ಮಂಗಳೂರು: ಸದ್ಯ ಇಡೀ ಭಾರತ ದೇಶಕ್ಕೆ ವಕ್ಸ್ ಎಂಬ ರಾಕ್ಷಸ ವಕ್ಕರಿಸಿದ್ದಾನೆ. ಈ ರಾಕ್ಷಸನ ಸಂಹಾರಕ್ಕೆ ಹಿಂದೂಗಳೆಲ್ಲರೂ ವಕ್ಸ್ ಎಂಬ ಪಹಣಿಯ ಸ್ಥಳದಲ್ಲೆಲ್ಲಾ ವರಾಹ ಸ್ವಾಮಿ ಅಥವಾ ಪಂಜುರ್ಲಿ ದೈವವನ್ನು ಪ್ರತಿಷ್ಠಾಪಿಸಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಿಂದೂಗಳಿಗೆ ಕರೆ ನೀಡಿದ್ದಾರೆ.
ವಕ್ಸ್ ಆಸ್ತಿ ವಿವಾದದ ಬಗ್ಗೆ ರಾಜ್ಯದಲ್ಲಿ ಮಾತ್ರ ಇಡೀ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಇದೀಗ ವಕ್ಸ್ ಬಗ್ಗೆ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ತಿರುಪತಿಯಲ್ಲಿ ಅಂದು ವಕ್ಸ್ ಎಂಬ ರಾಕ್ಷಸನನ್ನು ನಾಶಪಡಿಸಲಾಗದ ಸಂದರ್ಭದಲ್ಲಿ ವರಾಹಸ್ವಾಮಿಯ ಪ್ರತಿಷ್ಠೆಯಿದ್ದರಿಂದ ಯಾವುದೇ ರಾಕ್ಷಸರಿಗೆ ಅಲ್ಲಿನ ಭೂಮಿಯನ್ನು ನಾಶಪಡಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈಗಲೂ ನಾವು ವೆಂಕಟರಮಣ ಸ್ವಾಮಿಯನ್ನು ಪೂಜಿಸುತ್ತಿದ್ದೇವೆ ಎಂದರು.
ಆದ್ದರಿಂದ ಎಲ್ಲೆಲ್ಲಾ ಪಹಣಿಯಲ್ಲಿ ವಕ್ಸ್ ಎಂಬ ಹೆಸರು ವಕ್ಕರಿಸಿದೆ ಅಲ್ಲಿ ಆ ರಾಕ್ಷಸನ ವಧೆಗಾಗಿ ವರಾಹಸ್ವಾಮಿ ಅಥವಾ ನಮ್ಮ ಪಂಜುರ್ಲಿ ದೈವವನ್ನು ಪ್ರತಿಷ್ಠೆ ಮಾಡಬೇಕು. ಈ ರೀತಿ ಮಾಡಿದ್ದಲ್ಲಿ ಮಾತ್ರ ವಕ್ಸ್ ಎಂಬ ರಾಕ್ಷಸ ತನ್ನಿಂದ ತಾನಾಗಿ ನಾಶವಾಗಿ ಹೋಗುತ್ತಾನೆ ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…
ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…
ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…
ಎನ್ಸಿಇಆರ್ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್ಸಿಇಆರ್ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…
ಉಡುಪಿ: ಎಸ್.ಟಿ ಮೋರ್ಚಾದ ನೂತನ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಣೆ ಉಡುಪಿ: ಭಾರತೀಯ ಜನತಾ ಪಾರ್ಟಿಯ ಎಸ್.ಟಿ ಮೋರ್ಚಾ ಜಿಲ್ಲಾ…
ದೇಶದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪಠ್ಯ ಪರಿಷ್ಕರಣೆ.. ಮೊದಲ ಬಾರಿಗೆ NCERT 9ನೇ ಕ್ಲಾಸ್ನಲ್ಲಿ ತುರ್ತು ಪರಿಸ್ಥಿತಿ ಪಠ್ಯ…