Featured

ಮಂಗಳೂರು:  ಪ್ರೀತಿಸಿ ಮದುವೆಯಾದ ಬಳಿಕ ಜೀವ ಬೆದರಿಕೆ ; ವಿದೇಶಕ್ಕೆ ಹೋಗಿ ಇನ್ನೊಂದು ಮದುವೆಗೆ ಸಿದ್ಧತೆ ; ಪತ್ನಿಯಿಂದ ದೂರು ದಾಖಲು – vishwanews24

ಮಂಗಳೂರು:  ಪ್ರೀತಿಸಿ ಮದುವೆಯಾದ ಬಳಿಕ ಜೀವ ಬೆದರಿಕೆ ; ವಿದೇಶಕ್ಕೆ ಹೋಗಿ ಇನ್ನೊಂದು ಮದುವೆಗೆ ಸಿದ್ಧತೆ ; ಪತ್ನಿಯಿಂದ ದೂರು ದಾಖಲು

ಮಂಗಳೂರು: ಪ್ರೀತಿಸಿ ಮದುವೆಯಾದ ಬಳಿಕ ಪತಿ ತನಗೆ ಜೀವ ಬೆದರಿಕೆ ಹಾಕಿ ಹಣ, ಒಡವೆ ಇತ್ಯಾದಿ ಪಡೆದು, ವಿದೇಶಕ್ಕೆ ಹೋಗಿ ಇನ್ನೊಂದು ಯುವತಿಯನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗಲು ಸಿದ್ಧತೆ ನಡೆಸುವ ಮೂಲಕ ವಂಚಿಸಿದ್ದಾನೆ. ಆತನ ಮನೆಯವರೂ ದೈಹಿಕ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೆರ್ಮುದೆ ನಿವಾಸಿಗಳಾದ ಪತಿ ಮನೀಷ್, ಅತ್ತೆ ಕುಮಾರಿ, ಮೈದುನ ಕಾರ್ತಿಕ್ ಮತ್ತು ಆತನ ಪತ್ನಿ ದೀಕ್ಷಾ ಎಂಬವರ ವಿರುದ್ಧ ಕಾವೂರು ನಿವಾಸಿ ಪ್ರೀತಿ ದೂರು ನೀಡಿದ್ದಾರೆ.

2017ರಲ್ಲಿ ಪೆರ್ಮುದೆ ನಿವಾಸಿ ಮನೀಷ್ ಪರಿಚಯವಾಗಿದೆ. ಆತ ಪ್ರೀತಿಸುವುದಾಗಿ ನಂಬಿಸಿ, ಮನೆಯವರೊಡನೆ ಒಳ್ಳೆಯವನಾಗಿ ವರ್ತಿಸಿದ್ದಾನೆ. 2021ರ ನ.21ರಂದು ಬಂಟ್ವಾಳದಲ್ಲಿ ಆತನನ್ನು ಮದುವೆಯಾಗಿದ್ದೇನೆ. ಮದುವೆಯ ಎಲ್ಲ ಖರ್ಚು ವೆಚ್ಚವನ್ನು ನನ್ನ ಮನೆಯವರೇ ಭರಿಸಿದ್ದಾರೆ.

ಇದನ್ನೂ ಓದಿ:

 

ಬಳಿಕ ಆತನ ಮನೆಯಾದ ಪೆರ್ಮುದೆಯಲ್ಲಿ ವಾಸವಾಗಿದ್ದೆ. ಅಲ್ಲಿ ಮನಿಷ್, ಅತ್ತೆ, ಮೈದುನ, ಆತನ ಹೆಂಡತಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದಾರೆ. ತವರು ಮನೆಯಿಂದ ಕೊಟ್ಟಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಮನೆಯ ಖರ್ಚಿಗೂ ಹಣ ಪಡೆದಿದ್ದಾರೆ. ಈ ಬಗ್ಗೆ ಆಕ್ಷೇಪಿಸಿದರೆ ಹೊಡೆದು, ಬೈಯುತ್ತಿದ್ದರು. ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಮದುವೆಯ ಒಂದು ವರ್ಷದ ಬಳಿಕ ಮನೀಷ್ ವಿದೇಶಕ್ಕೆ ಹೋಗಿದ್ದು, 2024ರ ಜೂನ್ ನಲ್ಲಿ ವಾಪಾಸು ಬಂದಾಗ ಮತ್ತೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ. ಆಗಸ್ಟ್ ನಲ್ಲಿ ವಿದೇಶಕ್ಕೆ ಹೋದ ಬಳಿಕ ಅಲ್ಲಿ ಸ್ವಾತಿ ಎಂಬಾಕೆಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕೆಟ್ಟದಾಗಿ ಬೈದು, ವಿಚ್ಛೇದನ ಕೊಟ್ಟು ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿ ಸಂಪರ್ಕ ಕಡಿತಗೊಳಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:

Vishwa News 24

Recent Posts

ಉಡುಪಿ: ನಿರೀಕ್ಷಿತ ಮುಂಗಾರು ಮಳೆಯಿಲ್ಲದೆ ಕಡಲಿಗೆ ಇಳಿಯದ ನಾಡದೋಣಿಗಳು – vishwanews24

ಉಡುಪಿ: ನಿರೀಕ್ಷಿತ ಮುಂಗಾರು ಮಳೆಯಿಲ್ಲದೆ ಕಡಲಿಗೆ ಇಳಿಯದ ನಾಡದೋಣಿಗಳು  ಉಡುಪಿ: ಕರಾವಳಿಯಲ್ಲಿ ನಿರೀಕ್ಷಿತ ಮುಂಗಾರು ಮಳೆಯಾಗದ ಕಾರಣ ಈ ಋತುವಿನಲ್ಲಿ…

11 minutes ago

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

18 hours ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

19 hours ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

19 hours ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

22 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

22 hours ago