ಮಂಗಳೂರು: ‘ಈ ಕಟೀಲ್ ಇದ್ದಾರಲ್ಲ ಅವರು ಜೋಕರ್ ಇದ್ದ ಹಾಗೆ. ಅವರು ಬಹಳ ಬಾಲಿಶವಾಗಿ, ಬೇಜವಬ್ದಾರಿಯಿಂದ ಮಾತಾಡ್ತಾರೆ. ಭಾರತೀಯ ಜನತಾ ಪಾರ್ಟಿಯಲ್ಲಿ ಅವರು ವಿದೂಷಕ ಇದ್ದ ಹಾಗೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮಂಗಳೂರು ಹೊರವಲಯದ ಹರೇಕಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ಅವರು ಕುದ್ರೋಳಿ ದೇವಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ನಾನು ಮುಖ್ಯಮಂತ್ರಿಗೆ ನಾಯಿಮರಿ ಅಂತ ಹೇಳಿಲ್ಲ. ಧೈರ್ಯವಿರಬೇಕು. ಧೈರ್ಯದಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತನಾಡಬೇಕು.
ಅಲ್ಲಿಂದ ಅನುದಾನ ಬರೋದು ಕಡಿಮೆ ಆಗಿದೆ. ನಾಯಿಮರಿ ಥರ ಇರಬೇಡಿ ಅಂತ ಹೇಳಿದಷ್ಟೇ. ನಮಗೆ ಟಗರು, ಹುಲಿಯ ಅಂತಾರೆ ಹಾಗಂದ ಮಾತ್ರಕ್ಕೆ ನಾನು ಟಗರು ಆದ್ನಾ…?
ಯಡಿಯೂರಪ್ಪನವರನ್ನು ರಾಜಾಹುಲಿ ಅಂತಾರೆ. ಅದೂ ಅವರ ಪಕ್ಷದವರೇ ಕರೆಯೋದು. ಹಾಗಂದ ಮಾತ್ರಕ್ಕೆ ಯಡಿಯೂರಪ್ಪ ಹುಲಿನಾ…? ಇವರ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದೆ ಏನೂ ನಡೆಯೋದಿಲ್ಲ. ಎಲ್ಲದರಲ್ಲೂ ಲಂಚ ಲಂಚ’ ಎಂದು ಹೇಳಿದರು.
ಮತ್ತೆ ಮಾಧ್ಯಮದವರು ನಳಿನ್ ಕುಮಾರ್ ಕಟೀಲ್ ಬಗ್ಗೆ ಪ್ರಶ್ನೆ ಮಾಡಲು ಹೋದಾಗ ‘ಐ ಡು ನಾಟ್ ರಿಪ್ಲೈ ಟು ಮಿಸ್ಟರ್ ಕಟೀಲ್. ಬಿಕಾಸ್ ಹಿ ಇಸ್ ಜೋಕರ್ ಆಫ್ ಬಿಜೆಪಿ ಪಾರ್ಟಿ’ ಎಂದು ನುಡಿದಿದ್ದಾರೆ.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…