Featured

ಮಂಗಳೂರು : ರಾಹುಲ್ ಗಾಂಧಿ ಅವರು ವ್ಯಕ್ತಿ ಅಲ್ಲ, ಒಂದು ಶಕ್ತಿ : ಯುಟಿ ಖಾದರ್‌ – Vishwanews24

ಅವರ ಕಠಿಣ ಶ್ರಮ, ಸಂವಿಧಾನದ ಪ್ರೀತಿ, ತಿಳುವಳಿಕೆ, ಜ್ಞಾನ ನೋಡಿ ಬಿಜೆಪಿಗೆ ಭಯ ಶುರುವಾಗಿದೆ..

ಬಿಜೆಪಿ ಸರ್ಕಾರದಲ್ಲಿ ಯಾರೂ ಕೂಡಾ ನೆಮ್ಮದಿಯಿಂದ ಇಲ್ಲ..

ಮಂಗಳೂರು:ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಇಡಿ ಕಿರುಕುಳ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ವಿರುದ್ದ ವಿಪಕ್ಷ ಉಪ ನಾಯಕ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ವ್ಯಕ್ತಿ ಅಲ್ಲ, ಒಂದು ಶಕ್ತಿ ಎಂದು ಬಿಜೆಪಿಗೆ ಗೊತ್ತಾಗಿದೆ. ಅವರ ಕಠಿಣ ಶ್ರಮ, ಸಂವಿಧಾನದ ಪ್ರೀತಿ, ತಿಳುವಳಿಕೆ, ಜ್ಞಾನ ನೋಡಿ ಬಿಜೆಪಿಗೆ ಭಯ ಶುರುವಾಗಿದೆ. ಈ ದೇಶದ ಜನತೆ ಇವ್ರ ಗುಣಗಳನ್ನು ಮೆಚ್ಚಿ ಅವರನ್ನು ಒಪ್ಪುತ್ತಾರೆ ಎಂಬ ಭಯ ಬಿಜೆಪಿಗೆ‌ ಇದೆ. ಈ ಭಯದಿಂದ ರಾಹುಲ್ ಗಾಂಧಿ ವ್ಯಕ್ತಿತ್ವಕ್ಕೆ ಕಲಂಕ‌ತರುವಂತೆ ಮಾಡ್ತಾ ಇದ್ದಾರೆ‌ ಎಂದು ಹೇಳಿದ್ದಾರೆ.

ಬೇರೆ ಬೇರೆ ರೀತಿಯಿಂದ ಅವರ ಮೇಲೆ ಅಪಪ್ರಚಾರಕ್ಕೆ ಮುಂದಾಗಿದ್ರು. ಯಾವುದು ಇವರಿಂದ ಸಾಧ್ಯ ಆಗಿರಲಿಲ್ಲ ಇದೀಗ ವ್ಯಕ್ತಿತ್ವ ಕ್ಕೆ ಕಳಂಕ‌ತರುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಜೀವ್ ಗಾಂಧಿ ಮೇಲೂ ಬೋಪೋರ್ಷ್ ಬಗ್ಗೆ ಹಗರಣ ದಾಖಲಿಸಿದ್ದರು. ಆದ್ರೆ ಮುಂದೆ ಅದು ಸುಳ್ಳು ನಿಜಾಂಶ ಏನು ಎಂದು ಗೊತ್ತಾಗಿತ್ತು. ಅದೇ ಬೋಪೋರ್ಷ್ ಪಾಕಿಸ್ತಾನದ ವಿರುದ್ದ ಹೋರಾಟದಲ್ಲಿ ಜಯ ನೀಡಿದೆ. ಇವ್ರಂತಹ ನಾಯಕನನ್ನು ನಾವು ಕಳೆದು ಕೊಂಡಿದ್ದೇವೆ ಎಂದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಇಂಟಲಿಜೆನ್ಸ್ ಸ್ವಿಚ್ ಆಫ್ ‌ಆಗಿರುತ್ತೆ. ನಮ್ಮ ದೇಶದೊಳಗೆ ಪಾಕಿಸ್ತಾನದ ಸೈನಿಕರು ಬರ್ತಾರೆ. ಪಾಕಿಸ್ತಾನದ ಸೈನಿಕರು ನಮ್ಮ ಬಂಕರ್ ನಲ್ಲಿ ಬಂದು ಕೂತ್ರು ಇವ್ರಿಗೆ ಗೋಚರ ಆಗಲ್ಲ. ಬಿಜೆಪಿ ಬಂದಾಗ ನಮ್ಮ ಇಂಟಲಿಜೆನ್ಸ್ ಗೆ ಏನು ಮಾಹಿತಿ ಇರಲ್ಲ. ಬಿಜೆಪಿ ಆಡಳಿತದಲ್ಲಿ ಪಾಕ್ ನಿಂದ 200 ಕೆ ಜಿ ಆರ್ಡಿಎಕ್ಸ್ ದೇಶಕ್ಕೆ ತಂದ್ರೂ ಇವ್ರಿಗೆ ಗೊತ್ತಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಯಾರೂ ಕೂಡಾ ನೆಮ್ಮದಿಯಿಂದ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ವರೆಗೆ ಯಾರಿಗೂ ನೆಮ್ಮದಿ ಇಲ್ಲ ಎಂದು ಕಿಡಿಕಾರಿದರು

ಇನ್ನು ಬಿಜೆಪಿ ನಾಯಕರಿಂದ ಪ್ರವಾದಿ ನಿಂದನೆ ವಿಚಾರಕ್ಕೆ ಸಂಬಂಧಿಸಿದಂತೆದೇಶಾದ್ಯಂತ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲೆಯಲ್ಲಿ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗ್ತಿದ್ದು ಈ ಬಗ್ಗೆ ಇಂಟಲಿಜೆನ್ಸ್ ಗಮನ ಹರಿಸಲಿ. ಇಲ್ಲಿ ಇವ್ರ ಸರ್ಕಾರದ ವೈಫಲ್ಯ ಇಂಟಲಿಜೆನ್ಸ್ ಏನ್ ಮಾಡ್ತಾ ಇದೆ. ನಮ್ಮ ಸಮಾಜದ ನಾಯಕರು ಯಾರು ಈ ರೀತಿಯ ನಿರ್ಧಾರ ಕೈಗೊಂಡಿಲ್ಲ. ಸೆಂಟ್ರಲ್ ಕಮೀಟಿ ಮಸೂದ್ ಹಾಜಿ, ಖಾಝಿಗಳು ಈ ಬಗ್ಗೆ ಯಾವುದೇ ಕರೆ ನೀಡಿಲ್ಲ. ಯಾರೂ ಈ ರೀತಿಯ ಪ್ರಚೋದನೆ ಕೊಡ್ತಾರೆ ಪತ್ತೆ ಹಚ್ಚಲಿ. ಯಾರು ಈ ಕೃತ್ಯ ಮಾಡ್ತಾರೆ ಪತ್ತೆ ಹಚ್ಚಲಿ. ಯಾರನ್ನೂ ಬೇಕಾದ್ರೂ ಬಂಧನ ಮಾಡಲಿ ಎಂದರು‌.

Vishwa News 24

Recent Posts

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

22 hours ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

23 hours ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

23 hours ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

24 hours ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

1 day ago

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ – vishwanews24

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…

1 day ago