Featured

ಮಂಗಳೂರು : ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಇತಿಹಾಸ ಇದ್ರೆ ತೋರ್ಸಿ :  ಖಾದರ್ ಸವಾಲ್ – Vishwanews24

ಮಂಗಳೂರು : ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ

ಒಂದು ಇತಿಹಾಸ ಇದ್ರೆ ತೋರ್ಸಿ :  ಖಾದರ್ ಸವಾಲ್

ಮಂಗಳೂರು: ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಇತಿಹಾಸ ಇದ್ರೆ , ಇತಿಹಾಸ ಪುಸ್ತಕದಲ್ಲಿ ಅದು ಕಾಣ ಸಿಕ್ಕರೆ ಅಥವಾ ಸಾಕ್ಷಿ ಇದ್ರೆ ನನಗೆ ತೋರಿಸುತ್ತೀರಾ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಅವರು ಸವಾಲೆಸೆದರು.

ಸಾವರ್ಕರ್ ಬ್ಯಾನರ್ ವಿವಾದದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ‘ಸಾವರ್ಕರ್ ವಿರುದ್ಧ ಕಾಂಗ್ರೆಸ್‌ಗೆ ಇರುವುದು ಒಂದು ತೆರನಾದ ಸೈದ್ಧಾಂತಿಕ ಭಿನ್ನಾಭಿಪ್ರಾಯ. ನನ್ನ ಪ್ರಶ್ನೆ ಏನು ಕೇಳಿದ್ರೆ ಅಂಡಮಾನ್ ಜೈಲಿಗೆ ಹೋಗಿ ಪಡಬಾರದ ಕಷ್ಟ ಪಟ್ಟು ಹುತಾತ್ಮರಾದವರು ದೇಶಪ್ರೇಮಿಗಳಾ? ಅಥವಾ ಬ್ರಿಟಿಷರಿಗೆ ದಯಾಪಾಲನಾ ಅರ್ಜಿ ಬರೆದು ನಾನು ನಿಮ್ಮ ಜೊತೆ ಇನ್ನು ಹೋರಾಟ ಮಾಡುವುದಿಲ್ಲ ಅಂತ ಹೇಳಿ ಹೋರಾಟ ನಿಲ್ಲಿಸಿದವರು ದೇಶಪ್ರೇಮಿಗಳಾ? ಎಂದು ಖಾರವಾಗಿ ಪ್ರಶ್ನಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಸಾವರ್ಕರ್ ಬ್ಯಾನರ್ ವಿವಾದಕ್ಕೆ ಸಂಬಂಧಿಸಿ ಮಾತನಾಡಿ ‘ ಯಾರಿಗೂ ಯಾರೂ ಹಾಕಿದ ಬ್ಯಾನರ್ ತೆಗೆಯುವ ಹಕ್ಕಿಲ್ಲ. ಆದರೆ ಹಾಕುವವರು ಪರ್ಮಿಷನ್ ತೆಗೆದುಕೊಂಡು ಹಾಕಬೇಕು. ಒಬ್ಬರು ಹಾಕಿದ ಬ್ಯಾನರ್ನ್ನು ಇನ್ನೊಬ್ಬರಿಗೆ ಹೇಳಿ ಒತ್ತಾಯಪೂರ್ವಕವಾಗಿ ಹಾಕುವ ಕ್ರಮ ಸರಿಯಲ್ಲ. ಆದರೆ ಬ್ಯಾನರ್ ಹಾಕುವವರು ಕೂಡಾ ಸದುದ್ದೇಶ ಹೊಂದಿರಬೇಕು.

ಮಂಗಳೂರು: ಅನಧಿಕೃತ ಮತ್ತು ವಿವಾದಾತ್ಮಕ ಫ್ಲೆಕ್ಸ್ ಹಾಕಿದ್ರೆ ನಿರ್ದಾಕ್ಷಿಣ್ಯ ಕ್ರಮ : ಜಿಲ್ಲಾಧಿಕಾರಿ ಸೂಚನೆ – Vishwanews24

