Featured

ಮಂಗಳೂರು: ಶಾಸಕರ ಅವೈಜ್ಞಾನಿಕ ಕಾಮಗಾರಿಗಳ ಅನುಷ್ಠಾನವೇ ಇಂದಿನ ಕೃತಕ ನೆರೆ ಮತ್ತು ಭೂ ಕುಸಿತಕ್ಕೆ ಮುಖ್ಯ ಕಾರಣ  ಐವನ್‌ ಡಿʼಸೋಜಾ ಆರೋಪ – vishwanews24

ಮಂಗಳೂರು: ಶಾಸಕರ ಅವೈಜ್ಞಾನಿಕ ಕಾಮಗಾರಿಗಳ ಅನುಷ್ಠಾನವೇ ಇಂದಿನ ಕೃತಕ ನೆರೆ ಮತ್ತು ಭೂ ಕುಸಿತಕ್ಕೆ ಮುಖ್ಯ ಕಾರಣ  ಐವನ್‌ ಡಿʼಸೋಜಾ ಆರೋಪ

ಮಂಗಳೂರು: 2019 ರಿಂದ 2023ರವರೆಗೆ ರಾಜ್ಯದ ಬಿಜೆಪಿ ಆಡಳಿತ ಸರಕಾರ ಮತ್ತು ಕಳೆದ 10 ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಬಿ.ಜೆಪಿ ಆಡಳಿತದಿಂದ ನಗರದ ಏಲ್ಲಾ ರಾಜಕಾಲುವೆಗಳು ಮತ್ತು ನೀರು ಹರಿಯುವ ತೋಡುಗಳ ಅಗಲತೆಯು ಕಡಿಮೆಯಾಗಿ, ಕಳಪೆ ಕಾಮಗಾರಿಗಳನ್ನು ನಡೆಸಿ ಸರಕಾರಿ ಹಣವನ್ನು ಪೋಲು ಮಾಡುವುದರ ಮೂಲಕ ಮತ್ತು ಅವೈಜ್ಞಾನಿಕವಾಗಿ, ಮಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳ ಅನುಷ್ಠಾನವೇ ಇಂದಿನ ಕೃತಕ ನೆರೆ ಮತ್ತು ಭೂ ಕುಸಿತಕ್ಕೆ ಮುಖ್ಯ ಕಾರಣವಾಗಿರುತ್ತದೆ ಎಂದು ವಿಧಾನ ಪರಿಷತ್‌ ಶಾಸಕ ಐವನ್‌ ಡಿʼಸೋಜಾ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ ಅವರು, ಬಿಜೆಪಿಯ 9 ವರ್ಷಗಳ ಆಡಳಿತದಲ್ಲಿ ಮತ್ತು ಹತ್ತು ವರ್ಷ ಮಹಾನಗರ ಪಾಲಿಕೆ ಆಡಳಿತದಲ್ಲಿ ಯಾವುದೆಲ್ಲ ಕಾಮಗಾರಿಗಳು ನಡೆಯಲ್ಪಟ್ಟಿದೆ ಮತ್ತು ಅದರಿಂದ ನೆರ ಹಾವಳಿ ಬಾರದಂತೆ ಯಾವ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೀರಿ ? ಎಂದು ದಕ್ಷಿಣ ವಿದಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್‌ ರವರು ಸಾರ್ವಜನಿಕರಿಗೆ ಮುಖ್ಯವಾಗಿ ತಿಳಿಸಲೇಬೇಕಾಗಿದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ಮೂಲಕ ಎಲ್ಲಾ ಅನುದಾನವನ್ನು ಶಾಸಕರು ಯಾವ ಯಾವ ಕಾಮಗಾರಿಗಳಿಗೆ ವಿತರಿಸಿದ್ದಾರೆ ಎಂಬುದರ ಬಗ್ಗೆ ದಾಖಲೆಗಳನ್ನು ತಿಳಿಸಲಿ ? ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಿ 75 ಕೋಟಿ ವಿಶೇಷ ಅನುದಾನವನ್ನು ಅನುಷ್ಠಾನಗೊಳಿಸಿದ ಬಗ್ಗೆ ಮಂಗಳೂರಿನ ರಾಜಕಾಲುವೆಯಗಳು ಹಾಗೂ ಮಳೆಗಾಲದ ಕೃತಕ ನೀರು ಸರಿಯಾಗಿ ಹರಿದು ಹೋಗುವುದಕ್ಕೆ ಯಾವ ಕ್ರಮವನ್ನು ಕೈಗೊಂಡಿದ್ದೀರಿ? ಈ ಬಗ್ಗೆ ಸಂಪೂರ್ಣ ವಿವರವಾದ ಚರ್ಚೆ ನಡೆಯಲಿ ಎಂದು ಸವಾಲು ಹಾಕಿದರು.

