Featured

ಮಂಗಳೂರು : ಪ್ಲಿಪ್‌ಕಾರ್ಟ್ ರಿಕ್ರೂಟ್‌ಮೆಂಟ್ ಪಾರ್ಟ್ ಟೈಂ ಜಾಬ್ : ಲಿಂಕ್ ಕಳುಹಿಸಿ 1.34ಲ.ರೂ. ವಂಚನೆ – ದೂರು ದಾಖಲು – Vishwanews24

ಮಂಗಳೂರು : ಪ್ಲಿಪ್‌ಕಾರ್ಟ್ ರಿಕ್ರೂಟ್‌ಮೆಂಟ್ ಪಾರ್ಟ್ ಟೈಂ ಜಾಬ್ : ಲಿಂಕ್ ಕಳುಹಿಸಿ 1.34ಲ.ರೂ. ವಂಚನೆ – ದೂರು ದಾಖಲು – Vishwanews24

ಮಂಗಳೂರು: ವ್ಯಕ್ತಿಯೋರ್ವರಿಗೆ ‘ಪ್ಲಿಪ್‌ಕಾರ್ಟ್ ರಿಕ್ರೂಟ್‌ಮೆಂಟ್ ಪಾರ್ಟ್ ಟೈಂ ಜಾಬ್’ ಎಂಬ ಹೆಸರಿನ ವೆಬ್‌ಸೈಟ್ ಲಿಂಕ್ ಕಳುಹಿಸಿದ ಅಪರಿಚಿತನೊಬ್ಬ ಆನ್‌ಲೈನ್ ಮೂಲಕ 1.34 ಲ.ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.19ರಂದು ದೂರುದಾರ ವ್ಯಕಿಗೆ 8147067812 ಸಂಖ್ಯೆಯಿಂದ ವಾಟ್ಸ್‌ಆ್ಯಪ್‌ ಮೂಲಕ ಮೆಸೇಜ್ ಬಂದಿತ್ತು. ಅದರಲ್ಲಿ ಪ್ಲಿಫ್‌ಕಾರ್ಟ್ ಪಾರ್ಟ್ ಟೈಂ ಜಾಬ್‌ಗಾಗಿ ಲಿಂಕ್‌ನ್ನು ತೆರೆಯುವಂತೆ ತಿಳಿಸಲಾಗಿತ್ತು. ದೂರುದಾರ ವ್ಯಕ್ತಿಯು ಲಿಂಕ್ ತೆರೆದು ಪ್ಲಿಫ್‌ಕಾರ್ಟ್ ಖಾತೆಯಲ್ಲಿ ನೋಂದಣಿ ಮಾಡಿಕೊಂಡರು. ಆವಾಗ ಅವರ ಪ್ಲಿಪ್‌ಕಾರ್ಟ್ ಖಾತೆಗೆ 100 ರೂ. ಜಮೆಯಾಯಿತು. ಅನಂತರ ವೆಬ್‌ಸೈಟ್‌ನವರು “200 ರೂ.ಗಳನ್ನು ಪೋನ್ ಪೇ ಮೂಲಕ ರೀಚಾರ್ಜ್ ಮಾಡಿದರೆ ಹಣ ಹೇಗೆ ಮಾಡುವುದು ಎಂಬುದಾಗಿ ಹೇಳಿಕೊಡಲಾಗುವುದು” ಎಂದು ಸಂದೇಶ ಕಳುಹಿಸಿದರು. ಅದನ್ನು ನಂಬಿದ ವ್ಯಕ್ತಿಯು 200 ರೂ.ಗಳನ್ನು ಜಮೆ ಮಾಡಿದರು.

ಇದರೊಂದಿಗೆ ಪ್ಲಿಪ್‌ಕಾರ್ಟ್‌ನವರು ಕೊಟ್ಟ ಟಾಸ್ಕ್‌ನ್ನು ಪೂರ್ಣಗೊಳಿಸಿದರು. ಆವಾಗ ವ್ಯಕ್ತಿಯ ಪ್ಲಿಪ್‌ಕಾರ್ಟ್ ಖಾತೆಗೆ 350 ರೂ. ಜಮೆ ಆಯಿತು. ಮತ್ತೆ ಹಣ ಪಡೆಯಬೇಕಾದರೆ ಮತ್ತೆ 500 ರೂ. ರೀಚಾರ್ಜ್ ಮಾಡಲು ವೆಬ್‌ಸೈಟ್‌ನವರು ಸೂಚಿಸಿದರು. ಅದರಂತೆ ವ್ಯಕ್ತಿಯು ಮತ್ತೆ 500 ರೂ., ಬಳಿಕ 808 ರೂ., 2,012 ರೂ. ಹೀಗೆ ಒಟ್ಟು 1,34,554 ರೂ.ಗಳನ್ನು ವರ್ಗಾವಣೆ ಮಾಡಿದರು. ಎಲ್ಲ ಟಾಸ್ಕ್ ಪೂರ್ಣಗೊಳಿಸಿದರು.

ಆಗ ದೂರುದಾರರ ಪ್ಲಿಪ್‌ಕಾರ್ಟ್ ಖಾತೆಗೆ 4,13,992 ಹಣ ಜಮೆಯಾಗಿದೆ ಎಂದು ತೋರಿಸಲಾಯಿತು. ಅಲ್ಲದೆ ಆ ಹಣ ವಿದ್‌ ಡ್ರಾ ಮಾಡಬೇಕಾದರೆ 82,798 ರೂ. ತೆರಿಗೆ ಕಟ್ಟಬೇಕು ಎಂದು ತಿಳಿಸಲಾಯಿತು. ಆ ಸಂದರ್ಭ ದೂರುದಾರರಿಗೆ ತಾವು ಮೋಸ ಹೋಗಿರುವುದು ಅರಿವಿಗೆ ಬಂದು ದೂರು ನೀಡಿದ್ದಾರೆ.

 

Vishwa News 24

Recent Posts

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ – vishwanews24

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು…

17 seconds ago

ಉಡುಪಿ : ಜೂ.12 ರಂದು ನೇರ ಸಂದರ್ಶನ – vishwanews24

ಉಡುಪಿ : ಜೂ.12 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್…

7 minutes ago

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ಭೇಟಿ – vishwanews24

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ವಿಜಯ್ ಭೇಟಿ ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್…

13 minutes ago

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ – vishwanews24

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ ಉಡುಪಿ : ರಾಜ್ಯದ ಖಾಸಗಿ ಬಸ್…

36 minutes ago

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ – vishwanews24

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…

2 hours ago

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ – vishwanews24

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…

2 hours ago