ನಮ್ಮ ಕ್ಷೇತ್ರದಲ್ಲಿ ಹಾಗೆ ಯಾರೂ ಕೂಡಾ ತೆಗೆಯುವ ಅವಕಾಶ ಇರಲಿಲ್ಲ. ಬ್ಯಾನರ್ ತೆಗೆಯಲು ಜನಸಾಮಾನ್ಯನು , ಸಂಘ- ಸಂಸ್ಥೆಗಳು ಅದನ್ನು ತೆಗಿಲಿಕ್ಕೆ ಹೇಳಿಲ್ಲ. ಪರ್ಮಿಷನ್ ತೆಗೆದುಕೊಳ್ಳದೆ ಹಾಕಿರುವುದು ತಪ್ಪು ಅದಕ್ಕೆ ತೆಗೆಸಿದ್ದಾರೆ. ಆದರೆ ನಮ್ಮಲ್ಲಿ ಯಾರೂ ಕೂಡಾ ಅದರ ವಿರುದ್ಧ ಅಪಸ್ವರ ಎತ್ತಿಲ್ಲ.

ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ‘ಸ್ವಾತಂತ್ರ್ಯಕ್ಕೆ ಕಷ್ಟ ಪಟ್ಟ, ದೇಶಕ್ಕಾಗಿ ತನ್ನ ಇಡೀ ಆಸ್ತಿ ಬರೆದುಕೊಟ್ಟ ನೆಹರೂರವರ ಫೋಟೋ ಹಾಕದೆ ಬಿಟ್ಟಿದ್ದಾರಲ್ವಾ? ಏನು ಉದ್ದೇಶ. ನಮಗೆ ಒಳ್ಳೇದೇ ಆಯಿತು ಬಿಡಿ. ಯಾರ್ಯಾರ ಫೋಟೋ ಜೊತೆ ನಮ್ಮ ನೆಹರೂರವರ ಫೋಟೋ ಇಡದೇ ಇರುವುದು. ಇಲ್ಲದಿದ್ದರೆ ಇವರ ಘನತೆ ಕಡಿಮೆ ಆಗುತ್ತಿತ್ತು’ ಎಂದು ವ್ಯಂಗ್ಯವಾಡಿದರು.

 

Vishwa News 24

Recent Posts

ಮಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ಅಡುಗೆ ಸೇವಾ ಘಟಕವನ್ನು ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು -vishwanews24

ಮಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ಅಡುಗೆ ಸೇವಾ ಘಟಕವನ್ನು ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳೂರು : ಮಂಗಳೂರು ಸೆಂಟ್ರಲ್…

1 hour ago

ಉಡುಪಿ : ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಾಳಿ ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು -vishwanews24

ಉಡುಪಿ : ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಾಳಿ ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು ಉಡುಪಿ :…

2 hours ago

ತುಳುಕೂಟ ಉಡುಪಿ: 2026–27ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕಟ- ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ -vishwanews24

ತುಳುಕೂಟ ಉಡುಪಿ: 2026–27ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕಟ- ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ ತುಳು ಭಾಷೆ, ಸಾಹಿತ್ಯ,…

2 hours ago

ಎಲ್‌ಪಿಜಿ: ಇ-ಕೆವೈಸಿ ದಿನಾಂಕ ಆ. 23ರ ವರೆಗೆ ವಿಸ್ತರಣೆ -vishwanews24

ಎಲ್‌ಪಿಜಿ: ಇ-ಕೆವೈಸಿ ದಿನಾಂಕ ಆ. 23ರ ವರೆಗೆ ವಿಸ್ತರಣೆ ಉಡುಪಿ: ಎಲ್‌ಪಿಜಿ ಗ್ರಾಹಕರಿಗೆ ಇ-ಕೆವೈಸಿ ಪೂರ್ಣ ಗೊಳಿಸಲು ನೀಡಲಾಗಿದ್ದ ಗಡುವನ್ನು ಆ.…

2 hours ago

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಖಾಸಗಿ ಬಸ್ ; ಮೂವರು ದುರ್ಮರಣ -vishwanews24

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಖಾಸಗಿ ಬಸ್ ; ಮೂವರು ದುರ್ಮರಣ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ…

2 hours ago

ಕಡಬ: ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ ;  ಹಿಂಬದಿ ಸವಾರನಿಗೆ ಗಂಭೀರ ಗಾಯ -vishwanews24

ಕಡಬ: ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ ;  ಹಿಂಬದಿ ಸವಾರನಿಗೆ ಗಂಭೀರ ಗಾಯ ಕಡಬ : ಗುಂಡ್ಯ-ಸುಳ್ಯ ರಾಜ್ಯ…

3 hours ago