ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಅಂದ್ರೇ ಸದಾ ಒಂದಿಲ್ಲೊಂದು ಕೋಮುಗಲಭೆಗಳು ಸಾಮಾನ್ಯ. ಆಗಾಗ ಕೋಮುಗಳ ಗಲಭೆಗಳು ನಡೆಯುತ್ತಲೇ ಇರ್ತಾವೆ. ಈ ನಡುವೆಯೂ ಸ್ಪೀಕರ್ ಯು.ಟಿ ಖಾದರ್ ಮಾತ್ರ ಧಾರ್ಮಿಕ ಸಾಮರಸ್ಯ ಮೆರೆದಿದ್ದಾರೆ. ಅದೇ ನಾಗರಾಧನೆಗೆ ಸ್ವಂತ ಜಮೀನು ದಾನ ಮಾಡಿದ್ದಾರೆ.
ಸ್ಪೀಕರ್ ಯು.ಟಿ ಖಾದರ್ ಅವರು ತಮ್ಮ ಪಿತ್ರಾರ್ಜಿತ ಸೊತ್ತಾಗಿ ಬಂದಿದ್ದಂತ ಜಾಗದಲ್ಲಿ ಹಿಂದೂಗಳು ನಾಗರಕಟ್ಟೆಯನ್ನು ನಿರ್ಮಿಸಿ, ನಾಗಾರಾಧನೆ ಮಾಡಿಕೊಂಡು ಬರ್ತಾ ಇದ್ದರು. ಅಂತಹ ನಾಗಾರಾಧನೆ ಮಾಡುತ್ತಿದ್ದಂತ ಜಾಗವನ್ನೇ ದಾನ ಮಾಡಿ, ದೇವಸ್ಥಾನಕ್ಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಎಂಬಲ್ಲಿ ಯು.ಟಿ ಖಾದರ್ ಅವರು ಜಮೀನನ್ನೇ ದಾನ ಮಾಡಿರೋದಾಗಿದೆ. ಹಿಂದಿನ ಕಾಲದಿಂದಲೂ ಆ ಜಮೀನಿನಲ್ಲಿ ನಾಗಾರಾಧನೆ ನಡೆಯುತ್ತಿತ್ತು. ಹಿಂದೂಗಳ ದಳವಾಯಿ ಕುಟುಂಬಕ್ಕೆ ಸೇರಿದ್ದ ಜಾಗವು, ಭೂ ಮಸೂದೆ ಕಾನೂನಿನ ನಂತ್ರ ಖಾದರ್ ಕುಟುಂಬದ ಹಿರಿಯರಿಗೆ ಬಂದಿತ್ತು.
ಮುಸ್ಲೀಂ ಸಮುದಾಯದಕ್ಕೆ ಜಮೀನು ಹೋದ ನಂತ್ರ, ಮೂಲ ನಾಗಾರಾಧನೆಯ ಸ್ಥಳದಲ್ಲಿ ಪೂಜೆ ಮಾಡದೇ, ಬೇರೆಡೆ ನಾಗಾರಾಧನೆಯಲ್ಲಿ ತೊಡಗಿದ್ದರು. ಆದ್ರೇ ದಳವಾಯಿ ಕುಟುಂಬಕ್ಕೆ ಒಂದಿಲ್ಲೊಂದು ಸಮಸ್ಯೆಗಳು ಕಾಡತೊಡಗಿದ್ದವು. ಆಗ ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಮೂಲ ಜಾಗದಲ್ಲೇ ನಾಗಾರಾಧನೆ ಮಾಡುವಂತೆ ಉತ್ತರ ಸಿಕ್ಕಿತ್ತು.
ಈ ಬಳಿಕ ಯು.ಟಿ ಖಾದರ್ ಅವರನ್ನು ಭೇಟಿಯಾಗಿದ್ದಂತ ದಳವಾಯಿ ಕುಟುಂಬ, ಮೂಲ ನಾಗಾರಾಧನೆ ಬಿಟ್ಟನಂತ್ರ ತಮಗೆ ಆದಂತ ಸಮಸ್ಯೆ ವಿವರಿಸಿದ್ದರು. ಅಲ್ಲದೇ ನಾಗರಕಟ್ಟೆ ಇರುವಂತ 10 ಸೆಂಟ್ಸ್ ಸ್ಥಳವನ್ನು ಖರೀದಿಗಾದರೂ ಕೊಡಿ. ನಾಗಾರಾಧನೆ ಮುಂದುವರೆಸಿಕೊಂಡು ಹೋಗಲಿದ್ದೇವೆ ಎಂಬುದಾಗಿ ಮನವಿ ಮಾಡಿದ್ದಾರೆ.
ಅವರ ಮನವಿಗೆ ಕೂಡಲೇ ಪ್ರತಿ ಸ್ಪಂದಿಸಿದಂತ ಸ್ಪೀಕರ್ ಯು.ಟಿ ಖಾದರ್ ಅವರು 10 ಸೆಂಟ್ಸ್ ಕೇಳಿದ ಜಮೀನಿನ ಜೊತೆಗೆ 10 ಸೆಂಟ್ಸ್ ಜಮೀನು ಸೇರಿಸಿ ಒಟ್ಟು 20 ಸೆಂಟ್ಸ್ ನಾಗಾರಾಧನೆಯ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ದಾನವಾಗಿ ನೀಡಿದ್ದಾರೆ. ಈ ಮೂಲಕ ಮುಸ್ಲೀಂ ಸಮುದಾಯಕ್ಕೆ ಸೇರಿದ 12 ಎಕರೆ ಜಮೀನಿನ ಮಧ್ಯದಲ್ಲೇ ನಾಗಾರಾಧನೆ ನಡೆಸೋದಕ್ಕೆ ಜಮೀನು ದಾನ ನೀಡಿ, ಧಾರ್ಮಿಕ ಸಾಮರಸ್ಯತೆಯನ್ನು ಸ್ಪೀಕರ್ ಯು.ಟಿ ಖಾದರ್ ಮೆರೆದಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…