ಮಂಗಳೂರು: ಪ್ರೀತಿಸಿ ಮದುವೆಯಾದ ಬಳಿಕ ಪತಿ ತನಗೆ ಜೀವ ಬೆದರಿಕೆ ಹಾಕಿ ಹಣ, ಒಡವೆ ಇತ್ಯಾದಿ ಪಡೆದು, ವಿದೇಶಕ್ಕೆ ಹೋಗಿ ಇನ್ನೊಂದು ಯುವತಿಯನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗಲು ಸಿದ್ಧತೆ ನಡೆಸುವ ಮೂಲಕ ವಂಚಿಸಿದ್ದಾನೆ. ಆತನ ಮನೆಯವರೂ ದೈಹಿಕ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೆರ್ಮುದೆ ನಿವಾಸಿಗಳಾದ ಪತಿ ಮನೀಷ್, ಅತ್ತೆ ಕುಮಾರಿ, ಮೈದುನ ಕಾರ್ತಿಕ್ ಮತ್ತು ಆತನ ಪತ್ನಿ ದೀಕ್ಷಾ ಎಂಬವರ ವಿರುದ್ಧ ಕಾವೂರು ನಿವಾಸಿ ಪ್ರೀತಿ ದೂರು ನೀಡಿದ್ದಾರೆ.
2017ರಲ್ಲಿ ಪೆರ್ಮುದೆ ನಿವಾಸಿ ಮನೀಷ್ ಪರಿಚಯವಾಗಿದೆ. ಆತ ಪ್ರೀತಿಸುವುದಾಗಿ ನಂಬಿಸಿ, ಮನೆಯವರೊಡನೆ ಒಳ್ಳೆಯವನಾಗಿ ವರ್ತಿಸಿದ್ದಾನೆ. 2021ರ ನ.21ರಂದು ಬಂಟ್ವಾಳದಲ್ಲಿ ಆತನನ್ನು ಮದುವೆಯಾಗಿದ್ದೇನೆ. ಮದುವೆಯ ಎಲ್ಲ ಖರ್ಚು ವೆಚ್ಚವನ್ನು ನನ್ನ ಮನೆಯವರೇ ಭರಿಸಿದ್ದಾರೆ.
ಇದನ್ನೂ ಓದಿ:
ಬಳಿಕ ಆತನ ಮನೆಯಾದ ಪೆರ್ಮುದೆಯಲ್ಲಿ ವಾಸವಾಗಿದ್ದೆ. ಅಲ್ಲಿ ಮನಿಷ್, ಅತ್ತೆ, ಮೈದುನ, ಆತನ ಹೆಂಡತಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದಾರೆ. ತವರು ಮನೆಯಿಂದ ಕೊಟ್ಟಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಮನೆಯ ಖರ್ಚಿಗೂ ಹಣ ಪಡೆದಿದ್ದಾರೆ. ಈ ಬಗ್ಗೆ ಆಕ್ಷೇಪಿಸಿದರೆ ಹೊಡೆದು, ಬೈಯುತ್ತಿದ್ದರು. ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಮದುವೆಯ ಒಂದು ವರ್ಷದ ಬಳಿಕ ಮನೀಷ್ ವಿದೇಶಕ್ಕೆ ಹೋಗಿದ್ದು, 2024ರ ಜೂನ್ ನಲ್ಲಿ ವಾಪಾಸು ಬಂದಾಗ ಮತ್ತೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ. ಆಗಸ್ಟ್ ನಲ್ಲಿ ವಿದೇಶಕ್ಕೆ ಹೋದ ಬಳಿಕ ಅಲ್ಲಿ ಸ್ವಾತಿ ಎಂಬಾಕೆಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕೆಟ್ಟದಾಗಿ ಬೈದು, ವಿಚ್ಛೇದನ ಕೊಟ್ಟು ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿ ಸಂಪರ್ಕ ಕಡಿತಗೊಳಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:
ಉಡುಪಿ : ಮೇ 5 ರಂದು ನೇರ ಸಂದರ್ಶನ ಉಡುಪಿ : ಉದ್ಯೋಗ ಆಕಾಂಕ್ಷಿಗಳಿಗೆ ಮೇ 5 ರಂದು ಬೆಳಗ್ಗೆ…
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ ಉಡುಪಿ : ಮಾಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ…
ಮೋದಿ ದುರಾಡಳಿತದ ವಿರುದ್ಧ ಮಾತಾಡಲು ಬಿಜೆಪಿಗರಿಗೆ ಸವಾಲು.. ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು.. ವಾಣಿಜ್ಯ ಸಿಲಿಂಡರ್ ದರ…
ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು ಕಾರವಾರ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ…
ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಪರಾರಿ: ಮಕ್ಕಳಿಬ್ಬರನ್ನು ಕೊಲೆಗೈದು ನೇಣಿಗೆ ಶರಣಾದ ಪತಿ ಕುಣಿಗಲ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ…
NDMAಯಿಂದ ಬರುತ್ತೆ ತುರ್ತು ಎಚ್ಚರಿಕೆ ಸಂದೇಶ.. ನಿಮ್ಮ ಮೊಬೈಲ್ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. ನಿಮ್ಮ ಮೊಬೈಲ್ ಫೋನ್…