ಮಂಗಳೂರು : ನಾಡದೋಣಿ ಮೀನುಗಾರರಿಗೆ ಔಟ್ಬೋರ್ಡ್ ಎಂಜಿನ್ ಖರೀದಿಗೆ ಸಿಗುತ್ತಿದ್ದ 60 ಸಾವಿರ ರೂ. ಸಹಾಯಧನ ಕೈ ತಪ್ಪಿದೆ.ನಾಡದೋಣಿ ಮೀನುಗಾರರಿಗೆ ಹೊಸ ಎಂಜಿನ್ ಖರೀದಿಸಲು ಸರಕಾರದಿಂದ ಸಿಗುತ್ತಿದ್ದ ಸಹಾಯ ಧನ 2 ವರ್ಷದಿಂದ ಸಿಗುತ್ತಿಲ್ಲ.
ಸಹಾಯಧನ ಮುಂದುವರಿಸಬೇಕೆಂಬ ಮೀನು ಗಾರರ ಬೇಡಿಕೆ ಇನ್ನೂ ಈಡೇರಿಲ್ಲ. ಬಜೆಟ್ ಪೂರ್ವ ಸಭೆಯಲ್ಲಿ ಉಲ್ಲೇ ಖೀಸಿದ್ದು, ಇಲಾ ಖೆಯ ವಿವಿಧ ಸಭೆಗಳಲ್ಲಿ ಚರ್ಚಿಸಿ ದರೂ ಉಪಯೋಗವಾಗಿಲ್ಲ. ದ.ಕ. ಜಿಲ್ಲೆಯಲ್ಲಿ 2,000 ಕ್ಕೂ ಹೆಚ್ಚು ಹಾಗೂ ಉಡುಪಿ ಜಿಲ್ಲೆಯಲ್ಲಿ 3,000ಕ್ಕೂ ಹೆಚ್ಚು ನಾಡ ದೋಣಿಗಳಿವೆ.
ಉಡುಪಿ : ತಾಯಿ ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳ ಬಾಕಿ ವೇತನ 3.68 ಕೋಟಿ ರೂ. ಬಿಡುಗಡೆ – Vishwanews24
ಕೈ ಬಿಟ್ಟದ್ದು ಯಾಕೆ?
ಮೀನುಗಾರಿಕೆ ಇಲಾಖೆಯ ಅಧಿಕಾ ರಿಗಳ ಪ್ರಕಾರ “ಕೇಂದ್ರ ಪುರಸ್ಕೃತ ನೀಲಿ ಕ್ರಾಂತಿ ಯೋಜನೆಯು 2019- 20ಕ್ಕೆ ಮುಗಿದಿದೆ. 2020- 21ನೇ ಸಾಲಿನಿಂದ ಕೇಂದ್ರದ “ಪಿಎಂಎಂಎಸ್ವೈ’ ಯೋಜನೆ ಜಾರಿಗೆ ಬಂದಿದ್ದು, ಅದರಲ್ಲಿ ನಾಡದೋಣಿ ಔಟ್ಬೋ ರ್ಡ್ ಎಂಜಿನ್ಗೆ ಸಹಾಯಧನ ನೀಡಲು ಅವಕಾಶವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಕಾಯುತ್ತಿವೆ ಅರ್ಜಿಗಳು
ನಾಡದೋಣಿ ಔಟ್ಬೋರ್ಡ್ ಎಂಜಿನ್ ಖರೀದಿಗೆ 1.40 ಲಕ್ಷ ರೂ. ತಗಲುತ್ತದೆ. ಅದಕ್ಕೆ 60 ಸಾವಿರ ರೂ. ಸಹಾಯ ಧನ ಸಿಗುತ್ತಿತ್ತು. ಸುದೀರ್ಘ ವರ್ಷ ದಿಂದ ಜಾರಿಯಲ್ಲಿದ್ದ ಯೋಜನೆ ಈಗ ಇಲ್ಲ. ಆದರೆ ಮೀನುಗಾರರು ನಿರೀಕ್ಷೆಯಿಂದ ಅರ್ಜಿ ಹಾಕುತ್ತಲೇ ಇದ್ದಾರೆ. ಸಹಾಯ ಧನ ಮಾತ್ರ ಸಿಗುತ್ತಿಲ್ಲ’ ಎನ್ನುತ್ತಾರೆ ಕರಾವಳಿ ನಾಡದೋಣಿ ಮೀನುಗಾರರ ಸಂಘ, ನವ ಮಂಗಳೂರು ವಲಯ ಅಧ್ಯಕ್ಷ ವಾಸುದೇವ ಬಿ. ಕರ್ಕೇರ.
ಕುಂದಾಪುರ : ಕಾಲುವೆಯ ಹೂಳಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ದನದ ರಕ್ಷಣೆ – Vishwanews24
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…