡಿದ ವಂಚನೆ, ನಂಬಿಕೆ ದ್ರೋಹವಾಗಿದೆ ಆದ್ದರಿಂದ ಶಾಸಕತ್ವದಿಂದ ಸುನೀಲ್ ಕುಮಾರ್ ಅಮಾನತು ಆಗಬೇಕು ಮತ್ತು ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಒತ್ತಾಯಿಸಿದ್ದಾರೆ.

ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಿಥುನ್ ರೈ ಪರಶು ಚಿರಂಜೀವಿಯಾಗಿದ್ದು ಇಂದೂ ಕೂಡ ಪರಶು ದೇವರು ಇದ್ದಾರೆ,ಅವರ ಸ್ಮರಣೆ ಮಾಡ್ತೇವೆ. ಇಲ್ಲಿನ ಬಹಳ ದೇವಾಲಯಗಳಿಗೆ ಪರಶುರಾಮನೇ ಅಧಿಪತಿ.ಆದರೆ ಹಿಂದುತ್ವದ ಭಾಷಣ ಮಾಡುವವರು ಪರಶು ವಿಗ್ರಹ ವಿಚಾರದಲ್ಲಿ ಇಷ್ಟು ದೊಡ್ಡ ಮೋಸ ಆಗುವಾಗ ಯಾಕೆ ಮಾತನಾಡುತ್ತಿಲ್ಲ? ಈ ಸಂದರ್ಭದಲೂ ಧ್ವನಿ ಎತ್ತದಿದ್ದರೆ ದೇವರಿಗೆ ಮಾಡುವ ಅವಮಾನವಾಗಿದೆ.ಶಾಸಕ ಸುನಿಲ್ ಕುಮಾರ್ ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ್ದಾರೆ, ಆಗಿನ ಸರ್ಕಾರವೂ ಇದರಲ್ಲಿ ಶಾಮೀಲಾಗಿದೆ ಗೊತ್ತಿದ್ರೂ ಸಿಎಂ ಯಾಕೆ ಅನಧಿಕೃತ ಕೆಲಸ ಉದ್ಘಾಟನೆಗೆ ಬಂದಿದ್ರು? ಕಾಂಗ್ರೆಸ್ ಒಂದು ವೇಳೆ ಮಾಡ್ತಿದ್ದರೆ ಜಿಲ್ಲೆಗೆ ಬೆಂಕಿ ಹಾಕ್ತಿದ್ರು ಎಂದ ಅವರು ಇಡೀ ವಿಶ್ವದಲ್ಲಿ ದೇವರ ನಕಲಿ ಪ್ರತಿಮೆ ಸೃಷ್ಟಿಸಿ ಮೋಸ ಯಾರೂ ಮಾಡಲು ಸಾಧ್ಯವಿಲ್ಲ. 14 ಕೋಟಿ ಜನರ ಹಣ ವಂಚನೆ ಆಗಿದೆ. ಇಷ್ಡು ಗಂಭೀರ ವಿಚಾರ ಬಿಟ್ಟು ಏನೇನೋ ಆರೋಪ ಮಾಡ್ತಾರಲ್ಲ ಇದಕ್ಕೆ ಸುನೀಲ್ ಕುಮಾರ್ ಉತ್ತರ ನೀಡಲಿ.

ತರಾತುರಿಯಲ್ಲಿ ಒಂದು ದಿನದಲ್ಲಿ‌ ಫೈಬರ್ ಪ್ರತಿಮೆ ಮಾಡಲು ಸಾಧ್ಯವಾ? ಉದ್ದೇಶ ಪೂರ್ವಕವಾಗಿ ಮಾಡಿರುವಂಥದ್ದು. ಚುನಾವಣೆಗಾಗಿ ಧರ್ಮದ ಹೆಸರಿನಲ್ಲಿ ಜನರ ಭಾವನೆಗ ಧಕ್ಕೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಉನ್ನತ ತನಿಖೆ ಮಾಡುದಾಗಿ ಹೇಳಿದ್ದಾರೆ. ಲೋಕಾಯುಕ್ತಕ್ಕೂ ಹೋರಾಟಗಾರರು ದೂರು ನೀಡಿದಾರೆ. ಇನ್ನು ಪ್ರತಿಮೆ ಪೂರ್ಣ ಮಾಡೋದು ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ್ದು. ಅದು ಮಾಡೇ ಮಾಡ್ತೇವೆ. ಹೊರಾಟಕ್ಕೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತೇನೆ. ನಾನು ಈ ವಿಚಾರ ಇಲ್ಲಿಗೇ ನಿಲ್ಲಿಸಲ್ಲ. ಎಲ್ಲ ಮಠಗಳಿಗೆ ಹೋಗಿ‌ ಈ ಅಧರ್ಮದ ವಿರುದ್ಧ ಬೆಂಬಲ ಕೋರುತ್ತೇನೆ ಮತ್ತು ನ್ಯಾಯ ಸಿಗುವ ವರೆಗೂ ಹೋರಾಟ ಮಾಡುತ್ತೆನೆ ಎಂದರು

ವಿಶ್ವಾಸ್ ದಾಸ್,ಅನಿಲ್ ಪೂಜಾರಿ,ಪ್ರವೀಣ್ ಚಂದ್ರ ಆಳ್ವಾ,ಪ್ರಕಾಶ್ ಸಾಲಿಯಾನ್, ಕಾರ್ಕಳ ಪುರಸಭೆ ಸದಸ್ಯ ಸುಬೋಧ್, ದುರ್ಗಾ ಪ್ರಸಾದ್, ರಾಕೇಶ್ ದೇವಾಡಿಗ ಮತ್ತಿತರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

16 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

17 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

17 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

17 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

17 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

17 hours ago