ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಅಂದ್ರೇ ಸದಾ ಒಂದಿಲ್ಲೊಂದು ಕೋಮುಗಲಭೆಗಳು ಸಾಮಾನ್ಯ. ಆಗಾಗ ಕೋಮುಗಳ ಗಲಭೆಗಳು ನಡೆಯುತ್ತಲೇ ಇರ್ತಾವೆ. ಈ ನಡುವೆಯೂ ಸ್ಪೀಕರ್ ಯು.ಟಿ ಖಾದರ್ ಮಾತ್ರ ಧಾರ್ಮಿಕ ಸಾಮರಸ್ಯ ಮೆರೆದಿದ್ದಾರೆ. ಅದೇ ನಾಗರಾಧನೆಗೆ ಸ್ವಂತ ಜಮೀನು ದಾನ ಮಾಡಿದ್ದಾರೆ.
ಸ್ಪೀಕರ್ ಯು.ಟಿ ಖಾದರ್ ಅವರು ತಮ್ಮ ಪಿತ್ರಾರ್ಜಿತ ಸೊತ್ತಾಗಿ ಬಂದಿದ್ದಂತ ಜಾಗದಲ್ಲಿ ಹಿಂದೂಗಳು ನಾಗರಕಟ್ಟೆಯನ್ನು ನಿರ್ಮಿಸಿ, ನಾಗಾರಾಧನೆ ಮಾಡಿಕೊಂಡು ಬರ್ತಾ ಇದ್ದರು. ಅಂತಹ ನಾಗಾರಾಧನೆ ಮಾಡುತ್ತಿದ್ದಂತ ಜಾಗವನ್ನೇ ದಾನ ಮಾಡಿ, ದೇವಸ್ಥಾನಕ್ಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಎಂಬಲ್ಲಿ ಯು.ಟಿ ಖಾದರ್ ಅವರು ಜಮೀನನ್ನೇ ದಾನ ಮಾಡಿರೋದಾಗಿದೆ. ಹಿಂದಿನ ಕಾಲದಿಂದಲೂ ಆ ಜಮೀನಿನಲ್ಲಿ ನಾಗಾರಾಧನೆ ನಡೆಯುತ್ತಿತ್ತು. ಹಿಂದೂಗಳ ದಳವಾಯಿ ಕುಟುಂಬಕ್ಕೆ ಸೇರಿದ್ದ ಜಾಗವು, ಭೂ ಮಸೂದೆ ಕಾನೂನಿನ ನಂತ್ರ ಖಾದರ್ ಕುಟುಂಬದ ಹಿರಿಯರಿಗೆ ಬಂದಿತ್ತು.
ಮುಸ್ಲೀಂ ಸಮುದಾಯದಕ್ಕೆ ಜಮೀನು ಹೋದ ನಂತ್ರ, ಮೂಲ ನಾಗಾರಾಧನೆಯ ಸ್ಥಳದಲ್ಲಿ ಪೂಜೆ ಮಾಡದೇ, ಬೇರೆಡೆ ನಾಗಾರಾಧನೆಯಲ್ಲಿ ತೊಡಗಿದ್ದರು. ಆದ್ರೇ ದಳವಾಯಿ ಕುಟುಂಬಕ್ಕೆ ಒಂದಿಲ್ಲೊಂದು ಸಮಸ್ಯೆಗಳು ಕಾಡತೊಡಗಿದ್ದವು. ಆಗ ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಮೂಲ ಜಾಗದಲ್ಲೇ ನಾಗಾರಾಧನೆ ಮಾಡುವಂತೆ ಉತ್ತರ ಸಿಕ್ಕಿತ್ತು.
ಈ ಬಳಿಕ ಯು.ಟಿ ಖಾದರ್ ಅವರನ್ನು ಭೇಟಿಯಾಗಿದ್ದಂತ ದಳವಾಯಿ ಕುಟುಂಬ, ಮೂಲ ನಾಗಾರಾಧನೆ ಬಿಟ್ಟನಂತ್ರ ತಮಗೆ ಆದಂತ ಸಮಸ್ಯೆ ವಿವರಿಸಿದ್ದರು. ಅಲ್ಲದೇ ನಾಗರಕಟ್ಟೆ ಇರುವಂತ 10 ಸೆಂಟ್ಸ್ ಸ್ಥಳವನ್ನು ಖರೀದಿಗಾದರೂ ಕೊಡಿ. ನಾಗಾರಾಧನೆ ಮುಂದುವರೆಸಿಕೊಂಡು ಹೋಗಲಿದ್ದೇವೆ ಎಂಬುದಾಗಿ ಮನವಿ ಮಾಡಿದ್ದಾರೆ.
ಅವರ ಮನವಿಗೆ ಕೂಡಲೇ ಪ್ರತಿ ಸ್ಪಂದಿಸಿದಂತ ಸ್ಪೀಕರ್ ಯು.ಟಿ ಖಾದರ್ ಅವರು 10 ಸೆಂಟ್ಸ್ ಕೇಳಿದ ಜಮೀನಿನ ಜೊತೆಗೆ 10 ಸೆಂಟ್ಸ್ ಜಮೀನು ಸೇರಿಸಿ ಒಟ್ಟು 20 ಸೆಂಟ್ಸ್ ನಾಗಾರಾಧನೆಯ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ದಾನವಾಗಿ ನೀಡಿದ್ದಾರೆ. ಈ ಮೂಲಕ ಮುಸ್ಲೀಂ ಸಮುದಾಯಕ್ಕೆ ಸೇರಿದ 12 ಎಕರೆ ಜಮೀನಿನ ಮಧ್ಯದಲ್ಲೇ ನಾಗಾರಾಧನೆ ನಡೆಸೋದಕ್ಕೆ ಜಮೀನು ದಾನ ನೀಡಿ, ಧಾರ್ಮಿಕ ಸಾಮರಸ್ಯತೆಯನ್ನು ಸ್ಪೀಕರ್ ಯು.ಟಿ ಖಾದರ್ ಮೆರೆದಿದ್ದಾರೆ.
ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಅಗ್ನಿ ಅವಘಡ : ಶಾಕ್ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…