ಮಂಗಳೂರು ನಗರದ ವಾರ್ಡ್‌ ನಂ. 25 ದೇರೆಬೈಲ್‌ ಪಶ್ಚಿಮ ಶೇಡಿಗುರಿ ಈರಿ ಪ್ರದೇಶದಲ್ಲಿ ನಿರ್ಮಿಸಿದ ರಾಜ ಕಾಲುವೆಯ ಸಣ್ಣ ಸೇತುವೆಯ ಕಾಮಗಾರಿಯೂ ಇಂದು ಏನಾಗಿದೆ ? ಇದಕ್ಕೆ ಶಾಸಕರಾದ ವೇದವ್ಯಾಸ್‌ ಕಾಮತ್‌ ರವರು ಈ ಬಗ್ಗೆ ಕೂಡಲೇ ಸ್ಥಳ ಪರಿಶೀಲನೆ ಮಾಡಿ. ಕಾಮಗಾರಿಗಳ ಬಗ್ಗೆ ವಿಶ್ಲೇಷಣೆ ಮಾಡಲಿ. ರಾಜ್ಯ ಸರಕಾರದಿಂದ ನಡೆಯುವ ಕಾಮಗಾರಿಗಳು ಶಾಸಕರಾಗಿ ನೀವು ಸೂಚಿಸಿದ ಕಾಮಗಾರಿಗಳು ನೆರೆಹಾವಳಿಯನ್ನು ತಡೆಯುವ ಕಾಮಗಾರಿಗಳ ಪಟ್ಟಿಯಲ್ಲಿ ಇದೆಯೇ? ಇದನ್ನು ಸಾರ್ವಜನಿಕರ ಗಮನಕ್ಕೆ ತನ್ನಿರಿ ಎಂದರು.

ರಾಜ್ಯ ಸರಕಾರ ಬಿಡುಕಾಸು ಬಿಡುಗಡೆ ಮಾಡಿಲ್ಲ ಎಂದು ತಾವುಗಳು ತಮ್ಮ ಪತ್ರಿಕಾ ಹೇಳಿಕೆಯ ಮುಖಾಂತರ ಸುಳ್ಳು ಆರೋಪ ಮಾಡಿದ್ದೀರಿ ತಾವುಗಳು ಶಾಸಕರಾಗಿ ಕಾರ್ಯನಿರ್ವಹಿಸಲು ಅಸಮರ್ಥರು ಎಂಬುದು ತಮ್ಮ ಹೇಳಿಕೆಯ ಮುಖಾಂತರ ಎತ್ತಿ ತೋರಿಸುತ್ತದೆ. ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆಗೆ ನಿಮ್ಮ ಪ್ರಯತ್ನವಾದರೂ ಏನು? ತಮ್ಮ ಮಹಾನಗರ ಪಾಲಿಕೆ ಅಡಳಿತದಲ್ಲಿ ಮಳೆಗಾಲದ ಮುಂಜಾಗೃತಾ ಕ್ರಮವಾಗಿ ನೀವು ಈ ಕಾಮಗಾರಿಗಳನ್ನು ನಡೆಸಬಹುದಿತ್ತಲ್ಲವೇ? ಇದೀಗ ತಮ್ಮ ಉತ್ತರವನ್ನು ಬಯಸುತ್ತೇವೆ. ಮಳೆಹಾನಿ ಕಾಮಗಾರಿಗೆ ದ.ಕ. ಜಿಲ್ಲೆಗೆ ಈಗಾಗಲೇ ರೂ.21ಕೋಟಿ ಹಣವು ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿಯಮದಂತೆ ನರೆಹಾವಳಿಯಿಂದ ಉಂಟಾದ ಎಲ್ಲಾ ನಷ್ಟಗಳಿಗೆ ಪರಿಹಾರವನ್ನು ವಿತರಿಸುವರೇ ಸಾಕಷ್ಟು ಹಣವು ಸರಕಾರದ ಖಾತೆಯಲ್ಲಿ ಇದೆ ಇನ್ನು ಮುಂದಕ್ಕೆ ಹಣದ ಅಗತ್ಯವಿದ್ದರೆ ಅದರ ಸಂಪೂರ್ಣ ಜವಬ್ದಾರಿಯನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತದೆ ಎಂದು ತಮಗೆ ತಿಳಿದಿರಲಿ.

ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ.ನಮ್ಮ ಸರಕಾರವು ಮಳೆಗಾಲದಲ್ಲಿ ಸಾರ್ವಜನಿಕರ ಜೀವಹಾನಿಯಾಗದಂತೆ ತಡೆಯಲು ಪ್ರಯತ್ನಿಸುತ್ತದೆ ಎಂದು ಐವನ್‌ ಡಿʼಸೋಜಾ ತಿಳಿಸಿದ್ದಾರೆ. ತಾವು ಶಾಸಕರಾಗಿ ಶಿಫಾರಸ್ಸು ಮಾಡಿದ ನಿಯಾಮಾವಳಿಗಳ ಪ್ರಕಾರ ಯಾವ ನಷ್ಟವನ್ನು ಪರಿಹಾರ ರೂಪದಲ್ಲಿ ನೀಡಿಲ್ಲವೆಂದು ಶಾಸಕರು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಿಕೊಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ತನಗೆ ಕೊಟ್ಟ ಕುದುರೆಯನ್ನು ಒಡಿಸಲಾರದವನು ಇನ್ನೊಬ್ಬರ ಕುದುರೆಯನ್ನು ಬಯಸುವವನು ವೀರನು ಅಲ್ಲ ಶೂರನು ಅಲ್ಲ ಈ ಬಗ್ಗೆ ಶಾಸಕರ ಅಸಮರ್ಥ ಹೇಳಿಕೆಗೆ ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರು ಪ್ರತಿಕ್ರಿಯೆ ನೀಡಿದ್ದಾರೆ.

Vishwa News 24

Recent Posts

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ – vishwanews24

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌…

9 hours ago

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ – vishwanews24

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ…

9 hours ago

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ – vishwanews24

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…

9 hours ago

ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ – vishwanews24

 ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…

10 hours ago

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ – vishwanews24

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…

10 hours ago

ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…

12 hours ago